ಕೊರೊನಾ ಭೀತಿ: 1ತಿಂಗಳು ಮೈಸೂರಿನಲ್ಲೇ ಲಾಕ್ ಡೌನ್ ಆಗಿದ್ದ ಭಾರತಿ ವಿಷ್ಣುವರ್ಧನ್

ಬೆಂಗಳೂರು: ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿರುವ ಹಿನ್ನೆಲೆ ನಟಿ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಒಂದು ತಿಂಗಳು ಲಾಕ್ ಡೌನ್ ಆಗಿದ್ದ ಪ್ರಸಂಗ ನಡೆದಿದೆ. ಕೆಲಸದ ನಿಮ್ಮಿತ್ತ ಮೈಸೂರು ತೆರಳಿದ್ದ ಭಾರತಿ ವಿಷ್ಣುವರ್ಧನ್, ಲಾಕ್ ಡೌನ್ ಮುಂದುವರೆದ ಹಿನ್ನೆಲೆ ಮೈಸೂರಿನ ಮನೆಯಲ್ಲೇ ಲಾಕ್ ಆಗಿದ್ದರು. ಅನಾರೋಗ್ಯದ ಕಾರಣ ಬೆಂಗಳೂರಿಗೆ ಹೋಗಲಾಗದ ಪರಿಸ್ಥಿತಿ ಅವರನ್ನು ತೀವ್ರವಾಗಿ ಬಾಧಿಸಿತ್ತು. ಕೊನೆಗೆ ಭಾರತಿ‌ ವಿಷ್ಣುವರ್ಧನ್ ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್‌ ಅವರಿಗೆ ತಿಳಿಸಿದಾಗ ವಿಷಯ ಇತ್ಯರ್ಥವಾಗಿದೆ. ಸಚಿವ ಸೋಮಶೇಖರ್, […]

ಕೊರೊನಾ ಭೀತಿ: 1ತಿಂಗಳು ಮೈಸೂರಿನಲ್ಲೇ ಲಾಕ್ ಡೌನ್ ಆಗಿದ್ದ ಭಾರತಿ ವಿಷ್ಣುವರ್ಧನ್
ಸಾಧು ಶ್ರೀನಾಥ್​

Updated on: Apr 16, 2020 | 4:46 PM


ಬೆಂಗಳೂರು:
ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿರುವ ಹಿನ್ನೆಲೆ ನಟಿ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಒಂದು ತಿಂಗಳು ಲಾಕ್ ಡೌನ್ ಆಗಿದ್ದ ಪ್ರಸಂಗ ನಡೆದಿದೆ.
ಕೆಲಸದ ನಿಮ್ಮಿತ್ತ ಮೈಸೂರು ತೆರಳಿದ್ದ ಭಾರತಿ ವಿಷ್ಣುವರ್ಧನ್, ಲಾಕ್ ಡೌನ್ ಮುಂದುವರೆದ ಹಿನ್ನೆಲೆ ಮೈಸೂರಿನ ಮನೆಯಲ್ಲೇ ಲಾಕ್ ಆಗಿದ್ದರು. ಅನಾರೋಗ್ಯದ ಕಾರಣ ಬೆಂಗಳೂರಿಗೆ ಹೋಗಲಾಗದ ಪರಿಸ್ಥಿತಿ ಅವರನ್ನು ತೀವ್ರವಾಗಿ ಬಾಧಿಸಿತ್ತು.
ಕೊನೆಗೆ ಭಾರತಿ‌ ವಿಷ್ಣುವರ್ಧನ್ ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್‌ ಅವರಿಗೆ ತಿಳಿಸಿದಾಗ ವಿಷಯ ಇತ್ಯರ್ಥವಾಗಿದೆ. ಸಚಿವ ಸೋಮಶೇಖರ್, ಹಿರಿಯ ನಟಿ ಭಾರತಿಗೆ ಪಾಸ್ ಹಾಗೂ ಕಾರಿನ ವ್ಯವಸ್ಥೆ ಮಾಡಿಸಿದ್ದಾರೆ.
ಜಿಲ್ಲಾಡಳಿತದಿಂದ ಪಾಸ್ ಪಡೆದು ಬೆಂಗಳೂರು ತಲುಪಿದ ಭಾರತಿ ಯಾರಿಗೂ ತೊಂದರೆ ಕೊಡಬಾರದು ಅನ್ನೋ ಉದ್ದೇಶದಿಂದ ಮೈಸೂರಿನಲ್ಲೇ ಉಳಿದುಕೊಂಡಿದ್ದೆ. ಆದ್ರೆ ಔಷಧಿಗಳು ಖಾಲಿ ಆಗಿದ್ರಿಂದ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಹೇಳಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us