ಸಿನಿಮಾ ರೀಲ್​ನಲ್ಲಿಯೇ ಮೂಡಿಬಂದ ರೆಬಲ್‌ ಸ್ಟಾರ್!

ಮೈಸೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ. ಅವರ ಅಭಿಮಾನಿಗಳು ಅಂಬರೀಶ್ ಹುಟ್ಟುಹಬ್ಬಕ್ಕೆ ಒಂದೊಂದು ರೀತಿ ವಿಶ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಆದ್ರೆ ಮೈಸೂರಿನ ಅಂಬರೀಶ್ ಅಭಿಮಾನಿ ಕಲಾವಿದನೊಬ್ಬ ಸಿನಿಮಾ ರೀಲ್​ನಲ್ಲಿ ಅಂಬರೀಶ್ ಚಿತ್ರ ಬಿಡಿಸಿ ಹುಟ್ಟು ಹಬ್ಬದ ಶುಭ ಕೋರಿದ್ದಾನೆ. ಮೈಸೂರಿನ ವಿಷ್ಯೂವಲ್ ಆರ್ಟಿಸ್ಟ್ ಕಲಾವಿದ ಯೋಗನಂದ್ ಕೈಚಳಕದಲ್ಲಿ ಅಂಬರೀಶ್ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರ ಮೂಡಿ ಬರಲು‌ ಕಲಾವಿದ ಎರಡು ದಿನಗಳ ಸಮಯ ತೆಗೆದುಕೊಂಡಿದ್ದು ಸದ್ಯ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. […]

ಸಿನಿಮಾ ರೀಲ್​ನಲ್ಲಿಯೇ ಮೂಡಿಬಂದ ರೆಬಲ್‌ ಸ್ಟಾರ್!
ಸಾಧು ಶ್ರೀನಾಥ್​

Updated on: May 29, 2020 | 1:39 PM

ಮೈಸೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ. ಅವರ ಅಭಿಮಾನಿಗಳು ಅಂಬರೀಶ್ ಹುಟ್ಟುಹಬ್ಬಕ್ಕೆ ಒಂದೊಂದು ರೀತಿ ವಿಶ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಆದ್ರೆ ಮೈಸೂರಿನ ಅಂಬರೀಶ್ ಅಭಿಮಾನಿ ಕಲಾವಿದನೊಬ್ಬ ಸಿನಿಮಾ ರೀಲ್​ನಲ್ಲಿ ಅಂಬರೀಶ್ ಚಿತ್ರ ಬಿಡಿಸಿ ಹುಟ್ಟು ಹಬ್ಬದ ಶುಭ ಕೋರಿದ್ದಾನೆ.

ಮೈಸೂರಿನ ವಿಷ್ಯೂವಲ್ ಆರ್ಟಿಸ್ಟ್ ಕಲಾವಿದ ಯೋಗನಂದ್ ಕೈಚಳಕದಲ್ಲಿ ಅಂಬರೀಶ್ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರ ಮೂಡಿ ಬರಲು‌ ಕಲಾವಿದ ಎರಡು ದಿನಗಳ ಸಮಯ ತೆಗೆದುಕೊಂಡಿದ್ದು ಸದ್ಯ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಗಮ್ ಮತ್ತು ರೀಲ್ ಹೊರತುಪಡಿಸಿ ಇನ್ಯಾವುದೇ ವಸ್ತುಗಳನ್ನು ಕಲಾವಿದ ಬಳಸಿಲ್ಲ. ಅಂಬರೀಶ್ ಅಗಲಿ ವರ್ಷ ಕಳೆದರೂ ಈ ರೀತಿಯ ಚಿತ್ರಗಳ ಮೂಲಕ ಜೀವಂತವಾಗಿಸುತ್ತಿದ್ದಾರೆ.

Published On - 1:36 pm, Fri, 29 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us