AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೋ.. ನನ್ನ ನೋಡಿನೂ ಹಾಗೇ ಹೋಗ್ತಿದ್ದೀಯಾ? ಮೀಸೆ ಚಿಗುರುವ ಮುನ್ನವೇ ರೌಡಿಸಂ

ಬೆಂಗಳೂರು: ನಮ್ಮ ಯುವಕರಿಗೆ ಈ ನಡುವೆ ಬೇಡದೇ ಇರೋ ಜಿಗರ್ ತೋರಿಸೋ ಆಸೆ. ಇನ್ನೂ ಸರಿಯಾಗಿ ಮೀಸೆಯೇ ಚಿಗುರಿರೋಲ್ಲ. ಆಗಲೇ ರೌಡಿಸಂ ಮಾಡೋಕೆ ಹೊರಟುಬಿಡ್ತಾರೆ. ಹೌದು, ಯುವಕರ ಕಚ್ಚಾಟದ ವೇಳೆ ಬಿಯರ್ ಬಾಟಲ್ ನಿಂದ ತಲೆ ಮತ್ತು ಭುಜಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿರೋ ಘಟನೆ ಕೆ.ಪಿ. ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ. ಆಗಸ್ಟ್ 24 ರ ರಾತ್ರಿ ರಾಕೇಶ್ ಎಂಬ ಯುವಕ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಚೋಳೂರುಪಾಳ್ಯದ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ಕಿರಿಕ್ […]

ಏನೋ.. ನನ್ನ ನೋಡಿನೂ ಹಾಗೇ ಹೋಗ್ತಿದ್ದೀಯಾ? ಮೀಸೆ ಚಿಗುರುವ ಮುನ್ನವೇ ರೌಡಿಸಂ
KUSHAL V
| Updated By: ಸಾಧು ಶ್ರೀನಾಥ್​|

Updated on: Aug 27, 2020 | 5:10 PM

Share

ಬೆಂಗಳೂರು: ನಮ್ಮ ಯುವಕರಿಗೆ ಈ ನಡುವೆ ಬೇಡದೇ ಇರೋ ಜಿಗರ್ ತೋರಿಸೋ ಆಸೆ. ಇನ್ನೂ ಸರಿಯಾಗಿ ಮೀಸೆಯೇ ಚಿಗುರಿರೋಲ್ಲ. ಆಗಲೇ ರೌಡಿಸಂ ಮಾಡೋಕೆ ಹೊರಟುಬಿಡ್ತಾರೆ. ಹೌದು, ಯುವಕರ ಕಚ್ಚಾಟದ ವೇಳೆ ಬಿಯರ್ ಬಾಟಲ್ ನಿಂದ ತಲೆ ಮತ್ತು ಭುಜಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿರೋ ಘಟನೆ ಕೆ.ಪಿ. ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ.

ಆಗಸ್ಟ್ 24 ರ ರಾತ್ರಿ ರಾಕೇಶ್ ಎಂಬ ಯುವಕ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಚೋಳೂರುಪಾಳ್ಯದ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ಕಿರಿಕ್ ಮಾಡಿದ್ದಾನಂತೆ. ಏನೋ.. ನನ್ನ ನೋಡಿನೂ ಹಾಗೇ ಹೋಗ್ತಿದ್ದೀಯಾ? ಅಂತಾ ರಾಕೇಶ್​ಗೆ ಆವಾಜ್​ ಹಾಕಿದ್ದಾನಂತೆ.

ಆದರೆ, ಶರತ್ ಮಾತಿಗೆ ಕಿವಿಗೊಡದ ರಾಕೇಶ್ ತನ್ನ ಪಾಡಿಗೆ ತಾನು ಮನೆ ಕಡೆ ಹೋಗೋಕೆ ಮುಂದುವರೆಸಿದ್ದಾನೆ. ಇದಕ್ಕೆ ಸಿಟ್ಟಾದ ಶರತ್​ ರಾಕೇಶ್​ನ ಹಿಂಬಾಲಿಸಿಕೊಂಡು ಬಂದು ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿದ್ದಾನಂತೆ.

ಹಲ್ಲೆ ಬಳಿಕ‌ ಶರತ್ ಅಲ್ಲಿಂದ ಕಾಲ್ಕಿತ್ತಿದ್ದಾನಂತೆ. ಇದೀಗ, ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪುಡಿ ರೌಡಿಯಾಗೋಕೆ ಹೊರಟಿರುವ ಶರತ್​ನ ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.