ಸಿಂಹಾಸನ ಗೆಲ್ಲಲು ಅಖಾಡಕ್ಕಿಳಿದ ದಳಪತಿಗಳು: ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ

ಹಾಸನ ಅಖಾಡದಲ್ಲಿ ದಳ ಪಾಳೆಯ ಒಗ್ಗಟ್ಟು ಪ್ರದರ್ಶನ ಮಾಡಿದೆ. ಟಿಕೆಟ್​​ಗಾಗಿ ಸ್ವರೂಪ್​ ಜೊತೆ ಜಟಾಪಟಿ ನಡೆಸುತ್ತಿದ್ದ ಭವಾನಿ ರೇವಣ್ಣ ಕಂಪ್ಲೀಟ್ ವರಸೆ ಬದಲಾಯಿಸಿ ಸ್ವರೂಪ್ ಪರ ನಿಂತಿದ್ದಾರೆ.

ಸಿಂಹಾಸನ ಗೆಲ್ಲಲು ಅಖಾಡಕ್ಕಿಳಿದ ದಳಪತಿಗಳು: ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ
ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ
ಆಯೇಷಾ ಬಾನು

Updated on: Apr 20, 2023 | 7:29 AM

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Elections 2023) ಹಾಸನ ಜೆಡಿಎಸ್ ಟಿಕೆಟ್(Hassan JDS Ticket) ಗೊಂದಲದ ಗೂಡಾಗಿತ್ತು. ಈ ಟಿಕೆಟ್​ಗಾಗಿ ಹೆಚ್​ಡಿ ದೇವೇಗೌಡರ(HD Deve Gowda) ಕುಟುಂಬದಲ್ಲಿ ಬಿರುಕು ಬಿಟ್ಟಿತ್ತು. ತಮ್ಮ ಹೆಂಡತಿ ಭವಾನಿ ರೇವಣ್ಣರನ್ನು ಸ್ಪರ್ಧೆಗೆ ಇಳಿಸಬೇಕು ಎಂದು ಹೆಚ್​ಡಿ ರೇವಣ್ಣ ಪಟ್ಟು ಹಿಡಿದಿದ್ದರು. ಆದ್ರೆ ಹೆಚ್​ಡಿ ಕುಮಾರಸ್ವಾಮಿ ಅವರು ಸ್ವರೂಪ್ ಮೇಲೆ ಒಲವು ತೋರಿಸಿದ್ದರು. ಹೀಗಾಗಿ ಇಬ್ಬರು ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುತ್ತಿತ್ತು. ಸದ್ಯ ಈಗ ಹಾಸನ ಜೆಡಿಎಸ್ ಟಿಕೆಟ್​​ನ್ನು ಸ್ವರೂಪ್​ ಅವರಿಗೆ ನೀಡಲಾಗಿದ್ದು ಎಲ್ಲಾ ಕೋಪವನ್ನು ಬಿಟ್ಟು ಹೆಚ್​ಡಿ ರೇವಣ್ಣ ಹಾಗೂ ಭವಾನಿಯವರು ಸ್ವರೂಪ್ ಪರ ಪ್ರಚಾರ ಮಾಡಲು ಅಖಾಡಕ್ಕೆ ಇಳಿದಿದ್ದಾರೆ. ಇಂದು ಸ್ವರೂಪ್ ನಾಮಪತ್ರ ಸಲ್ಲಿಸಲಿದ್ದು ಕ್ಷೇತ್ರದಲ್ಲಿಂದು ಗೌಡರ ಕುಟುಂಬದ ಶಕ್ತಿ ಪ್ರದರ್ಶನವಾಗಲಿದೆ.

ಹಾಸನ ಅಖಾಡದಲ್ಲಿ ದಳ ಪಾಳೆಯ ಒಗ್ಗಟ್ಟು ಪ್ರದರ್ಶನ ಮಾಡಿದೆ. ಟಿಕೆಟ್​​ಗಾಗಿ ಸ್ವರೂಪ್​ ಜೊತೆ ಜಟಾಪಟಿ ನಡೆಸುತ್ತಿದ್ದ ಭವಾನಿ ರೇವಣ್ಣ ಕಂಪ್ಲೀಟ್ ವರಸೆ ಬದಲಾಯಿಸಿ ಸ್ವರೂಪ್ ಪರ ನಿಂತಿದ್ದಾರೆ. ನಿನ್ನೆ(ಏಪ್ರಿಲ್ 19) ಹಾಸನದಲ್ಲಿ ನಡೆದ ಜೆಡಿಎಸ್​ ಸಭೆಯಲ್ಲಿ ಅಭ್ಯರ್ಥಿ ಸ್ವರೂಪ್ ಪರ ಭವಾನಿ ಪ್ರಚಾರ ಮಾಡಿದ್ರು. ಭವಾನಿ ಅವರು ಮಾತಿಗೆ ನಿಲ್ಲುತ್ತಿದ್ದಂತೆ ಪಕ್ಕದಲ್ಲೇ ನಿಂತ ಸ್ವರೂಪ್​, ಕಾಲಿಗೆ ಬಿದ್ದು ಆರ್ಶಿವಾದ ಪಡೆದಿದ್ರು. ಸದ್ಯ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಸ್ವರೂಪ್ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿಂದು ಗೌಡರ ಕುಟುಂಬದ ಶಕ್ತಿ ಪ್ರದರ್ಶನವಾಗಲಿದೆ. ಅಭ್ಯರ್ಥಿ ಸ್ವರೂಪ್ ಗೆಲ್ಲಿಸಲು ಗೌಡರ ಇಡೀ ಕುಟುಂಬ ಅಖಾಡಕ್ಕಿಳಿಯಲಿದೆ.

ಇದನ್ನೂ ಓದಿ: Karnataka Assembly Polls; ಸ್ವರೂಪ್ ಕೂಡ ನನ್ನ ಮಗ, ಅವನನ್ನು ಹಾಸನ ಮತದಾರರು ಗೆಲ್ಲಿಸಲೇಬೇಕು: ಭವಾನಿ ರೇವಣ್ಣ

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ರೋಡ್ ಶೋ‌ ಮೂಲಕ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ನಾಮ ಪತ್ರ ಸಲ್ಲಿಸಲಿದ್ದಾರೆ. ರೋಡ್ ಶೋ‌ನಲ್ಲಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಭಾಗಿಯಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದಾರೆ. ಈ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಲು ದಳಪತಿಗಳು ಸಜ್ಜಾಗಿದ್ದಾರೆ. ಸಾವಿರಾರು ಜನ ಸೇರಿಸಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ರಣ ಕಹಳೆ ಮೊಳಗಿಸಲಿದ್ದಾರೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:21 am, Thu, 20 April 23

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us