ತಾಯಿಯ ಜತೆ ಶಿವನ ಪಾದಕ್ಕೆ ಅಡ್ಡಬಿದ್ದ ನಟಿ ಸಂಜನಾ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಜೋರಾಗಿ ವಾಸನೆ ಬಡಿಯುತ್ತಿದೆ. ಈಗಾಗಲೇ ತಮ್ಮ ವಶದಲ್ಲಿರುವ ಆರೋಪಿಗಳು ನೀಡುತ್ತಿರುವ ಹೇಳಿಕೆಗಳನ್ನಾಧರಿಸಿ ಕೆಲ ನಟಿಮಣಿಗಳಿಗೆ ಸಿಸಿಬಿ ಪೊಲೀಸರು ಬುಲಾವ್ ನೀಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನಟಿ ಸಂಜನಾ ಅವರ ಹೆಸರೂ ಕೇಳಿಬರುತ್ತಿದೆ. ಡ್ರಗ್ಸ್​ ಜಾಲದ ವಿಚಾರಣೆ ನಡೆಸುತ್ತಿರುವ CCB ಅಧಿಕಾರಿಗಳು ನಟಿ ಸಂಜನಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ವಾಸಿಸುತ್ತಿರುವ ನಟಿ ಸಂಜನಾ ತಮ್ಮ ತಾಯಿಯೊಂದಿಗೆ, ಮುರುಗೇಶ್ ಪಾಳ್ಯದಲ್ಲಿರುವ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕ್ರಿಸ್‌ಮಸ್ […]

ತಾಯಿಯ ಜತೆ ಶಿವನ ಪಾದಕ್ಕೆ ಅಡ್ಡಬಿದ್ದ ನಟಿ ಸಂಜನಾ
ಸಾಧು ಶ್ರೀನಾಥ್​

Updated on: Sep 04, 2020 | 4:16 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಜೋರಾಗಿ ವಾಸನೆ ಬಡಿಯುತ್ತಿದೆ. ಈಗಾಗಲೇ ತಮ್ಮ ವಶದಲ್ಲಿರುವ ಆರೋಪಿಗಳು ನೀಡುತ್ತಿರುವ ಹೇಳಿಕೆಗಳನ್ನಾಧರಿಸಿ ಕೆಲ ನಟಿಮಣಿಗಳಿಗೆ ಸಿಸಿಬಿ ಪೊಲೀಸರು ಬುಲಾವ್ ನೀಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನಟಿ ಸಂಜನಾ ಅವರ ಹೆಸರೂ ಕೇಳಿಬರುತ್ತಿದೆ. ಡ್ರಗ್ಸ್​ ಜಾಲದ ವಿಚಾರಣೆ ನಡೆಸುತ್ತಿರುವ CCB ಅಧಿಕಾರಿಗಳು ನಟಿ ಸಂಜನಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡುವ ಸಾಧ್ಯತೆಗಳಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ವಾಸಿಸುತ್ತಿರುವ ನಟಿ ಸಂಜನಾ ತಮ್ಮ ತಾಯಿಯೊಂದಿಗೆ, ಮುರುಗೇಶ್ ಪಾಳ್ಯದಲ್ಲಿರುವ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕ್ರಿಸ್‌ಮಸ್ ದಿನದ್ದೇ ನಾನು ಅಟೆಂಡ್ ಮಾಡಿದ ಕೊನೆಯ ಪಾರ್ಟಿ. ಎಲ್ಲ ನನ್ನ ಗ್ರಹಚಾರ, ಅಂದು ಆ ಜಾಗಕ್ಕೆ ಹೋಗಬೇಕಾಯ್ತು ಎಂದು ನಟಿ ಸಂಜನಾ ಈಗಾಗಲೇ ಪ್ರಲಾಪಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಗವಂತಾ ನನ್ನನ್ನು ಈ ಪ್ರಕರಣದಿಂದ ಪಾರು ಮಾಡಪ್ಪಾ, ಬೇಗ ಮುಕ್ತಿ ಸಿಗುವಂತೆ ಮಾಡಪ್ಪಾ ಎಂದು ಶಿವನ ಪಾದಕ್ಕೆ ಎರಗಿ, ಮೊರೆಯಿಟ್ಟಿದ್ದಾರಂತೆ.

ಇದನ್ನೂ ಓದಿ: ಕ್ರಿಸ್‌ಮಸ್ ದಿನದ್ದೇ ಕೊನೆ ಪಾರ್ಟಿ: ಗ್ರಹಚಾರ ಅಂದು ಆ ಜಾಗಕ್ಕೆ ಹೋಗಬೇಕಾಯ್ತು-ಸಂಜನಾ

ನಟಿ ಸಂಜನಾಗೂ ಡವಡವ! ಇಂದು ಸಿಸಿಬಿಯಿಂದ ನೋಟಿಸ್​ ಸಾಧ್ಯತೆ

Published On - 1:00 pm, Fri, 4 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us