ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ ನಿಲ್ಲುತ್ತಿರುವ ಜನ!

Punganur cross Breed calf: ಜಯಲಕ್ಷ್ಮೀಪುರಂ ಗ್ರಾಮದಲ್ಲಿ ಅಪರೂಪದ ಜಾತಿಯ ಕರುವನ್ನು ಮನೆ ಮಾಲಿಕರು ಮನೆಯ ಮಗುವಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಈ ಅಪರೂಪದ ತಳಿಯನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ ನಿಲ್ಲುತ್ತಿರುವ ಜನ!
ಬೆಳೆದು ನಿಂತ ಕರುವನ್ನು ಮನೆಯ ಮಗಳಂತೆ ಕಾಣುತ್ತಿರುವ ಮಹಿಳೆ, ನೋಡಲು ಕ್ಯೂ
Follow us
|

Updated on: Feb 16, 2024 | 1:03 PM

ಪುಂಗನೂರು ಹಸುಗಳು ಅಂದರೆ ಯಾರು ತಾನೆ ಪ್ರೀತಿಸದೆ ಇರುತ್ತಾರೆ ಹೇಳಿ? ಪುಂಗನೂರು ಜಾತಿಯ ಹಸುಗಳು ಬಹಳ ಅಪರೂಪವಾಗಿ ಕಾಣಸಿಗುತ್ತವೆ. ಈ ಜಾತಿಯ ಹಸುಗಳೂ ನಶಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ದೂರದ ಹಳ್ಳಿಯ ಮಹಿಳಾ ಅರ್ಚಕರೊಬ್ಬರು ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಜನಿಸಿದ್ದಾಳೆಂದು ಪರಿಭಾವಿಸಿ, ಕರುವನ್ನು (Punganur cross Breed calf) ಹೆಣ್ಣು ಮಗುವಿನಂತೆ (Daughter) ಸಾಕುತ್ತಿದ್ದಾರೆ. ಖಮ್ಮಂ (Khammam) ಜಿಲ್ಲೆಯ ವೆಂಸೂರು ಮಂಡಲದ ಜಯಲಕ್ಷ್ಮೀಪುರಂ ಗ್ರಾಮದಲ್ಲಿ ಅಪರೂಪದ ಜಾತಿಯ ಕರುವನ್ನು ತುಂಬು ಆಪ್ಯಾಯತೆಯಿಂದ ಸಾಕಲಾಗುತ್ತಿದೆ.

ಗುಂಟ್ರು ವೆಂಕಟ ಸ್ವಾಮಿ -ತಿರುಪತಮ್ಮ ದಂಪತಿಗೆ ಒಬ್ಬ ಮಗನಿದ್ದಾನೆ. ಇವರಿಗೆ ಹೆಣ್ಣು ಮಗುವೆಂದರೆ ತುಂಬಾ ಇಷ್ಟ. ತಮಗೆ ಮಗಳು ಇಲ್ಲದಿದ್ದರೂ ಒಂದು ಹಸುವನ್ನು ತಂದು ಸಾಕುತ್ತಿದ್ದಾರೆ. ಅದೇ ಹಸುವಿಗೆ ಪಕ್ಕದ ಗ್ರಾಮದ ಪಶುವೈದ್ಯರ ನೆರವಿನಿಂದ ಚುಚ್ಚುಮದ್ದಿನ ಮೂಲಕ ಕ್ರಾಸಿಂಗ್​ ಮಾಡಿಸಿದ್ದು, ಪುಂಗನೂರು ತಳಿಯ ಹೆಣ್ಣು ಕರು ಹುಟ್ಟಿದೆ. ಇದರಿಂದ ಮನೆಯ ಯಜಮಾನಿ ತಿರುಪತಮ್ಮ ಹೇಳತೀರದ ಸಂತಸ ಅನುಭವಿಸಿದ್ದಾರೆ. ಸಾಕ್ಷಾತ್​​​ ಲಕ್ಷ್ಮೀದೇವಿ ಮನೆಗೆ ಬಂದಿದ್ದಾಳೆ. ಅದೃಷ್ಟ ಲಕ್ಷ್ಮಿ ಮನೆಗೆ ಬಂದಿದ್ದಾಳೆ ಎಂದು ನಿತ್ಯವೂ ಪೂಜಿಸುತ್ತಿದ್ದಾರೆ.

ಕರುವಿನ ಕುತ್ತಿಗೆ, ಕಾಲುಗಳು ಮತ್ತು ಹೊಟ್ಟೆ ಭಾಗಕ್ಕೆ ಮುತ್ತುಗಳನ್ನು ಕಟ್ಟಿ ಅಲಂಕರಿಸಿದ್ದಾರೆ. ಅದರ ಬಾಲ ಕೂದಲನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅವರು ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅದು ಅಪರೂಪದ ಪಂಗನೂರು ತಳಿಯ ಹಸುವಾಗಿದ್ದು, ನೋಡಲು ತುಂಬಾ ಮುದ್ದಾಗಿದೆ. ಕೇವಲ 2 ಅಡಿ ಎತ್ತರವಿದ್ದು, ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ತಿರುಗಾಡುತ್ತದೆ.

Also Read: ಆಂಧ್ರಪ್ರದೇಶ -ಸಿಂಹದ ಜತೆ ಸೆಲ್ಫಿ ತೆಗೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ

ಈ ಅಪರೂಪದ ಜಾತಿಯ ಕರುವನ್ನು ನೋಡಲು ಸಾಕಷ್ಟು ಮಂದಿ ಇವರ ಮನೆಗೆ ಬರುತ್ತಿದ್ದಾರೆ. ಮನೆ ಮಾಲಿಕರು ಹೇಳುವಂತೆ ಅವರು ಕರುವನ್ನು ಮನೆಯ ಮಗುವಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಏನೇ ಆಗಲಿ ಈ ಅಪರೂಪದ ತಳಿಯನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ