AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿರಲಿದೆ ಟೀಮ್ ಇಂಡಿಯಾದ ಹೊಸ ಫಿಟ್​ನೆಸ್ ಟೆಸ್ಟ್? ಇಲ್ಲಿದೆ ಮಾಹಿತಿ

ಟೀಮ್ ಇಂಡಿಯಾದಲ್ಲಿ ಇನ್ನು ಮುಂದೆ ಕೇವಲ ರನ್ ಮತ್ತು ವಿಕೆಟ್‌ಗಳು ಮಾತ್ರವಲ್ಲ, ಕಠಿಣ ಫಿಟ್​ನೆಸ್ ಟೆಸ್ಟ್​ ಪಾಸ್ ಮಾಡುವುದು ಕೂಡ ಕಡ್ಡಾಯವಾಗಲಿದೆ. ಇತ್ತೀಚಿನ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳ ವೇಳೆ ಆಟಗಾರರಲ್ಲಿ ಕಂಡುಬಂದ ಕಳಪೆ ಫೀಲ್ಡಿಂಗ್ ಮತ್ತು ಅತಿಯಾದ ಸ್ನಾಯು ಸೆಳೆತದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಆಯ್ಕೆ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ತಂದಿದೆ.

ಹೇಗಿರಲಿದೆ ಟೀಮ್ ಇಂಡಿಯಾದ ಹೊಸ ಫಿಟ್​ನೆಸ್ ಟೆಸ್ಟ್? ಇಲ್ಲಿದೆ ಮಾಹಿತಿ
Team India Image Credit source: BCCI
ಝಾಹಿರ್ ಯೂಸುಫ್
|

Updated on: Aug 08, 2026 | 9:49 AM

Share

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ಆಟಗಾರರ ಫಿಟ್​ನೆಸ್​ ವಿಚಾರದಲ್ಲಿ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ. ಇತ್ತೀಚಿನ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳ ವೇಳೆ ಆಟಗಾರರಲ್ಲಿ ಕಂಡುಬಂದ ಮೈದಾನದ ನಿಧಾನಗತಿ, ಕಳಪೆ ಫೀಲ್ಡಿಂಗ್ ಹಾಗೂ ಅತಿಯಾದ ಸ್ನಾಯು ಸೆಳೆತದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ಫಿಟ್​ನೆಸ್​ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ನೂತನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಈ ಹೊಸ ಫಿಟ್​ನೆಸ್​ ನಿಯಮಾವಳಿಗಳನ್ನು ರೂಪಿಸಿದೆ. ಇದುವರೆಗೆ ಇದ್ದ ಯೋ-ಯೋ (Yo-Yo) ಟೆಸ್ಟ್ ಮಾದರಿಯನ್ನು ಬದಿಗೊತ್ತಿ, ಇನ್ನೂ ಕಠಿಣವಾದ ಎರಡು ಹಂತದ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಏನಿದು ಹೊಸ ಫಿಟ್​ನೆಸ್ ಸೂತ್ರ?

ಇನ್ಮುಂದೆ ಭಾರತ ತಂಡಕ್ಕೆ ಆಯ್ಕೆಯಾಗಬೇಕಾದರೆ ಆಟಗಾರರು ಬ್ಯಾಕ್-ಟು-ಬ್ಯಾಕ್ ಎರಡು ಕಠಿಣ ದೈಹಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆ ಟೆಸ್ಟ್​ಗಳೆಂದರೆ…

  1. ಬ್ರಾಂಕೋ ಟೆಸ್ಟ್
  2. 2K ರನ್ ಟೆಸ್ಟ್​

ಹೇಗಿರಲಿದೆ ಫಿಟ್​ನೆಸ್ ಟೆಸ್ಟ್?

ಬ್ರಾಂಕೋ ಟೆಸ್ಟ್: ಇದು ರಗ್ಬಿ ಆಟಗಾರರು ಬಳಸುವ ಅತ್ಯಂತ ಕಠಿಣ ರನ್ನಿಂಗ್ ಟೆಸ್ಟ್ ಆಗಿದೆ.

  • ವಿಧಾನ: ಆಟಗಾರರು ಒಂದೇ ಸಮನೆ 20 ಮೀಟರ್, 40 ಮೀಟರ್ ಮತ್ತು 60 ಮೀಟರ್ ದೂರಕ್ಕೆ ಓಡಿ, ಮತ್ತೆ ವಾಪಸ್ ಬರಬೇಕು. ಇದರಲ್ಲಿ ಆಟಗಾರನು ಆರಂಭಿಕ ಗೆರೆಯಿಂದ ಹೊರಟು ಮೊದಲು 20 ಮೀಟರ್ ಓಡಿ ವಾಪಸ್ ಬರಬೇಕು, ತಕ್ಷಣವೇ 40 ಮೀಟರ್ ಓಡಿ ವಾಪಸ್ ಬರಬೇಕು ಮತ್ತು ಕೊನೆಯದಾಗಿ 60 ಮೀಟರ್ ಓಡಿ ವಾಪಸ್ ಬರಬೇಕಾಗುತ್ತದೆ. ಹೀಗೆ ಒಂದು ಸೆಟ್​ನಲ್ಲಿ ಒಟ್ಟು 240 ಮೀಟರ್‌ಗಳ ಓಟವನ್ನು ಪೂರ್ಣಗೊಳಿಸಬೇಕು.
  • ಯಾಕಾಗಿ ಈ ವಿಧಾನ: ಇಲ್ಲಿ ಪ್ರತಿ 20, 40, ಮತ್ತು 60 ಮೀಟರ್ ತಲುಪಿದಾಗಲೂ ವೇಗವನ್ನು ತಗ್ಗಿಸಿ, ತಕ್ಷಣ ತಿರುಗಿ, ಮತ್ತೆ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಆಟಗಾರರ ಶ್ವಾಸಕೋಶದ ಸಾಮರ್ಥ್ಯ ಮತ್ತು ಕಾಲಿನ ಸ್ನಾಯುಗಳ ಬಲ ತೀವ್ರವಾಗಿ ಪರೀಕ್ಷಿಸಲ್ಪಡುತ್ತದೆ.
  • ದೂರ: ಹೀಗೆ ಒಟ್ಟು 5 ಸೆಟ್‌ಗಳಲ್ಲಿ 1,200 ಮೀಟರ್ ದೂರವನ್ನು ಓಡಬೇಕು.
  • ಸಮಯದ ಮಿತಿ: ಈ ಹಿಂದೆ ಇದ್ದ 6 ನಿಮಿಷಗಳ ಸಮಯವನ್ನು ಕಡಿತಗೊಳಿಸಲಾಗಿದ್ದು, ಈಗ ಕೇವಲ 5 ನಿಮಿಷ 15 ಸೆಕೆಂಡ್‌ನಿಂದ 5 ನಿಮಿಷ 20 ಸೆಕೆಂಡ್ ಒಳಗಡೆ ಇದನ್ನು ಪೂರ್ಣಗೊಳಿಸುವುದು ಕಡ್ಡಾಯ.

2 ಕಿಲೋಮೀಟರ್ ಓಟ: ಬ್ರಾಂಕೋ ಟೆಸ್ಟ್ ಮುಗಿಸಿದ ತಕ್ಷಣವೇ ಆಟಗಾರರು ಈ ರನ್ನಿಂಗ್ ಟೆಸ್ಟ್‌ನಲ್ಲಿ ಭಾಗವಹಿಸಬೇಕು.

  • ವಿಧಾನ: ಟ್ರ್ಯಾಕ್‌ನಲ್ಲಿ ಸತತವಾಗಿ 2 ಕಿಲೋಮೀಟರ್ ದೂರವನ್ನು ಓಡಬೇಕು.
  • ಯಾಕಾಗಿ ಈ ವಿಧಾನ: ಬ್ರಾಂಕೊ ಟೆಸ್ಟ್ ಆಟಗಾರನ ತಕ್ಷಣದ ವೇಗ ಮತ್ತು ಚುರುಕುತನವನ್ನು ಪರೀಕ್ಷಿಸಿದರೆ, 2 ಕಿಲೋಮೀಟರ್ ಓಟವು ಆಟಗಾರನ ಒಟ್ಟಾರೆ ಸಾಮರ್ಥ್ಯವನ್ನು ಅಳೆಯುತ್ತದೆ. ಅಂದರೆ, ಸುದೀರ್ಘ ಸಮಯದವರೆಗೆ ಆಟಗಾರನು ದಣಿಯದೆ ಮೈದಾನದಲ್ಲಿ ಹೇಗೆ ಶ್ರಮ ಹಾಕಬಲ್ಲ ಎಂಬುದನ್ನು ಇದು ತೋರಿಸುತ್ತದೆ.
  • ದೂರ: 2 ಕಿಲೋ ಮೀಟರ್ ಓಟ.
  • ಸಮಯದ ಮಿತಿ: ಆಟಗಾರರು 2 ಕಿಲೋ ಮೀಟರ್​ ಓಟದ ದೂರವನ್ನು 9 ರಿಂದ 10 ನಿಮಿಷಗಳ ಒಳಗಾಗಿ ಕ್ರಮಿಸಬೇಕು.

ಹೊಸ ನಿಯಮದ ಪ್ರಮುಖ ಅಂಶಗಳು:

  • ಯಾರಿಗೂ ವಿನಾಯಿತಿ ಇಲ್ಲ: ಹಿರಿಯ ಆಟಗಾರರು ಅಥವಾ ಸ್ಟಾರ್ ಆಟಗಾರರು ಎಂಬ ಕಾರಣಕ್ಕೆ ಯಾರಿಗೂ ಫಿಟ್​ನೆಸ್ ಟೆಸ್ಟ್‌ನಿಂದ ರಿಯಾಯಿತಿ ಸಿಗುವುದಿಲ್ಲ.
  • ತೇರ್ಗಡೆ ಕಡ್ಡಾಯ: ಟೆಸ್ಟ್‌ನಲ್ಲಿ ಫೇಲ್ ಆದ ಆಟಗಾರರನ್ನು ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಆಯ್ಕೆಗೆ ಪರಿಗಣಿಸುವುದಿಲ್ಲ.
  • ಸರಣಿಗೂ ಮುನ್ನ ಟೆಸ್ಟ್: ಪ್ರತಿ ಅಂತರರಾಷ್ಟ್ರೀಯ ಸರಣಿ ಆರಂಭವಾಗುವ ಮುನ್ನ ಆಟಗಾರರು ಈ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಪಾಸ್ ಮಾಡುವುದು ಕಡ್ಡಾಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಸಿಸಿಐನ ಈ ಕಠಿಣ ಹೆಜ್ಜೆಯು ಟೀಮ್ ಇಂಡಿಯಾವನ್ನು ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಫಿಟ್ ಮತ್ತು ಬಲಿಷ್ಠ ತಂಡವನ್ನಾಗಿ ರೂಪಿಸುವ ಸ್ಪಷ್ಟ ಮುನ್ಸೂಚನೆಯಾಗಿದೆ. ಮುಂಬರುವ ಸರಣಿಗಳಲ್ಲಿ ಕೇವಲ ಆಟಗಾರರ ರನ್ ಮತ್ತು ವಿಕೆಟ್‌ಗಳು ಮಾತ್ರವಲ್ಲದೆ, ಅವರ ದೈಹಿಕ ಸಾಮರ್ಥ್ಯವೂ ತಂಡದಲ್ಲಿನ ಸ್ಥಾನವನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಬುಮ್ರಾ ಮುಂಬೈ ಇಂಡಿಯನ್ಸ್ ಆಟಗಾರ: ಅಪರೂಪಕ್ಕೊಮ್ಮೆ ಭಾರತದ ಪರ ಆಡ್ತಾರೆ!

ಸ್ಟಾರ್ ಆಟಗಾರರಾಗಿದ್ದರೂ ಫಿಟ್ನೆಸ್ ಇಲ್ಲದಿದ್ದರೆ ಹೊರಗುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ, ಪ್ರತಿಯೊಬ್ಬ ಆಟಗಾರನೂ ಈಗ ಮೈದಾನದ ಪ್ರದರ್ಶನದಷ್ಟೇ ತಮ್ಮ ದೈಹಿಕ ಫಿಟ್​ನೆಸ್​ ಮೇಲೂ ತೀವ್ರ ನಿಗಾ ವಹಿಸಬೇಕಾಗಿದೆ.

Follow Us
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ