Sign In

By signing in or creating an account, you agree with Associated Broadcasting Company's Terms & Conditions and Privacy Policy.

Theft in ATM : ಬ್ಯಾಂಕ್​​​ ಎಟಿಎಂ ಕೇಂದ್ರಗಳಲ್ಲಿ ಈ ರೀತಿಯೂ ಮೋಸ ನಡೆಯುತ್ತದಾ?

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವರು ಪ್ಲಾಸ್ಟರ್ ಅಂಟಿಸಿರುವುದು ಕಂಡುಬಂದಿದೆ. ಎಟಿಎಂ ಮಷೀನ್​​ನಿಂದ ನಗದು ಬಂದಿಲ್ಲವೆಂದು ಸತೀಶ ದೇಶಪಾಂಡೆ ಎಟಿಎಂ ಕೇಂದ್ರದಿಂದ ಹೊರ ಬಂದಿದ್ದರು. ಸರಿಯಾಗಿ ಅದೇ ವೇಳೆ ಆರೋಪಿಗಳು ಪ್ಲಾಸ್ಟರ್ ತೆಗೆದು ನಗದನ್ನು ತೆಗೆದುಕೊಂಡು ಹೋಗಿದ್ದಾರೆ.

Theft in ATM : ಬ್ಯಾಂಕ್​​​ ಎಟಿಎಂ ಕೇಂದ್ರಗಳಲ್ಲಿ ಈ ರೀತಿಯೂ ಮೋಸ ನಡೆಯುತ್ತದಾ?
ಬ್ಯಾಂಕ್​​​ ಎಟಿಎಂ ಕೇಂದ್ರದಲ್ಲಿ ಈ ರೀತಿಯ ವಂಚನೆಯೂ ನಡೆಯುತ್ತದಾ?
Follow us
ಸಾಧು ಶ್ರೀನಾಥ್​
|

Updated on: Feb 16, 2024 | 2:56 PM

ಕಳ್ಳರು (Thieves) ದಿನೇ ದಿನೆ ತಮ್ಮ ಬುದ್ಧಿಮತ್ತೆಯನ್ನು ಚುರುಕುಗೊಳಿಸಿಕೊಳ್ಳುತ್ತಿದ್ದಾರೆ. ತಮ್ಮ ಕುತಂತ್ರದಿಂದ ಅಮಾಯಕರಿಂದ ಹಣ ಕೀಳುತ್ತಿದ್ದಾರೆ. ಕಲ್ಪನೆಗೂ ಮೀರಿದ ರೀತಿಯಲ್ಲಿ ಹಣವನ್ನು ಎಗರಿಸುತ್ತಿದ್ದಾರೆ. ಇಲ್ಲಿಯವರೆಗೆ ಎಟಿಎಂಗಳಲ್ಲಿ (ATM) ನಾನಾ ರೀತಿಯ ವಂಚನೆಗಳನ್ನು ನೋಡಿದ್ದೇವೆ. ಎಟಿಎಂ ಯಂತ್ರವನ್ನೇ ಕದ್ದ ನಿಧಿ ಚೋರರು ಇದ್ದಾರೆ. ಇನ್ನು ಕೆಲವರು ಕ್ಲೋನಿಂಗ್‌ನಂತಹ ತಂತ್ರಜ್ಞಾನಗಳಿಂದ ವಂಚನೆಗಳನ್ನು ಎಸಗುವುದು ಕೂಡ ನಡೆದಿದೆ.

ಆದರೆ ಇತ್ತೀಚೆಗೆ ಆದಿಲಾಬಾದ್ ಜಿಲ್ಲೆಯಲ್ಲಿ (Adilabad) ಕೆಲವು ವಂಚಕರು ಹೊಸ ತಂತ್ರಜ್ಞಾನದ ಸಹಾಯದಿಂದ ಹಣ ಸಂಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ಎಟಿಎಂನಲ್ಲಿ ನಡೆದ ವಂಚನೆ ಘಟನೆಯ ಬಗ್ಗೆ ತಿಳಿದರೆ ಶಾಕ್ ಆಗುತ್ತೀರಿ. ಎಟಿಎಂನಿಂದ ಪ್ಲಾಸ್ಟರ್ ಬಳಸಿ ಹಣ ತೆಗೆದಿರುವ ಘಟನೆ ಮಾವಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿವರಗಳಿಗೆ ಹೋದರೆ… ಮಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ದಸ್ನಾಪುರದ ಎಟಿಎಂ ಯಂತ್ರದಿಂದ ಹಣ ಹೊರಬರುವ ಜಾಗದಲ್ಲಿ ಮೂವರು ದುಷ್ಕರ್ಮಿಗಳು ಪ್ಲಾಸ್ಟರ್ ಅಂಟಿಸಿದ್ದರು. ಆದರೆ ಈ ಮರಾಮೋಸವನ್ನು ಅರಿಯದ ಸತೀಶ್ ದೇಶಪಾಂಡೆ ಎಂಬವರು ಮಂಗಳವಾರ ಎಟಿಎಂ ಕೇಂದ್ರದಿಂದ 5 ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ.

ಇದನ್ನೂ ಓದಿ:  Srisailam Shiva Temple: ಶ್ರೀಶೈಲಂ ಈಶ್ವರನಿಗೆ ಚೆಂದದ ಚಿನ್ನದ ರಥ.. ನೋಡಲೆರಡು ಕಣ್ಣು ಸಾಲದು

ಆದರೆ ಸತೀಶ್ ದೇಶಪಾಂಡೆ ಅವರಿಗೆ ಖಾತೆಯಿಂದ ಹಣ ಕಡಿತವಾಗಿದೆ ಎಂಬ ಸಂದೇಶ ಬಂದಿದ್ದು, ಹಣ ಮಾತ್ರ ಬಂದಿಲ್ಲ. ಎಷ್ಟು ಹೊತ್ತಾದರೂ ಹಣ ಸಿಗದ ಹಿನ್ನೆಲೆಯಲ್ಲಿ ಎಟಿಎಂನಿಂದ ಹೊರಬಂದಿದ್ದಾರೆ ಸತೀಶ್. ಬಳಿಕ ಸಂಬಂಧಪಟ್ಟ ಬ್ಯಾಂಕ್ ಮತ್ತು ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ ನಿಲ್ಲುತ್ತಿರುವ ಜನ!

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವರು ಪ್ಲಾಸ್ಟರ್ ಅಂಟಿಸಿರುವುದು ಕಂಡುಬಂದಿದೆ. ಎಟಿಎಂ ಮಷೀನ್​​ನಿಂದ ನಗದು ಬಂದಿಲ್ಲವೆಂದು ಸತೀಶ ದೇಶಪಾಂಡೆ ಎಟಿಎಂ ಕೇಂದ್ರದಿಂದ ಹೊರ ಬಂದಿದ್ದರು. ಸರಿಯಅಗಿ ಅದೇ ವೇಳೆ ಆರೋಪಿಗಳು ಪ್ಲಾಸ್ಟರ್ ತೆಗೆದು ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾವಲ ಎಸ್‌ಐ ವಂಗ ವಿಷ್ಣುವರ್ಧನ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್