AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Exit Polls: 2018ರ ಎಕ್ಸಿಟ್​ ಪೋಲ್​ಗಳು ಏನು ಭವಿಷ್ಯ ನುಡಿದಿದ್ದವು, ಫಲಿತಾಂಶ ಏನಾಗಿತ್ತು? ಇಲ್ಲಿದೆ ನೋಡಿ

2018ರ ವಿಧಾನಸಭೆ ಚುನಾವಣೆಯ ನಂತರ ಎಕ್ಸಿಟ್​ ಪೋಲ್​ಗಳು ಏನು ಹೇಳಿದ್ದವು? ಫಲಿತಾಂಶ ಏನಾಯಿತು ಎಂಬ ಮಾಹಿತಿ ಇಲ್ಲಿದೆ.

Exit Polls: 2018ರ ಎಕ್ಸಿಟ್​ ಪೋಲ್​ಗಳು ಏನು ಭವಿಷ್ಯ ನುಡಿದಿದ್ದವು, ಫಲಿತಾಂಶ ಏನಾಗಿತ್ತು? ಇಲ್ಲಿದೆ ನೋಡಿ
2023ರ ಎಕ್ಸಿಟ್ ಪೋಲ್
ಗಣಪತಿ ಶರ್ಮಾ
|

Updated on: May 11, 2023 | 7:04 PM

Share

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಮುಕ್ತಾಯಗೊಂಡಿದ್ದು, ದಾಖಲೆಯ ಶೇ 73.19ರಷ್ಟು ಮತದಾನವಾಗಿದೆ. ಶನಿವಾರ ಫಲಿತಾಂಶವೂ ಪ್ರಕಟಗೊಳ್ಳಲಿದೆ. ಈ ಮಧ್ಯೆ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಹೆಚ್ಚಿನ ವರದಿಗಳು ಕಾಂಗ್ರೆಸ್​ ಪರ ಒಲವು ವ್ಯಕ್ತಪಡಿಸಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್​ಗೆ ಸರಳ ಬಹುಮತ ದೊರೆತಿದ್ದರೆ ಇನ್ನು ಕೆಲವು ಕಾಂಗ್ರೆಸ್ ಸರಳ ಬಹುಮತದ ಸನಿಹ ತಲುಪಲಿದೆ ಎಂದು ಭವಿಷ್ಯ ನುಡಿದಿವೆ. ಇನ್ನು ಕೆಲವು ಅತಂತ್ರ ವಿಧಾನಸಭೆಯ ಮುನ್ಸೂಚನೆ ನೀಡಿವೆ. ಕೆಲವೇ ಕೆಲವು ಸಮೀಕ್ಷೆಗಳು ಬಿಜೆಪಿ ಸರಳ ಬಹುಮತದ ಸನಿಹ ತಲುಪಲಿವೆ ಎಂದು ಹೇಳಿವೆ. 2018ರ ವಿಧಾನಸಭೆ ಚುನಾವಣೆಯ ನಂತರ ಎಕ್ಸಿಟ್​ ಪೋಲ್​ಗಳು ಏನು ಹೇಳಿದ್ದವು? ಫಲಿತಾಂಶ ಏನಾಯಿತು ಎಂಬ ಮಾಹಿತಿ ಇಲ್ಲಿದೆ.

2018ರ ಎಕ್ಸಿಟ್​ ಪೋಲ್​ಗಳು ಏನು ಹೇಳಿದ್ದವು?

2018ರ ಪಬ್ಲಿಕ್ ಟಿವಿ ಮತಗಟ್ಟೆ ಸಮೀಕ್ಷೆ ವರದಿ ಬಿಜೆಪಿಗೆ 85ರಿಂದ 90 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 90 -95 ಹಾಗೂ ಜೆಡಿಎಸ್​​​ಗೆ 40 – 45, ಇತರರಿಗೆ 0 – 6 ಸ್ಥಾನ ದೊರೆಯಬಹುದು ಎಂದು ಹೇಳಿತ್ತು. ಇಂಡಿಯಾ ಟುಡೇ ಸಮೀಕ್ಷೆಯು ಬಿಜೆಪಿಗೆ 78 ರಿಂದ 86 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 90 – 101 ಹಾಗೂ ಜೆಡಿಎಸ್​​​ಗೆ 34 – 43, ಇತರರಿಗೆ 2 – 12 ಸ್ಥಾನ ದೊರೆಯಬಹುದು ಎಂದು ಹೇಳಿತ್ತು.

ಬಿಜೆಪಿಗೆ 89 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 91 ಹಾಗೂ ಜೆಡಿಎಸ್​​​ಗೆ 40, ಇತರರಿಗೆ 4 ಸ್ಥಾನ ದೊರೆಯಬಹುದು ಎಂದು ಟೈಮ್ಸ್​​ ನೌ ಮತಗಟ್ಟೆ ಸಮೀಕ್ಷೆ ವರದಿ ತಿಳಿಸಿತ್ತು.

ಇದನ್ನೂ ಓದಿ: TV9 CVoter Exit Poll: ಟಿವಿ9 ಸಿವೋಟರ್ ಎಕ್ಸಿಟ್​ ಪೋಲ್​ ಪ್ರಕಟ; ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ? ಇಲ್ಲಿದೆ ವಿವರ 

ಬಿಜೆಪಿಗೆ 79 – 89 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 92 – 102 ಹಾಗೂ ಜೆಡಿಎಸ್​​​ಗೆ 34 – 42, ಇತರರಿಗೆ 1 – 7 ಸ್ಥಾನ ದೊರೆಯಬಹುದು ಎಂದು ಎಬಿಪಿ ನ್ಯೂಸ್ ಮತಗಟ್ಟೆ ಸಮೀಕ್ಷೆ ವರದಿ ತಿಳಿಸಿತ್ತು. ಬಿಜೆಪಿಗೆ 85 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 96 ಹಾಗೂ ಜೆಡಿಎಸ್​​​ಗೆ 38, ಇತರರಿಗೆ 4 ಸ್ಥಾನ ದೊರೆಯಬಹುದು ಎಂದು ಇಂಡಿಯಾ ಟಿವಿ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿತ್ತು.

ಫಲಿತಾಂಶ ಬೇರೆಯೇ ಆಗಿತ್ತು!

ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಕ್ಸಿಟ್​ ಪೋಲ್​ಗಳ ಲೆಕ್ಕಾಚಾರ ಎಲ್ಲ ತಲೆಕೆಳಗಾಗಿತ್ತು. ಬಿಜೆಪಿಗೆ 104 ಸ್ಥಾನ ದೊರೆತರೆ ಕಾಂಗ್ರೆಸ್​​ಗೆ 80, ಜೆಡಿಎಸ್ 37 ಹಾಗೂ ಇತರರಿಗೆ 3 ಸ್ಥಾನ ದೊರೆತಿದ್ದವು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ