ಯಶ್​ ಹಾದಿ ಅನುಸರಿಸಿದ ಅಲ್ಲು ಅರ್ಜುನ್​; ಪುಷ್ಪ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್​

‘ಅಲಾ ವೈಕುಂಠಪುರಂಲೋ' ಸಿನಿಮಾ ನಂತರ ಅಲ್ಲು ಅರ್ಜುನ್​ 'ಪುಷ್ಪ' ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ 'ಪುಷ್ಪ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಯಶ್​ ಹಾದಿ ಅನುಸರಿಸಿದ ಅಲ್ಲು ಅರ್ಜುನ್​; ಪುಷ್ಪ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್​
ಅಲ್ಲು ಅರ್ಜುನ್​-ಯಶ್​

Updated on: May 06, 2021 | 5:27 PM

ಬಾಹುಬಲಿ ಎರಡು ಭಾಗಗಳಲ್ಲಿ ತೆರೆಗೆ ಬಂದಿತ್ತು. ಯಶ್​ ನಟನೆಯ ಕೆಜಿಎಫ್​ ಕೂಡ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ. ಕೆಜಿಎಫ್​ ಚಾಪ್ಟರ್​-1 ಈಗಾಗಲೇ ರಿಲೀಸ್​ ಆಗಿದ್ದರೆ, ಜುಲೈನಲ್ಲಿ ಚಾಪ್ಟರ್​-2​ ರಿಲೀಸ್​ ಆಗುತ್ತಿದೆ. ಈಗ ಅಲ್ಲು ಅರ್ಜುನ್​ ಕೂಡ ಇದೇ ಹಾದಿ ಅನುಸರಿಸುತ್ತಿದ್ದಾರಂತೆ. ಪುಷ್ಪ ಸಿನಿಮಾ ಎರಡು ಪಾರ್ಟ್​ಗಳಲ್ಲಿ ತೆರೆಗೆ ಬರಲಿದೆ ಎನ್ನುವ ಸುದ್ದಿ ಹರಿದಾಡಿದೆ.

‘ಅಲಾ ವೈಕುಂಠಪುರಮುಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಲಂ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ರಂಗಸ್ಥಳಂ ಸಿನಿಮಾ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಿತ್ತು. ಪುಷ್ಪ ಸಿನಿಮಾ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಇದೇ ಆಗಸ್ಟ್​ 13ರಂದು ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಹೀಗಿರುವಾಗಲೇ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ.

ಕೆಜಿಎಫ್​ ಸಿನಿಮಾವನ್ನು ಎರಡು ಪಾರ್ಟ್​ ಮೂಲಕ ರಿಲೀಸ್​ ಮಾಡಬೇಕು ಎಂಬುದು ಪ್ರಿ-ಪ್ರೊಡಕ್ಷನ್​ ಹಂತದಲ್ಲೇ ನಿರ್ಧಾರ ಮಾಡಲಾಗಿತ್ತು. ಆದರೆ, ಪುಷ್ಪ ಸಿನಿಮಾ ಶೂಟಿಂಗ್​ ವೇಳೆ ನಿರ್ದೇಶಕ ಸುಕುಮಾರ್​ಗೆ ಈ ಆಲೋಚನೆ ಬಂದಿದೆಯಂತೆ. ಹೀಗಾಗಿ, ಈ ಸಿನಿಮಾವನ್ನು ಎರಡು ಪಾರ್ಟ್​ಗಳಲ್ಲಿ ರಿಲೀಸ್​ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಲ್ಲು ಅರ್ಜುನ್​ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೊದಲ ಪಾರ್ಟ್​ ಆಗಸ್ಟ್​ನಲ್ಲಿ ತೆರೆಗೆ ಬರಲಿದ್ದು, 2022 ಅಂತ್ಯದ ವೇಳೆಗೆ ಎರಡನೇ ಭಾಗ ತೆರೆಗೆ ಬರಲಿದೆ.

ಅಲ್ಲು ಅರ್ಜುನ್​ ನಟನೆಯ ಆರ್ಯ ಸಿನಿಮಾ ಎರಡು ಎರಡು ಪಾರ್ಟ್​ಗಳಲ್ಲಿ ತೆರೆಗೆ ಬಂದಿತ್ತು. ಆದರೆ, ಎರಡೂ ಪಾರ್ಟ್​ಗಳಿಗೆ ಒಂದಕ್ಕೊಂದು ಸಂಬಂಧ ಇರಲಿಲ್ಲ. ಇದನ್ನು ನಿರ್ದೇಶನ ಮಾಡಿದ್ದು ಸುಕುಮಾರ್​. ಬಾಹುಬಲಿ-1 ಹಾಗೂ ಬಾಹುಬಲಿ-2 ಎರಡೂ ಹಿಟ್​ ಆಗಿದ್ದವು. ಈಗ ಕೆಜಿಎಫ್​-1 ಹಿಟ್​ ಆಗಿದೆ. ಕೆಜಿಎಫ್​-2 ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪುಷ್ಪ ಸಿನಿಮಾದಲ್ಲಿ ಹೇಳುವ ವಿಚಾರ ಸಾಕಷ್ಟು ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ:  ರಾಕಿಂಗ್ ಸ್ಟಾರ್ ಯಶ್​ಗೆ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆ ಸರಿಪಡಿಸೋ ಭರವಸೆ ನೀಡಿರೊ ಸಾರಿಗೆ ಸಚಿವ ಲಕ್ಷ್ಮಣ ಸವದಿ

ಕೆಜಿಎಫ್​-2 ಹಿಂದಿ ಅವತರಣಿಕೆ​ಗೆ ಯಶ್​ ಡಬ್​ ಮಾಡ್ತಾರಾ?; ಇಲ್ಲಿದೆ ಉತ್ತರ

Published On - 5:11 pm, Thu, 6 May 21

Loading...
Unable to load recommendations.
Follow Us