AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!

ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್​ಸ್ಪೆಕ್ಟರ್​ ಅಂಜುಮಾಲಾ ನಾಯಕ್‌, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್​ ಬಳಿಕ​ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್​ ನೀಡಿದ ಮಾಹಿತಿಯಿಂದ ರಾಗಿಣಿ […]

ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!
KUSHAL V
| Edited By: |

Updated on:Sep 04, 2020 | 4:23 PM

Share

ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್​ಸ್ಪೆಕ್ಟರ್​ ಅಂಜುಮಾಲಾ ನಾಯಕ್‌, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ.

ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್​ ಬಳಿಕ​ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್​ ನೀಡಿದ ಮಾಹಿತಿಯಿಂದ ರಾಗಿಣಿ ತಗಲಾಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಬಿಯಿಂದ ನಿನ್ನೆ ರಾತ್ರಿಯಿಡಿ ರವಿಶಂಕರ್ ವಿಚಾರಣೆ ನಡೆಸಲಾಗಿದ್ದು ಆರಂಭದಲ್ಲಿ ದಾರಿ ತಪ್ಪಿಸುವ ಹೇಳಿಕೆ ನೀಡಿದ ರವಿಶಂಕರ್ ಬಳಿಕ ಆತನ ಮೊಬೈಲ್​ನಲ್ಲಿ ಪಡೆದ ಮಾಹಿತಿಯನ್ನು CCB ಅಧಿಕಾರಿಗಳು ಮುಂದಿಟ್ಟಾಗ ಎಲ್ಲವನ್ನೂ ಬಾಯಿಬಿಟ್ಟಿದ್ದಾನಂತೆ.

ಹಲವರ ಫೋಟೋಗಳನ್ನ ತೋರಿಸಿ ವಿಚಾರಿಸಿದ ಅಧಿಕಾರಿಗಳಿಗೆ ಫೋಟೋದಲ್ಲಿದ್ದವರ ಪರಿಚಯ ಇರುವುದಾಗಿ ಒಪ್ಪಿಕೊಂಡಿದ್ದಾನಂತೆ. ಈ ವೇಳೆ ಡ್ರಗ್​ ಪಾರ್ಟಿಯ ಬಗ್ಗೆ ಸಹ ಮಾಹಿತಿ ಕೊಟ್ಟ ರವಿಶಂಕರ್ ಪಾರ್ಟಿಯಲ್ಲಿ ರಾಗಿಣಿ ಜೊತೆ ಡ್ರಗ್​ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ. ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಬಗ್ಗೆ ರವಿಶಂಕರ್ ಮಾಹಿತಿ ನೀಡಿದ ಬೆನ್ನಲ್ಲೇ ಇದೇ ಆಧಾರದಲ್ಲಿ ನಿನ್ನೆ ರಾತ್ರಿಯೇ ಸರ್ಚ್​ ವಾರೆಂಟ್​ ಪಡೆದ CCB ಅಧಿಕಾರಿಗಳು ಇಂದು ಮುಂಜಾನೆಯಲ್ಲೇ ರಾಗಿಣಿ ಮನೆ ಸರ್ಚ್​ ಮಾಡೋಕೆ ಮುಂದಾಗಿದ್ದು ಎಂದು ತಿಳಿದುಬಂದಿದೆ.

ರಾತ್ರಿ ರವಿಶಂಕರ್​ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಆತನಿಗೆ ಪೊಲೀಸ್​ ಭಾಷೆಯಲ್ಲಿ ಪ್ರಶ್ನೆ ಕೇಳಿದ್ದಾರಂತೆ. ವೀಡ್​ ಬಗ್ಗೆ ಮಾಹಿತಿ ನೀಡುವಂತೆ ಪ್ರಶ್ನಿಸಿದ್ದ ಅಧಿಕಾರಿಗಳಿಗೆ ಮೊದಲು ನನಗೇನೂ ಗೊತ್ತಿಲ್ಲವೆಂದಿದ್ದ ಆರೋಪಿ ರವಿಶಂಕರ್ ಬಳಿಕ ನಿಧಾನವಾಗಿ ಹಲವು ವಿಚಾರ ಬಾಯ್ಬಿಟ್ಟನಂತೆ.

ಹೀಗೆ ಹಲವು ರೀತಿಯ ವಿಚಾರಣೆ ಬಳಿಕ ಡ್ರಗ್ಸ್​ ಬಗ್ಗೆ ಮಾಹಿತಿ ನೀಡಿದ ರವಿಶಂಕರ್​ ಇದೇ ವೇಳೆ ರಾಗಿಣಿಯ ವಿಚಾರವನ್ನೂ ಬಹಿರಂಗ ಪಡಿಸಿದ್ದಾನೆ ಎಂದು ತಿಳಿದುಬಂದಿದೆ. ನೇರವಾಗಿ ನನಗೆ ಗೊತ್ತಿಲ್ಲ. ಆದರೆ, ಕೆಲ ಪಾರ್ಟಿಗಳಲ್ಲಿ ರಾಗಿಣಿ ಮತ್ತು ನಾನು ಗಾಂಜಾ ಸೇವಿಸುತ್ತಿದ್ದೆವು. ಆ ಪಾರ್ಟಿಗಳಲ್ಲಿ ಹಲವು ಗಣ್ಯರ ಮಕ್ಕಳು ಭಾಗಿಯಾಗುತ್ತಿದ್ದರು. ಅಪರೂಪಕ್ಕೆ ಒಮ್ಮೆ ಪಾರ್ಟಿಗಳಲ್ಲಿ ಡ್ರಗ್ಸ್​​​ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ.

ಆದರೆ, ಡ್ರಗ್ಸ್​​​ ಸಪ್ಲೈ ಮಾಡುವವರು ಯಾರು ಅನ್ನೋದು ಗೊತ್ತಿಲ್ಲ. ನಾನೂ ಯಾರಿಗೂ ಡ್ರಗ್ಸ್ ಸಪ್ಲೈ ಮಾಡಿಲ್ಲವೆಂದು ಒಪ್ಪಿಕೊಂಡಿದ್ದಾನಂತೆ. ಕೇವಲ ಪಾರ್ಟಿಗಳಲ್ಲಿ ನಾನು ಡ್ರಗ್ಸ್​ ಸೇವನೆ ಮಾಡಿದ್ದೇನೆ ಎಂದು ಹೇಳಿದ್ದಾನಂತೆ.

ಇದನ್ನೂ ಓದಿ: ಸಿಸಿಬಿ ದಾಳಿ ಬಳಿಕ ಬಯಲಾಗುತ್ತಿದೆ ರೋಚಕ ಕಹಾನಿ, ರಾಗಿಣಿ ವಶಕ್ಕೆ ಪಡೆಯುವ ಸಾಧ್ಯತೆ

ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ದಾಳಿ

Published On - 12:12 pm, Fri, 4 September 20

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್