AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೋ.. ನನ್ನ ನೋಡಿನೂ ಹಾಗೇ ಹೋಗ್ತಿದ್ದೀಯಾ? ಮೀಸೆ ಚಿಗುರುವ ಮುನ್ನವೇ ರೌಡಿಸಂ

ಬೆಂಗಳೂರು: ನಮ್ಮ ಯುವಕರಿಗೆ ಈ ನಡುವೆ ಬೇಡದೇ ಇರೋ ಜಿಗರ್ ತೋರಿಸೋ ಆಸೆ. ಇನ್ನೂ ಸರಿಯಾಗಿ ಮೀಸೆಯೇ ಚಿಗುರಿರೋಲ್ಲ. ಆಗಲೇ ರೌಡಿಸಂ ಮಾಡೋಕೆ ಹೊರಟುಬಿಡ್ತಾರೆ. ಹೌದು, ಯುವಕರ ಕಚ್ಚಾಟದ ವೇಳೆ ಬಿಯರ್ ಬಾಟಲ್ ನಿಂದ ತಲೆ ಮತ್ತು ಭುಜಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿರೋ ಘಟನೆ ಕೆ.ಪಿ. ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ. ಆಗಸ್ಟ್ 24 ರ ರಾತ್ರಿ ರಾಕೇಶ್ ಎಂಬ ಯುವಕ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಚೋಳೂರುಪಾಳ್ಯದ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ಕಿರಿಕ್ […]

ಏನೋ.. ನನ್ನ ನೋಡಿನೂ ಹಾಗೇ ಹೋಗ್ತಿದ್ದೀಯಾ? ಮೀಸೆ ಚಿಗುರುವ ಮುನ್ನವೇ ರೌಡಿಸಂ
KUSHAL V
| Edited By: |

Updated on: Aug 27, 2020 | 5:10 PM

Share

ಬೆಂಗಳೂರು: ನಮ್ಮ ಯುವಕರಿಗೆ ಈ ನಡುವೆ ಬೇಡದೇ ಇರೋ ಜಿಗರ್ ತೋರಿಸೋ ಆಸೆ. ಇನ್ನೂ ಸರಿಯಾಗಿ ಮೀಸೆಯೇ ಚಿಗುರಿರೋಲ್ಲ. ಆಗಲೇ ರೌಡಿಸಂ ಮಾಡೋಕೆ ಹೊರಟುಬಿಡ್ತಾರೆ. ಹೌದು, ಯುವಕರ ಕಚ್ಚಾಟದ ವೇಳೆ ಬಿಯರ್ ಬಾಟಲ್ ನಿಂದ ತಲೆ ಮತ್ತು ಭುಜಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿರೋ ಘಟನೆ ಕೆ.ಪಿ. ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ.

ಆಗಸ್ಟ್ 24 ರ ರಾತ್ರಿ ರಾಕೇಶ್ ಎಂಬ ಯುವಕ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಚೋಳೂರುಪಾಳ್ಯದ ಬಳಿ ನಿಂತಿದ್ದ ಆರೋಪಿ ಶರತ್ ಎಂಬಾತ ಕಿರಿಕ್ ಮಾಡಿದ್ದಾನಂತೆ. ಏನೋ.. ನನ್ನ ನೋಡಿನೂ ಹಾಗೇ ಹೋಗ್ತಿದ್ದೀಯಾ? ಅಂತಾ ರಾಕೇಶ್​ಗೆ ಆವಾಜ್​ ಹಾಕಿದ್ದಾನಂತೆ.

ಆದರೆ, ಶರತ್ ಮಾತಿಗೆ ಕಿವಿಗೊಡದ ರಾಕೇಶ್ ತನ್ನ ಪಾಡಿಗೆ ತಾನು ಮನೆ ಕಡೆ ಹೋಗೋಕೆ ಮುಂದುವರೆಸಿದ್ದಾನೆ. ಇದಕ್ಕೆ ಸಿಟ್ಟಾದ ಶರತ್​ ರಾಕೇಶ್​ನ ಹಿಂಬಾಲಿಸಿಕೊಂಡು ಬಂದು ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿದ್ದಾನಂತೆ.

ಹಲ್ಲೆ ಬಳಿಕ‌ ಶರತ್ ಅಲ್ಲಿಂದ ಕಾಲ್ಕಿತ್ತಿದ್ದಾನಂತೆ. ಇದೀಗ, ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪುಡಿ ರೌಡಿಯಾಗೋಕೆ ಹೊರಟಿರುವ ಶರತ್​ನ ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ