AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಥಿಯ ಜಾಲಿ ರೈಡ್​: ದಾರಿ ಮಧ್ಯೆ ಸಿಕ್ಕ ಅಭಿಮಾನಿಗೆ ನಟನ ‘ದರ್ಶನ’..!

ಕೊಡಗು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಮನೆಗೆ ಬರ್ತಾರೆ ಅಂದ್ರೆ ಎಷ್ಟು ಖುಷಿಯಾಗಿರ ಬೇಡ. ಸಿನಿಮಾದಲ್ಲಿ ಸ್ಕ್ರೀನ್ ಮೇಲೆ ನೋಡ್ತಿದ್ದ ನಟ ಎದುರಿಗೆ ಬಂದ್ರೆ ಆನಂದಕ್ಕೆ ಪಾರವೇ ಇರೋದಿಲ್ಲ. ಅಂಥದ್ದೊಂದು ಅನುಭವ ದರ್ಶನ್ ಅಭಿಮಾನಿಯೊಬ್ಬರಿಗೆ ಆಗಿದೆ. ಬೈಕ್ ಏರಿ ಮಡಿಕೇರಿ ಕಡೆ ಜಾಲಿ ರೈಡ್​.. ನಟ ದರ್ಶನ್​ಗೆ ವಾಹನಗಳು ಅಂದ್ರೆ ತುಂಬಾ ಕ್ರೇಜ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯವೇ. ಸ್ಟಾರ್ ನಟ ದರ್ಶನ್ ತನ್ನ ಗಜಪಡೆ ಕಟ್ಟಿಕೊಂಡು ಬೆಂಗಳೂರಿನಿಂದ ಬೈಕ್ ಏರಿ ಸ್ನೇಹಿತರ ಜೊತೆ ಮಂಜಿನ ನಗರಿ […]

ಸಾರಥಿಯ ಜಾಲಿ ರೈಡ್​: ದಾರಿ ಮಧ್ಯೆ ಸಿಕ್ಕ ಅಭಿಮಾನಿಗೆ ನಟನ ‘ದರ್ಶನ’..!
ಪೃಥ್ವಿಶಂಕರ
| Edited By: |

Updated on: Nov 20, 2020 | 11:17 AM

Share

ಕೊಡಗು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಮನೆಗೆ ಬರ್ತಾರೆ ಅಂದ್ರೆ ಎಷ್ಟು ಖುಷಿಯಾಗಿರ ಬೇಡ. ಸಿನಿಮಾದಲ್ಲಿ ಸ್ಕ್ರೀನ್ ಮೇಲೆ ನೋಡ್ತಿದ್ದ ನಟ ಎದುರಿಗೆ ಬಂದ್ರೆ ಆನಂದಕ್ಕೆ ಪಾರವೇ ಇರೋದಿಲ್ಲ. ಅಂಥದ್ದೊಂದು ಅನುಭವ ದರ್ಶನ್ ಅಭಿಮಾನಿಯೊಬ್ಬರಿಗೆ ಆಗಿದೆ.

ಬೈಕ್ ಏರಿ ಮಡಿಕೇರಿ ಕಡೆ ಜಾಲಿ ರೈಡ್​.. ನಟ ದರ್ಶನ್​ಗೆ ವಾಹನಗಳು ಅಂದ್ರೆ ತುಂಬಾ ಕ್ರೇಜ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯವೇ. ಸ್ಟಾರ್ ನಟ ದರ್ಶನ್ ತನ್ನ ಗಜಪಡೆ ಕಟ್ಟಿಕೊಂಡು ಬೆಂಗಳೂರಿನಿಂದ ಬೈಕ್ ಏರಿ ಸ್ನೇಹಿತರ ಜೊತೆ ಮಂಜಿನ ನಗರಿ ಮಡಿಕೇರಿ ಕಡೆ ಜಾಲಿ ರೈಡ್​ಗೆ ಬಂದಿದ್ದಾರೆ. ನಟರಾದ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಸ್ನೇಹಿತರು ಚಾಲೆಂಜಿಂಗ್ ಸ್ಟಾರ್​ಗೆ ಸಾಥ್ ನೀಡಿದ್ದಾರೆ.

ಅಭಿಮಾನಿ ರಾಧಾ ಅನ್ನೋವ್ರು ದರ್ಶನ್​ಗೆ ಮನೆಗೆ ಅಹ್ವಾನ ನೀಡಿದ್ದಾರೆ. ಸ್ನೇಹಿತರೊಬ್ಬರ ತೋಟದಲ್ಲಿ ದರ್ಶನ್ ಕ್ರಿಕೆಟ್ ಆಟವಾಡಿ ಸಾಕಷ್ಟು ಎಂಜಾಯ್ ಕೂಡ ಮಾಡಿದ್ರು. ಇನ್ನ ದಾರಿ ಮಧ್ಯೆ ಮನೆಗೆ ಕರೆದ ಅಭಿಮಾನಿ ಮನೆಗೆ ತೆರಳಿದ ದರ್ಶನ್ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಬೆಂಗಳೂರಿನಿಂದ ಮಡಿಕೇರಿ ಕಡೆ ತೆರಳುವ ವೇಳೆ ಸೋಮವಾರಪೇಟೆ ತಾಲ್ಲೂಕಿನ ಬೈಚನಹಳ್ಳಿ ಬಳಿ ಮಡಿಕೇರಿಗೆ ತೆರಳೋ ಹೆದ್ದಾರಿ ಬಳಿ ದರ್ಶನ್ ರೆಸ್ಟ್ ಮಾಡೋಕೆ ಅಂತಾ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ನಟ ದರ್ಶನ್ ಮನೆ ಹತ್ರ ಬಂದಿದ್ದನ್ನ ನೋಡಿದ ಅಭಿಮಾನಿ ರಾಧಾ ಅನ್ನೋವ್ರು ದರ್ಶನ್ ಅವ್ರಿಗೆ ಮನೆಗೆ ಅಹ್ವಾನ ನೀಡಿದ್ದಾರೆ.

ಈ ವೇಳೆ ಅಭಿಮಾನಿ ಆಹ್ವಾನ ತಿರಸ್ಕಾರ ಮಾಡದ ದರ್ಶನ್, ರಾಧಾ ಅವ್ರ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿದ್ದ ವೃದ್ಧ ದಂಪತಿಯ ಆರೋಗ್ಯ ವಿಚಾರಿಸಿ ಅವ್ರ ಜೊತೆಗೆ ಪೋಟೋ ತೆಗೆಸಿಕೊಂಡು ಪುನಃ ತಮ್ಮ ಜಾಲಿ ರೈಡ್ ಮುಂದುವರೆಸಿದ್ದಾರೆ ದರ್ಶನ್. ಇನ್ನ ಒಮ್ಮೆ ಕರೆದ ಕೂಡಲೇ ಮನೆಗೆ ಬಂದ ಸ್ಟಾರ್ ನಟನ ಸರಳತೆಗೆ ಅಭಿಮಾನಿ ರಾಧಾ ಕೂಡ ನೆಚ್ಚಿನ ನಟನನ್ನ ನೋಡಿ ಫುಲ್ ಖುಷಿಯಾಗಿದ್ದಾರೆ.

Follow Us
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ರಾಯಚೂರಲ್ಲಿ ಪೊಲೀಸ್ ಶ್ವಾನಗಳಿಗೆ ಫ್ಯಾನ್, ಏರ್ ಕೂಲರ್​ ವ್ಯವಸ್ಥೆ
ರಾಯಚೂರಲ್ಲಿ ಪೊಲೀಸ್ ಶ್ವಾನಗಳಿಗೆ ಫ್ಯಾನ್, ಏರ್ ಕೂಲರ್​ ವ್ಯವಸ್ಥೆ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು: ದಂಧೆಕೋರರಿಗೆ ಬಿಗ್​​ ಶಾಕ್​​
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು: ದಂಧೆಕೋರರಿಗೆ ಬಿಗ್​​ ಶಾಕ್​​
ರೈಲಿನ ಮೇಲೆ ಸಾಹಸ ಮಾಡಲು ಹೋಗಿ ಯುವಕ ಸಾವು
ರೈಲಿನ ಮೇಲೆ ಸಾಹಸ ಮಾಡಲು ಹೋಗಿ ಯುವಕ ಸಾವು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ