AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಮೃತರ ಸಂಬಂಧಿ ಹೇಳಿದ್ದೇನು?

ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಳಿಯನ ಕೊಲೆ ಬಳಿಕ ರಾಜಗಿರಿಯಲ್ಲಿ ಮೃತರಾದ ನಾಗಪ್ರಸಾದ್ ಮತ್ತು ಕುಟುಂಬ, ಆತ್ಮಹತ್ಯೆಗೂ ಮುನ್ನ ತಮ್ಮ ಅಂತ್ಯಕ್ರಿಯೆಗೆಂದೇ ಒಂದು ಲಕ್ಷಕ್ಕೂ ಹೆಚ್ಚು ಹಣ ಇಟ್ಟಿತ್ತು. ಮೂವರನ್ನು ಆತ್ಮಹತ್ಯೆಗೆ ದೂಡಿದ ಬಳಿಕ ನಾಗಪ್ರಸಾದ್​​ ಪ್ರಾಣಬಿಟ್ಟಿರುವ ಶಂಕೆ ಕೂಡ ವ್ಯಕ್ತವಾಗಿದ್ದು, ಈ ನಡುವೆ ಮೃತರ ಅಂತಿವ ವಿಧಿ ವಿಧಾನಗಳು ನೂರಾರು ಕುಟುಂಬಸ್ಥರ ಸಮ್ಮುಖದಲ್ಲಿ ಜರುಗಿದೆ.

ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಮೃತರ ಸಂಬಂಧಿ ಹೇಳಿದ್ದೇನು?
ಮೃತರಿಗೆ ಅಂತಿಮ ವಿಧಿ ವಿಧಾನ ಪೂಜೆImage Credit source: Tv9 Kannada
Jagadisha B
| Edited By: |

Updated on: Feb 22, 2026 | 9:49 AM

Share

ತುಮಕೂರು, ಫೆಬ್ರವರಿ 22: ಮೊಬೈಲ್​​ ಗೀಳಿಗೆ ಬಿದ್ದಿದ್ದ ಅಳಿಯ ಅಮೋಘ ಕೀರ್ತಿ ಕೊಲೆ ಬಳಿಕ ನೊಂದು ಬಿಹಾರದ ರಾಜಗಿರಿಯಲ್ಲಿ ಆರೋಪಿ ನಾಗಪ್ರಸಾದ್ ಸೇರಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ನಾಲ್ವರ ಆತ್ಮಹತ್ಯೆ ಬಗ್ಗೆ ಮೃತರ ಸಂಬಂಧಿ ಸ್ಯಾಮ್ ಟಿವಿ9ಗೆ ಮಾಹಿತಿ ನೀಡಿದ್ದು, ಸಾಯುವ ಬಗ್ಗೆ ಇವರು ದೇವಾಲಯದಲ್ಲಿ ನಿರ್ಧರಿಸಿಯೇ ಬಂದಿದ್ದರು. ಆತ್ಮಹತ್ಯೆ ಬಳಿಕ ಅಂತ್ಯಕ್ರಿಯೆ ಮಾಡಲೆಂದೇ ಒಂದು ಲಕ್ಷದ ಹದಿನೇಳು ಸಾವಿರ ಹಣ ಬೆಡ್ ಮೇಲೆ ಕಾಣುವಂತೆ ಇಟ್ಟು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವಿಚಾರವೀಗ ಬಹಿರಂಗವಾಗಿದೆ.

ಇನ್ನು ರಾಜಗಿರಿ ಮಂದಿರದಲ್ಲಿ ಈ ನಾಲ್ವರು ತಂಗಿದ್ದ ಕೊಣೆಯಲ್ಲಿ ನಗದು,  50 ಗ್ರಾಂ ಚಿನ್ನಾಭರಣವಷ್ಟೇ ಅಲ್ಲದೆ ನಿದ್ರೆ ಮಾತ್ರೆಯೂ ಪತ್ತೆಯಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿದ್ದ ನಾಲ್ವರಲ್ಲಿ ಸುಮಂಗಲ, ಶಿಲ್ಪ ಮತ್ತು ಶೃತ ಬಾಯಿಗೆ ಟೇಪ್ ಹಾಕಲಾಗಿತ್ತು. ಆದರೆ ನಾಗಪ್ರಸಾದ್ ಬಾಯಲ್ಲಿ ಮಾತ್ರ ಟೇಪ್ ಇರಲಿಲ್ಲ. ಹೀಗಾಗಿ ಮೊದಲು ಎಲ್ಲರನ್ನು ಆತ್ಮಹತ್ಯೆಗೆ ದೂಡಿ ಬಳಿಕ ನಾಗಪ್ರಸಾದ್ ಪ್ರಾಣ ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಮಸ್ಯೆಯಾದಾಗ ನಮ್ಮನ್ನು ಸಂಪರ್ಕಿಸಬಹುದಿತ್ತು. ಖಿನ್ನತೆಯಾದಾಗ ಆತ್ಮಹತ್ತೆಯೇ ದಾರಿಯಲ್ಲ. ನಮ್ಮ ಜೊತೆ ಅವರು ಮಾತನಾಡಬಹುದಿತ್ತು ಎಂದು ಟಿವಿ9 ಎದುರು ಸ್ಯಾಮ್ ಕಣ್ಣೀರು ಹಾಕಿದ್ಧಾರೆ.

ಇದನ್ನೂ ಓದಿ: ಫ್ರೀಫೈರ್​​ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!

ತುಮಕೂರಿನಲ್ಲಿ ಮೃತರಿಗೆ ಅಂತಿಮ ವಿಧಿವಿಧಾನದ ಪೂಜೆ

ಮೃತ ಕುಟುಂಬ ಜೈನ ಸಮುದಾಯಕ್ಕೆ ಸೇರಿರುವ ಹಿನ್ನೆಲೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಜೈನ ಮಂದಿರಲ್ಲಿ ಅಂತಿಮ ವಿಧಿವಿಧಾನ ಪೂಜೆಗಳನ್ನು ನಡೆಸಲಾಗಿದೆ. ಈ ವೇಳೆ ಮಾವನಿಂದ ಕೊಲೆಯಾದ ಅಮೋಘ ಕೀರ್ತಿಗೂ ಸಂಬಂಧಿಕರು ಪೂಜೆ ಸಲ್ಲಿಸಿದ್ದಾರೆ. ಸುಮಂಗಲ, ನಾಗಪ್ರಸಾದ್, ಶಿಲ್ಪ ಹಾಗೂ ಶೃತ ಶವಗಳು ರಾಜಗಿರಿಯ ಜೈನ ಮಂದಿರದ ಕೊಠಡಿಯಲ್ಲಿ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಕರ್ನಾಟಕಕ್ಕೆ ಶವಗಳನ್ನು ತರಲಾಗದ ಕಾರಣ ಸಹೋದರ ಸಂಬಂಧಿ ಅವನ್ನು ಅಲ್ಲೇ ದಫನ್ ಮಾಡಿದ್ದರು. ಈ ಹಿನ್ನೆಲೆ ನೂರಾರು ಸಂಬಂಧಿಕರ ಸಮ್ಮುಖದಲ್ಲಿ ಶ್ರೀ ಆದಿಮಾಥ ಸ್ವಾಮಿಗೆ 108 ಕಲಶಾಭಿಷೇಕ ಪೂಜೆ ಮುಖಾಂತರ ಅಂತಿಮ ವಿಧಿ ವಿಧಾನದ ಪೂಜೆ ಸಲ್ಲಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.