AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಕಷ್ಟವಿದ್ದರೂ ದೊಡ್ಡ ಬಂಗಲೆಯನ್ನೇ ಖರೀದಿಸಿದ ನಟಿ ಕಂಗನಾ!

ನಿನ್ನೆ ಆ ನಟ ಕಾರು ಮಾರಿದ್ದರೆ ಮತ್ತೊಬ್ಬ ನಟಿ ಭಾರೀ ಬಂಗಲೆಯನ್ನೇ ಖರೀದಿಸಿಳು! ಇದಕ್ಕೆ ಎಲ್ಲ ಅವರವರ ನಸೀಬು ಅನ್ನಬಹುದು. ಆದ್ರೆ ಕೊರೊನಾ ಕಾಲದಲ್ಲಿ ಯಾವ ನಸೀಬು ಅಲ್ವಾ? ಎಲ್ಲಾರಾ ಹಣೆಬರಹವೂ ಒಂದೇ ಅಂತಾಗಿದೆ. ಆದರೂ ತನ್ನ ಕನಸಿನ ಬಂಗಲೆಯನ್ನು ಖರೀದಿಸಿರುವ ಈ ನಟಿಯ ಸಾಹಸದ ಬಗ್ಗೆ ನೀವು ಓದಲೇಬೇಕು. ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟಿದಾಗಿನಿಂದ ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ವ್ಯವಹಾರ, ವ್ಯಾಪಾರ ಎಲ್ಲವೂ ಕುಸಿದಿದೆ. ಆದರೆ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಸಂಕಷ್ಟದ ಸಮಯದಲ್ಲೂ […]

ಕೊರೊನಾ ಸಂಕಷ್ಟವಿದ್ದರೂ ದೊಡ್ಡ ಬಂಗಲೆಯನ್ನೇ ಖರೀದಿಸಿದ ನಟಿ ಕಂಗನಾ!
ಆಯೇಷಾ ಬಾನು
| Edited By: |

Updated on:May 30, 2020 | 1:35 PM

Share

ನಿನ್ನೆ ಆ ನಟ ಕಾರು ಮಾರಿದ್ದರೆ ಮತ್ತೊಬ್ಬ ನಟಿ ಭಾರೀ ಬಂಗಲೆಯನ್ನೇ ಖರೀದಿಸಿಳು! ಇದಕ್ಕೆ ಎಲ್ಲ ಅವರವರ ನಸೀಬು ಅನ್ನಬಹುದು. ಆದ್ರೆ ಕೊರೊನಾ ಕಾಲದಲ್ಲಿ ಯಾವ ನಸೀಬು ಅಲ್ವಾ? ಎಲ್ಲಾರಾ ಹಣೆಬರಹವೂ ಒಂದೇ ಅಂತಾಗಿದೆ. ಆದರೂ ತನ್ನ ಕನಸಿನ ಬಂಗಲೆಯನ್ನು ಖರೀದಿಸಿರುವ ಈ ನಟಿಯ ಸಾಹಸದ ಬಗ್ಗೆ ನೀವು ಓದಲೇಬೇಕು.

ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟಿದಾಗಿನಿಂದ ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ವ್ಯವಹಾರ, ವ್ಯಾಪಾರ ಎಲ್ಲವೂ ಕುಸಿದಿದೆ. ಆದರೆ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಸಂಕಷ್ಟದ ಸಮಯದಲ್ಲೂ 48 ಕೋಟಿ ವೆಚ್ಚದಲ್ಲಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ಮುಕ್ತ ಬಂಗಲೆ ಖರೀದಿಸಿದ್ದಾರೆ. ಈ ಬಗ್ಗೆ ಕಂಗನಾ ಕುಟುಂಬ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನೂ ನೋಡೋಣ.

ಇದನ್ನೂ ಓದಿ: ಕಾರು ಸಾಲ ತೀರಿಸೋಕ್ಕೆ ಆಯ್ತಿಲ್ಲ ಅಂತಾ ಕಾರನ್ನು ಮಾರಿಬಿಟ್ಟ ನಟ!

1500 ಸಂಭಾವನೆಯಿಂದ 48 ಕೋಟಿ ಬಂಗಲೆಯ ಹಾದಿ: ಬಾಲಿವುಡ್‌ನಲ್ಲಿ ಪ್ರಯಾಣ ಆರಂಭಿಸಿದಾಗ ಕಂಗನಾ ರಣಾವತ್ 1,500 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಇಂದು ಅವರು ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನಲ್ಲಿ ಹಣವಿಲ್ಲದೆ ಜೀವನ ಸಾಗಿಸೋದೆ ಕಷ್ಟ. ಅಂತಹ ದೊಡ್ಡ ಜಾಗದಲ್ಲೇ ಇತ್ತೀಚೆಗೆ ಮುಂಬೈನ ಬಾಂದ್ರಾ ಬಳಿಯ ಪಾಲಿ ಹಿಲ್‌ನಲ್ಲಿ 48 ಕೋಟಿ ವೆಚ್ಚದ ಸುಂದರವಾದ ಕಚೇರಿಯನ್ನು ಖರೀದಿಸಿದ್ದಾರೆ. ಅದು ಮೂರು ಅಂತಸ್ತಿನ ವಿಶಾಲವಾದ ಬಂಗಲೆ!

ತಮ್ಮ ಅಭಿರುಚಿ, ಸೃಜನಶೀಲ ಪ್ರತಿಭೆಗೆ ಅನುಗುಣವಾಗಿ ಈ ಬಂಗಲೆಯನ್ನು ತಮ್ಮ ಕಚೇರಿಗಾಗಿ ನವೀಕರಿಸಿದ್ದಾರೆ. ಈ ಬಂಗಲೆಯಲ್ಲಿ ತಾವು ಹೊಸದಾಗಿ ಪ್ರಾರಂಭಿಸಿದ ಪ್ರೊಡಕ್ಷನ್ ಹೌಸ್ ಮತ್ತು ಮಣಿಕರ್ಣಿಕಾ ಫಿಲ್ಮ್ ಸ್ಟುಡಿಯೋನ ಕೆಲಸಕ್ಕೆ ಬಳಸಿಕೊಳ್ಳಲಿದ್ದಾರೆ. ಅಲ್ಲದೆ ಲಾಕ್‌ಡೌನ್​ಗೂ ಮುನ್ನ ಅವರು ಇಲ್ಲಿ ತಮ್ಮ ಜೀವನಶೈಲಿಗೆ ತಕ್ಕಂತಹ ಮತ್ತು ಅಲಂಕಾರಿಕ ನಿಯತಕಾಲಿಕೆಗಾಗಿ ಫೋಟೋ ಶೂಟ್ ಮಾಡಿಸಿದ್ದರು.

https://www.instagram.com/p/CAo3co2AorA/?utm_source=ig_web_copy_link

ಮನಾಲಿಯಲ್ಲಿದೆ ಮನೆ, ಇದು ಸ್ವಂತ ಸ್ಟುಡಿಯೋ! ಪ್ರಸ್ತುತ ನಟಿ ಕಂಗನಾ ತನ್ನ ಕುಟುಂಬದೊಂದಿಗೆ ಮನಾಲಿಯಲ್ಲಿರುವ ಮನೆಯಲ್ಲಿ ಕಳೆಯುತ್ತಿದ್ದಾರೆ. ನನ್ನ ಸ್ವಂತ ಸ್ಟುಡಿಯೋವನ್ನು ನಿರ್ಮಿಸುವ ಆಲೋಚನೆ ಇತ್ತು. ಆದರೆ ಈ ಮಧ್ಯೆ, ನನ್ನ ಕೆಲವು ಚಲನಚಿತ್ರಗಳು ಅಂದ್ರೆ ರಂಗೂನ್ ಮತ್ತು ಸಿಮ್ರಾನ್ ಚಿತ್ರಗಳು ಕೈಹಿಡಿಯಲಿಲ್ಲ. ಈಗ ಖರೀದಿಸಿರುವ ಆಸ್ತಿ ಮುಂಬೈನ ಹೃದಯ ಭಾಗದಲ್ಲಿದೆ. ಇದು ಕೇವಲ ಬಂಗಲೆ, ಫ್ಲಾಟ್ ಅಲ್ಲ. ಮಣಿಕರ್ಣಿಕಾ ಚಿತ್ರದ ನಂತರ ಎಲ್ಲವೂ ಬದಲಾಯಿತು. ನಾನು ಬಯಸಿದ ರೀತಿಯಲ್ಲಿ ಬಂಗಲೆಯನ್ನು ನವೀಕರಿಸಿಕೊಂಡಿದ್ದೇನೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ:

ಇಷ್ಟು ದುಬಾರಿ ಮೌಲ್ಯದ ಬಂಗಲೆ ಖರೀದಿಗೆ ಮನೆಯಲ್ಲಿ ಒಪ್ಪಲಿಲ್ಲ. ಪೋಷಕರು ಮತ್ತು ಸಹೋದರಿ ನಿನ್ನ ಪ್ರೊಡಕ್ಷನ್ ಹೌಸ್ ಕೆಲಸವನ್ನು ಬೇರೆಯಲ್ಲಿಯಾದರೂ ಮಾಡಬಹುದು. ಅಪಾರ್ಟ್​ಮೆಂಟ್ ಬಾಡಿಗೆ ತಗೂಬಹುದು ಎಂದಿದ್ದರು. ಆದರೆ ನನಗೆ ಜೀವವಿಲ್ಲದ ಗಾಜಿನ ಕೋಣೆಗಳಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದಿದ್ದೆ. ನನಗೆ ಸುತ್ತಮುತ್ತ ಗಿಡಗಳು ಸ್ವಚ್ಛ ಪರಿಸರ ಇಷ್ಟ. ನೀನು ಇಷ್ಟೊಂದು ಆಸೆಗಳನ್ನು ಹೊತ್ತು ನಿರ್ದೇಶನ ರಂಗದಲ್ಲಿ ಹೋರಾಟ ಮಾಡೋಕೆ ಹೋಗುತ್ತಿದ್ದೀಯಾ ಅಂತ ನನ್ನ ತಂಗಿ ಕಾಲೆಳೆದಿದ್ದರು.

Published On - 12:13 pm, Fri, 29 May 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?