AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IISc: ಜಂಟಿ ಸಂಶೋಧನೆಗಾಗಿ ಐಐಎಸ್​ಸಿಯೊಂದಿಗೆ ನೌಕಾಪಡೆ ಒಪ್ಪಂದ

‘ಆತ್ಮನಿರ್ಭರ್ ಭಾರತ’ದ ಆಶಯದೊಂದಿಗೆ ನೌಕಾಪಡೆಯನ್ನು ಸ್ವಾವಲಂಬಿಯಾಗಿಸುವ ಪ್ರಯತ್ನಕ್ಕೆ ಈ ಒಪ್ಪಂದವು ಹೊಸ ವೇಗ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

IISc: ಜಂಟಿ ಸಂಶೋಧನೆಗಾಗಿ ಐಐಎಸ್​ಸಿಯೊಂದಿಗೆ ನೌಕಾಪಡೆ ಒಪ್ಪಂದ
ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್
TV9 Web
| Edited By: |

Updated on:Jul 31, 2022 | 1:57 PM

Share

ಬೆಂಗಳೂರು: ಭಾರತೀಯ ನೌಕಾಪಡೆಯು (Indian Navy) ವೈಮಾನಿಕ ಕ್ಷೇತ್ರದಲ್ಲಿ ವೈವಿಧ್ಯಮಯ ಸಂಶೋಧನೆಗಾಗಿ (Aviation Research) ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ (Indian Institute of Science – IISc) ಒಪ್ಪಂದ ಮಾಡಿಕೊಂಡಿದೆ. ‘ಆತ್ಮನಿರ್ಭರ್ ಭಾರತ’ದ ಆಶಯದೊಂದಿಗೆ ನೌಕಾಪಡೆಯನ್ನು ಸ್ವಾವಲಂಬಿಯಾಗಿಸುವ ಪ್ರಯತ್ನಕ್ಕೆ ಈ ಒಪ್ಪಂದವು ಹೊಸ ವೇಗ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ನೌಕಾಪಡೆಯ ತಂತ್ರಜ್ಞರು ಐಐಎಸ್​ಸಿಯಲ್ಲಿರುವ ವಿಷಯ ತಜ್ಞರೊಂದಿಗೆ ನೇರವಾಗಿ ಚರ್ಚಿಸಲು, ಜಂಟಿಯಾಗಿ ಸಂಶೋಧನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಒಪ್ಪಂದ ನೆರವಾಗಲಿದೆ ಎಂದು ನೌಕಾಪಡೆ ಮತ್ತು ಐಐಎಸ್​ಸಿ ಹೊರಡಿಸಿರುವ ಜಂಟಿ ಹೇಳಿಕೆಯು ತಿಳಿಸಿದೆ.

ವೈಮಾನಿಕ ವಿನ್ಯಾಸ ಮತ್ತು ತಾಂತ್ರಿಕ ಶಿಕ್ಷಣ, ಪ್ರೊಪಲ್ಷನ್, ಉಕ್ಕಿನ ತಂತ್ರಜ್ಞಾನ, ಖನಿಜ ಮತ್ತು ಭೌತ ವಿಜ್ಞಾನ, ಲೋಹ ಅಥವಾ ಯಾವುದೇ ಸವೆಯುವಿಕೆಯ ಅಧ್ಯಯನ, ಸೆನ್ಸಾರ್​ಗಳು ಮತ್ತು ಇನ್​ಸ್ಟ್ರುಮೆಂಟೇಶನ್, ಪರಿಸರ ವಿಜ್ಞಾನ ಮತ್ತು ಎಂಜಿನಿಯರಿಂಗ್, ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್, ನ್ಯಾನೊ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಷ್ಲೇಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಐಐಎಸ್​ಸಿ ಮತ್ತು ನೌಕಾಪಡೆಯು ಮುಂದಿನ ದಿನಗಳಲ್ಲಿ ಜಂಟಿಯಾಗಿ ಸಂಶೋಧನೆ ನಡೆಸಲಿವೆ.

ಐಐಎಸ್​ಸಿಯ ಬೋಧಕರು ಮತ್ತು ನೌಕಾಪಡೆ ಅಧಿಕಾರಿಗಳ ನಡುವೆ ಅರ್ಥಪೂರ್ಣ, ನಿಯಮಿತ ಸಂವಾದಕ್ಕೂ ಈ ಒಪ್ಪಂದವು ಅವಕಾಶ ಕಲ್ಪಿಸಿಕೊಡಲಿದೆ. ಜ್ಞಾಪನಾ ಪತ್ರಕ್ಕೆ (Memorandum of Understanding – MoU) ಐಐಎಸ್​ಸಿ ರಿಜಿಸ್ಟ್ರಾರ್​ ಕ್ಯಾಪ್ಟನ್ ಶ್ರೀಧರ್ ವಾರಿಯರ್, ನೌಕಾಪಡೆಯ ಕ್ಯಾಪ್ಟನ್ ಪಿ.ವಿನಾಯಗನ್ ಅವರು ಸಹಿ ಹಾಕಿದರು. ಈ ವೇಳೆ ನೌಕಾಪಡೆಯ ಹಿರಿಯ ಅಧಿಕಾರಿಗಳಾದ ರೇರ್ ಅಡ್ಮಿರಲ್ ದೀಪಕ್ ಬನ್ಸಾಲ್, ಕಮೋಡರ್ ರಾಜಾ ವಿನೋದ್ ಉಪಸ್ಥಿತರಿದ್ದರು.

Published On - 1:57 pm, Sun, 31 July 22

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್