ಜೆಎನ್‌ಯುನಲ್ಲಿ 72 ಹೂರೇ ಚಲನಚಿತ್ರ ಪ್ರದರ್ಶನದಲ್ಲಿ ಜೈ ಶ್ರೀ ರಾಮ್ ಘೋಷಣೆ

ಚಿತ್ರ ನಿರ್ಮಾಪಕರು, ವಿವಿಎಂ ಸದಸ್ಯರು ಮತ್ತು ವೀಕ್ಷಕರು 'ಜೈ ಶ್ರೀ ರಾಮ್', 'ಹರ್ ಹರ್ ಮಹಾದೇವ್' ಮತ್ತು 'ಜೈ ಹಿಂದ್' ಘೋಷಣೆಗಳೊಂದಿಗೆ ಪ್ರದರ್ಶನ ಪ್ರಾರಂಭಿಸಿದರು.

ಜೆಎನ್‌ಯುನಲ್ಲಿ 72 ಹೂರೇ ಚಲನಚಿತ್ರ ಪ್ರದರ್ಶನದಲ್ಲಿ ಜೈ ಶ್ರೀ ರಾಮ್ ಘೋಷಣೆ
72 ಹೂರೇ
ನಯನಾ ಎಸ್​ಪಿ

Updated on: Jul 06, 2023 | 11:17 AM

ಮಂಗಳವಾರ (ಜುಲೈ 5) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ‘72 ಹೂರೇ’ (72 Hoorain) ಚಿತ್ರದ ಪ್ರದರ್ಶನಕ್ಕೆ ಹಾಜರಾಗಿದ್ದರು. ಸಂಜಯ್ ಪುರನ್ ಸಿಂಗ್ ಚೌಹಾಣ್ ನಿರ್ದೇಶಿಸಿದ ಈ ಚಲನಚಿತ್ರವು ಮತಾಂತರಿಸಲು ಮಾಡುವ ಧಾರ್ಮಿಕ ಬ್ರೈನ್ ವಾಶ್ ಅನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ ಮತ್ತು ಜುಲೈ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ವಿವೇಕಾನಂದ ವಿಚಾರ ಮಂಚ್ (ವಿವಿಎಂ) ಆಯೋಜಿಸಿದ್ದ ಸ್ಕ್ರೀನಿಂಗ್ ಸಂಜೆ 4 ಗಂಟೆಗೆ ಜೆಎನ್‌ಯುನ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರಾರಂಭವಾಯಿತು ಮತ್ತು ನಿರ್ದೇಶಕ, ನಿರ್ಮಾಪಕ ಮತ್ತು ಪತ್ನಿ ಕಿರಣ್ ದಾಗರ್, ಸಹ-ನಿರ್ಮಾಪಕರಾದ ಅಶೋಕ್ ಪಂಡಿತ್, ಗುಲಾಬ್ ಸಿಂಗ್ ತನ್ವಾರ್ ಮತ್ತು ಪ್ರಮುಖ ನಟರಲ್ಲಿ ಒಬ್ಬರಾದ ಪವನ್ ಮಲ್ಹೋತ್ರಾ ಭಾಗವಹಿಸಿದ್ದರು.

ತಂಡವು ಜೆಎನ್‌ಯು ಅನ್ನು ಸ್ಕ್ರೀನಿಂಗ್‌ಗೆ ಮೊದಲ ಸ್ಥಳವಾಗಿ ಏಕೆ ಆಯ್ಕೆ ಮಾಡಿದೆ ಎಂದು ಕೇಳಿದಾಗ, ಡಾಗರ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ, “ವಿದ್ಯಾರ್ಥಿಗಳು ಬರುವ, ಅಧ್ಯಯನ ಮಾಡುವ ಮತ್ತು ಹೋಗುವ ಅನೇಕ ವಿಶ್ವವಿದ್ಯಾಲಯಗಳಿವೆ, ಆದರೆ ಜೆಎನ್‌ಯು ವಿದ್ಯಾರ್ಥಿಗಳು ಚಳುವಳಿಗಳಿಗೆ ನಿರ್ದೇಶನವನ್ನು ನೀಡುತ್ತಾರೆ. ಚಿತ್ರದ ಬಗ್ಗೆ ವಿದ್ಯಾರ್ಥಿಗಳು ಸರಿಯಾದ ಅಭಿಪ್ರಾಯವನ್ನು ನೀಡಬಹುದು.” ಎಂದು ಹೇಳಿದರು.

ಇದನ್ನೂ ಓದಿ: ಐಐಟಿ ಬಾಂಬೆ ಶೀಘ್ರದಲ್ಲೇ ಕ್ವಾಂಟಮ್ ತಂತ್ರಜ್ಞಾನದಲ್ಲಿ ಇಂಟರ್ ಡಿಸಿಪ್ಲಿನರಿ ಡ್ಯುಯಲ್ ಪದವಿಯನ್ನು ಪರಿಚಯಿಸಲಿದೆ

“ಚಿತ್ರದೊಂದಿಗೆ ತಪ್ಪು ವಿಷಯಗಳನ್ನು ಟ್ಯಾಗ್ ಮಾಡಲಾಗುತ್ತಿದೆ, ಅದು ನಿಜವಲ್ಲ” ಎಂದು ಅವರು ಹೇಳಿದರು. ಚಿತ್ರ ನಿರ್ಮಾಪಕರು, ವಿವಿಎಂ ಸದಸ್ಯರು ಮತ್ತು ವೀಕ್ಷಕರು ‘ಜೈ ಶ್ರೀ ರಾಮ್’, ‘ಹರ್ ಹರ್ ಮಹಾದೇವ್’ ಮತ್ತು ‘ಜೈ ಹಿಂದ್’ ಘೋಷಣೆಗಳೊಂದಿಗೆ ಪ್ರದರ್ಶನ ಪ್ರಾರಂಭವಾಯಿತು. ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಸ್ಕ್ರೀನಿಂಗ್ ಅನ್ನು ಖಂಡಿಸಿದೆ ಮತ್ತು ಹೇಳಿಕೆಯಲ್ಲಿ, “ಸತ್ಯಗಳ ಹೆಸರಿನಲ್ಲಿ ಸುಳ್ಳನ್ನು ಹರಡಲು ಮತ್ತು ಕ್ಯಾಂಪಸ್ ನಲ್ಲಿ ಕೋಮುವಾದದ ಬೀಜ ಬಿಟ್ಟಳು ಪ್ರಯತ್ನಿಸಿದ ವಿವೇಕಾನಂದ ವಿಚಾರ ಮಂಚ್‌ನ ತಂತ್ರಗಳನ್ನು ನಾವು ಖಂಡಿಸುತ್ತೇವೆ.” ಎಂದು ಹೇಳಿದರು. ಆದರೆ ವಿವಿಎಂ ಪ್ರತಿನಿಧಿಯೊಬ್ಬರು ಜೆಎನ್‌ಯು ವಿದ್ಯಾರ್ಥಿಗಳಿಗೆ ಈ ಬಗ್ಗೆ ನಿರ್ಧರಿಸಲು ಚಲನಚಿತ್ರವನ್ನು ತೋರಿಸಿದ್ದಾರೆ ಎಂದು ಹೇಳಿದರು.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Thu, 6 July 23

Nayana SP

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

Follow Us