AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?

Uttarakhand Legislative Assembly Election 2022: ಇದರಿಂದ ಕೆರಳಿಕೆಂಡವಾಗಿರುವ ಬಿಜೆಪಿ ಇದೇನಿದು ದೇವರನಾಡು ಚಾರ್ಧಾಮ್​ನಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ. ಇದು ಸರ್ವತಾಸಾಧುವಲ್ಲ. ಕಾಂಗ್ರೆಸ್ ತನ್ನ ಓಲೈಕೆ ಚಾಳಿ ಮುಂದುವರಿಸಿದೆ ಎಂದು ಕಿಡಿಕಾರಿದೆ. ದೇವ ಪ್ರಯಾಗದಲ್ಲಿ ಸಂಸ್ಕೃತ ​ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗದ ಪಕ್ಷ ಇದೀಗ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವ ಮಾತನ್ನಾಡುತ್ತಿದೆ! ಎಂದು ಲೇವಡಿ

ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?
ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?
TV9 Web
| Updated By: ಸಾಧು ಶ್ರೀನಾಥ್​|

Updated on: Feb 08, 2022 | 7:09 AM

Share

ಹರಿದ್ವಾರ: ಉತ್ತರಾಖಂಡದಲ್ಲಿ ಮುಂದಿನ ವಾರವೇ ವಿಧಾನಸಭಾ ಚುನಾವಣೆ. 70 ಸದಸ್ಯರ ಉತ್ತರಾಖಂಡ ಅಸೆಂಬ್ಲಿಗೆ ಫೆಬ್ರವರಿ 14, 2022 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ (Uttarakhand Legislative Assembly Election 2022). ಆದರೆ ಮಾರ್ಚ್​ 10 ರವರಗೂ ಅಭ್ಯರ್ಥಿಗಳು ತಮ್ಮ ಹಣೆಬರಹ ಅರಿಯಲು ಕಾದುಕುಳಿತುಕೊಳ್ಳಬೇಕಾಗಿದೆ. ಈ ಮಧ್ಯೆ, ಓಲೈಕೆ ರಾಜಕೀಯ ಮೇಲಾಟ ಜೋರಾಗಿಯೇ ನಡೆದಿದೆ. ಉತ್ತರಾಖಂಡದ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು (Harish Rawat) ತಾವೇನಾದರೂ ಮುಖ್ಯಮಂತ್ರಿಯಾಗಿ ಮುಂದಿನ ಚುನಾವಣೆ ವೇಳೆ ಆಯ್ಕೆಯಾಗಿದ್ದೇ ಆದರೆ ರಾಜ್ಯದಲ್ಲಿ ಮುಸ್ಲಿಮರಿಗಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ನಿರ್ಮಿಸುವ ಭರವಸೆ ನೀಡಿದ್ದಾರೆ. ಇದನ್ನು ಅಲ್ಲಿನ ಮುಸ್ಲಿಮರೂ ಸಹ ಗಂಭೀರವಾಗಿ ಪರಿಗಣಿಸಿದ್ದು, ಹರೀಶ್ ರಾವತ್ ಹೇಳಿಕೆಯಿಂದ ಆನಂದತುಂದಿಲಿತರಾಗಿದ್ದು, ಕಾಂಗ್ರೆಸ್ ನಾಯಕ ಅಕೀಲ್ ಅಹಮದ್ ಸಾಹಸ್​ಪುರ ವಿಧಾನಸಭಾ ಕ್ಷೇತ್ರದಿಂದ (Sahaspur constituency) ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್​ ತೆಗೆದುಕೊಂಡಿದ್ದಾರೆ. ​ಹರೀಶ್ ರಾವತ್ ಅವರು ಮುಸ್ಲಿಂ ವಿಶ್ವವಿದ್ಯಾಲಯ ( Muslim University) ಸ್ಥಾಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ತಾವು ಸಂತುಷ್ಟರಾಗಿದ್ದು, ನಾಮಪತ್ರ ವಾಪಸ್ ಪಡೆದಿರುವುದಾಗಿ ಪ್ರಕಟಿಸಿದ್ದಾರೆ.

ಆದರೆ ದೇವಭೂಮಿ ಚಾರ್​ಧಾಮ್​ ಭೂಮಿ ಎಂದೆನಿಸಿರುವ ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡುರುವುದು ಎಷ್ಟರಮಟ್ಟಿಗೆ ಸರಿ? ಕಾಂಗ್ರೆಸ್​​ನಿಂದ ಚುನಾವಣೆ ವೇಳೆ ಮತ್ತದೇ ಓಲೈಕೆ ರಾಜಕೀಯ ಮೇಲಾಟ ನಡೆದಿದೆ ಎಂದು ಉತ್ತರಾಖಂಡದ ಬಿಜೆಪಿ ಕೆಂಡಕಾರಿದೆ. ಅಂದಹಾಗೆ 2011ರ ಜನಗಣತಿ (Census 2011) ಪ್ರಕಾರ ಉತ್ತರಾಖಂಡದಲ್ಲಿ ಮುಸಲ್ಮಾನರು ಶೇಕಡಾ 14ರಷ್ಟು ಮಂದಿ ವಾಸವಿದ್ದಾರೆ. ಹಾಗಾಗಿ ಮುಸ್ಲಿಂ ಮಕ್ಕಳಿಗಾಗಿ ತಾನು ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆ ನೀಡಿರುವುದಾಗಿ ಸಮರ್ಥಿಸಿಕೊಂಡಿದೆ.

ಏನಿದು ಕಾಂಗ್ರೆಸ್​ ಪಕ್ಷದ ಹಕೀಕತ್ತು ಎಂದು ನೋಡುವುದಾದರೆ ಸಾಹಸ್​ಪುರ ವಿಧಾನಸಭಾ ಕ್ಷೇತ್ರ ಈ ಭರವಸೆಯ ಬೆಳಕಾಗಿ ಕಂಡಿದೆ. ಅಲ್ಲಿನ ಕಾಂಗ್ರೆಸ್ ನಾಯಕ ಅಕೀಲ್ ಅಹಮದ್ ತಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಕಾಂಗ್ರೆಸ್​ ಟಿಕೆಟ್​ ಕೊಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಪ್ರಭಾವೀ ನಾಯಕ ಅಕೀಲ್ ಅಹಮದ್ ತಾನು ಸ್ವತಂತ್ರವಾಗಿ ಕಣಕ್ಕೆ ಇಳಿಯುವುದಾಗಿ ಬೆದರಿಕೆಯೊಡ್ಡಿದರು. ಇದರಿಂದ ಕಂಗಾಲಾದ ಕಾಂಗ್ರೆಸ್​ ಬೇಡಾ ಬೇಡಾ, ನಿಮ್ಮ ಬೇಡಿಕೆ ಏನಿದೆ ಹೇಳಿ ಪೂರೈಸಿಕೊಡುವುದಾಗಿ ಹೇಳಿತು. ಅದರಂತೆ ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ ಮುಂದಕ್ಕಿಟ್ಟಾಗ, ರಾಜ್ಯ ಕಾಂಗ್ರೆಸ್​ ಅಸ್ತು ಎಂದಿದೆ. ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಸಹ ತಮ್ಮ ಬೇಡಿಕೆಗೆ ಓಕೆ ಎಂದಿರುವುದಾಗಿ ಅಕೀಲ್ ಅಹಮದ್ ತಮ್ಮ ಮುಸ್ಲಿಂ ಬಾಂಧವರ ಎದುರು ಪ್ರಕಟಿಸಿ, ಹಾಗಾಗಿಯೇ ತಾವು ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಸಕಾರಣ ನೀಡಿದ್ದಾರೆ. ಅಲ್ಲಿಗೆ ದೇವಭೂಮಿ ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ಬೆಳಕು ಕಾಣುವುದಕ್ಕೆ ಸಮಯ ಒದಗಿಬಂದಿದೆ ಎಂದು ರಾಜ್ಯ ಮುಸ್ಲಿಮ್​ ನಾಯಕರು ಆಶಾಭಾವ ಹೊಂದಿದ್ದಾರೆ.

ಆದರೆ ಇದರಿಂದ ಕೆರಳಿಕೆಂಡವಾಗಿರುವ ಬಿಜೆಪಿ ಇದೇನಿದು ದೇವರನಾಡು ಚಾರ್​ಧಾಮ್​ನಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ. ಇದು ಸರ್ವತಾಸಾಧುವಲ್ಲ. ಕಾಂಗ್ರೆಸ್ ತನ್ನ ಓಲೈಕೆ ಚಾಳಿ ಮುಂದುವರಿಸಿದೆ ಎಂದು ಕಿಡಿಕಾರಿದೆ. ದೇವ ಪ್ರಯಾಗದಲ್ಲಿ ಸಂಸ್ಕೃತ ​ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗದ ಪಕ್ಷ ಇದೀಗ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವ ಮಾತನ್ನಾಡುತ್ತಿದೆ! ಎಂದು ಲೇವಡಿ ಮಾಡಿದೆ.

ಆದರೆ ಚುನಾವಣೆಯಲ್ಲಿ ತನ್ನನ್ನು ಟಾರ್ಗೆಟ್​ ಮಾಡಲು, ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಗೆ ತಾನು ಸಮ್ಮತಿಸಿರುವುದಾಗಿ ಹೇಳಲಾಗಿದೆ. ಆದರೆ ತಾನು ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಹರೀಶ್ ರಾವತ್ ಆತಂಕದ ದನಿಯಲ್ಲಿ ಹೇಳಿದ್ದಾರೆ. ಹಾಗಾದರೆ ಮಾರ್ಚ್​ 10ರವರೆಗೂ ಕಾದು ನೋಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು, ​ಹರೀಶ್ ರಾವತ್ ಮುಖ್ಯಮಂತ್ರಿಯಾಗಿ ದೇವಭೂಮಿ ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುತ್ತಾರಾ? ಅಥವಾ ಅದು ಭರವಸೆಯಾಗಿಯೇ ಉಳಿಯುತ್ತದಾ ಎಂಬುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್​ನಲ್ಲಿ ದೊಡ್ಡ ಗಾತ್ರದ MB, GB ಫೈಲ್​ಗಳನ್ನು ಕ್ಷಣಾರ್ಧದಲ್ಲಿ ಸೆಂಡ್ ಮಾಡುವ ಟ್ರಿಕ್ ಗೊತ್ತಾ?

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?