AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!

ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್​ಸ್ಪೆಕ್ಟರ್​ ಅಂಜುಮಾಲಾ ನಾಯಕ್‌, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್​ ಬಳಿಕ​ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್​ ನೀಡಿದ ಮಾಹಿತಿಯಿಂದ ರಾಗಿಣಿ […]

ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!
KUSHAL V
| Edited By: |

Updated on:Sep 04, 2020 | 4:23 PM

Share

ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್​ಸ್ಪೆಕ್ಟರ್​ ಅಂಜುಮಾಲಾ ನಾಯಕ್‌, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ.

ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್​ ಬಳಿಕ​ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್​ ನೀಡಿದ ಮಾಹಿತಿಯಿಂದ ರಾಗಿಣಿ ತಗಲಾಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಬಿಯಿಂದ ನಿನ್ನೆ ರಾತ್ರಿಯಿಡಿ ರವಿಶಂಕರ್ ವಿಚಾರಣೆ ನಡೆಸಲಾಗಿದ್ದು ಆರಂಭದಲ್ಲಿ ದಾರಿ ತಪ್ಪಿಸುವ ಹೇಳಿಕೆ ನೀಡಿದ ರವಿಶಂಕರ್ ಬಳಿಕ ಆತನ ಮೊಬೈಲ್​ನಲ್ಲಿ ಪಡೆದ ಮಾಹಿತಿಯನ್ನು CCB ಅಧಿಕಾರಿಗಳು ಮುಂದಿಟ್ಟಾಗ ಎಲ್ಲವನ್ನೂ ಬಾಯಿಬಿಟ್ಟಿದ್ದಾನಂತೆ.

ಹಲವರ ಫೋಟೋಗಳನ್ನ ತೋರಿಸಿ ವಿಚಾರಿಸಿದ ಅಧಿಕಾರಿಗಳಿಗೆ ಫೋಟೋದಲ್ಲಿದ್ದವರ ಪರಿಚಯ ಇರುವುದಾಗಿ ಒಪ್ಪಿಕೊಂಡಿದ್ದಾನಂತೆ. ಈ ವೇಳೆ ಡ್ರಗ್​ ಪಾರ್ಟಿಯ ಬಗ್ಗೆ ಸಹ ಮಾಹಿತಿ ಕೊಟ್ಟ ರವಿಶಂಕರ್ ಪಾರ್ಟಿಯಲ್ಲಿ ರಾಗಿಣಿ ಜೊತೆ ಡ್ರಗ್​ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ. ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಬಗ್ಗೆ ರವಿಶಂಕರ್ ಮಾಹಿತಿ ನೀಡಿದ ಬೆನ್ನಲ್ಲೇ ಇದೇ ಆಧಾರದಲ್ಲಿ ನಿನ್ನೆ ರಾತ್ರಿಯೇ ಸರ್ಚ್​ ವಾರೆಂಟ್​ ಪಡೆದ CCB ಅಧಿಕಾರಿಗಳು ಇಂದು ಮುಂಜಾನೆಯಲ್ಲೇ ರಾಗಿಣಿ ಮನೆ ಸರ್ಚ್​ ಮಾಡೋಕೆ ಮುಂದಾಗಿದ್ದು ಎಂದು ತಿಳಿದುಬಂದಿದೆ.

ರಾತ್ರಿ ರವಿಶಂಕರ್​ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಆತನಿಗೆ ಪೊಲೀಸ್​ ಭಾಷೆಯಲ್ಲಿ ಪ್ರಶ್ನೆ ಕೇಳಿದ್ದಾರಂತೆ. ವೀಡ್​ ಬಗ್ಗೆ ಮಾಹಿತಿ ನೀಡುವಂತೆ ಪ್ರಶ್ನಿಸಿದ್ದ ಅಧಿಕಾರಿಗಳಿಗೆ ಮೊದಲು ನನಗೇನೂ ಗೊತ್ತಿಲ್ಲವೆಂದಿದ್ದ ಆರೋಪಿ ರವಿಶಂಕರ್ ಬಳಿಕ ನಿಧಾನವಾಗಿ ಹಲವು ವಿಚಾರ ಬಾಯ್ಬಿಟ್ಟನಂತೆ.

ಹೀಗೆ ಹಲವು ರೀತಿಯ ವಿಚಾರಣೆ ಬಳಿಕ ಡ್ರಗ್ಸ್​ ಬಗ್ಗೆ ಮಾಹಿತಿ ನೀಡಿದ ರವಿಶಂಕರ್​ ಇದೇ ವೇಳೆ ರಾಗಿಣಿಯ ವಿಚಾರವನ್ನೂ ಬಹಿರಂಗ ಪಡಿಸಿದ್ದಾನೆ ಎಂದು ತಿಳಿದುಬಂದಿದೆ. ನೇರವಾಗಿ ನನಗೆ ಗೊತ್ತಿಲ್ಲ. ಆದರೆ, ಕೆಲ ಪಾರ್ಟಿಗಳಲ್ಲಿ ರಾಗಿಣಿ ಮತ್ತು ನಾನು ಗಾಂಜಾ ಸೇವಿಸುತ್ತಿದ್ದೆವು. ಆ ಪಾರ್ಟಿಗಳಲ್ಲಿ ಹಲವು ಗಣ್ಯರ ಮಕ್ಕಳು ಭಾಗಿಯಾಗುತ್ತಿದ್ದರು. ಅಪರೂಪಕ್ಕೆ ಒಮ್ಮೆ ಪಾರ್ಟಿಗಳಲ್ಲಿ ಡ್ರಗ್ಸ್​​​ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ.

ಆದರೆ, ಡ್ರಗ್ಸ್​​​ ಸಪ್ಲೈ ಮಾಡುವವರು ಯಾರು ಅನ್ನೋದು ಗೊತ್ತಿಲ್ಲ. ನಾನೂ ಯಾರಿಗೂ ಡ್ರಗ್ಸ್ ಸಪ್ಲೈ ಮಾಡಿಲ್ಲವೆಂದು ಒಪ್ಪಿಕೊಂಡಿದ್ದಾನಂತೆ. ಕೇವಲ ಪಾರ್ಟಿಗಳಲ್ಲಿ ನಾನು ಡ್ರಗ್ಸ್​ ಸೇವನೆ ಮಾಡಿದ್ದೇನೆ ಎಂದು ಹೇಳಿದ್ದಾನಂತೆ.

ಇದನ್ನೂ ಓದಿ: ಸಿಸಿಬಿ ದಾಳಿ ಬಳಿಕ ಬಯಲಾಗುತ್ತಿದೆ ರೋಚಕ ಕಹಾನಿ, ರಾಗಿಣಿ ವಶಕ್ಕೆ ಪಡೆಯುವ ಸಾಧ್ಯತೆ

ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ದಾಳಿ

Published On - 12:12 pm, Fri, 4 September 20

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!