‘ಅಜ್ಜಿ ಸಾವಿನ ಬಳಿಕ ಆಸ್ಪತ್ರೆಗೆ ಬರಬಾರದು ಅಂದುಕೊಂಡಿದ್ದೆ’; ಅಭಿಮಾನಿಗಾಗಿ ನಿರ್ಧಾರ ಬದಲಿಸಿದ ಧ್ರುವ ಸರ್ಜಾ

|

Updated on: Feb 18, 2023 | 4:42 PM

ಪೃಥ್ವಿರಾಜ್ ಕೋಮ ಸೇರಿದ್ದಾರೆ. ಗಾಯಾಳು ನಟ ಧ್ರುವ ಸರ್ಜ ಅಪ್ಪಟ ಅಭಿಮಾನಿ. ಹೀಗಾಗಿ, ಧ್ರುವ ಅವರು ಪೃಥ್ವಿರಾಜ್​ ಕುಟುಂಬದವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ಧ್ರುವ ಸರ್ಜಾ (Dhruva Sarja) ಅವರು ತಮ್ಮ ಅಭಿಮಾನಿಗಳನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತಾರೆ. ಅವರಿಗೆ ಸಾಕಷ್ಟು ಗೌರವ ನೀಡುತ್ತಾರೆ, ಪ್ರೀತಿ ತೋರುತ್ತಾರೆ. ಫ್ಯಾನ್ಸ್ ಎದುರಾದಾಗ ಸೆಲ್ಫಿಗೆ ಅವರು ಪೋಸ್ ನೀಡುತ್ತಾರೆ. ಈಗ ಅವರ ಅಭಿಮಾನಿಯೋರ್ವ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ. ಅವರನ್ನು ಧ್ರುವ ಸರ್ಜಾ ಭೇಟಿ ಮಾಡಿದ್ದಾರೆ. ಕುಟುಂಬದವರಿಗೆ ಅವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪೃಥ್ವಿರಾಜ್‌ ಅವರು ಧ್ರುವ ಸರ್ಜಾ ಅಭಿಮಾನಿ. ಬೈಕ್​ನಿಂದ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿದೆ. ಹೆಲ್ಮೆಟ್ ಇಲ್ಲದ ಕಾರಣ ತಲೆಗೆ ಗಂಭೀರ ಗಾಯವಾಗಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಮೇಮೊರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪೃಥ್ವಿರಾಜ್ ಕೋಮ ಸೇರಿದ್ದಾರೆ. ಗಾಯಾಳು ನಟ ಧ್ರುವ ಸರ್ಜ ಅಪ್ಪಟ ಅಭಿಮಾನಿ. ಹೀಗಾಗಿ, ಧ್ರುವ ಅವರು ಪೃಥ್ವಿರಾಜ್​ ಕುಟುಂಬದವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ತಂದೆ-ತಾಯಿ ಕಣ್ಣೀರು

ಧ್ರುವ ಅವರು ಇಂದು (ಫೆ.18) ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪೃಥ್ವಿರಾಜ್ ಅವರ ತಂದೆ-ತಾಯಿ ಧ್ರುವ ಅವರ ಎದುರು ಕಣ್ಣೀರು ಹಾಕಿದ್ದಾರೆ. ಈ ವೇಳೆ ಅವರನ್ನು ಧ್ರುವ ಸಮಾಧಾನ ಮಾಡಲು ಪ್ರಯತ್ನಿಸಿದರು.

ನಟ ಧ್ರುವ ಸರ್ಜಾ ಮಾತು:

‘ಪೃಥ್ವಿ ಅವರನ್ನು ತುಂಬಾ ಬಾರಿ ಭೇಟಿ ಮಾಡಿದ್ದೇನೆ. ಭಾನುವಾರ ಅಂದ್ರೆ ನನ್ನ ಭೇಟಿ ಮಾಡೋಕೆ ಬರುತ್ತಿದ್ದರು. ಅವರ ತಂದೆ ತಾಯಿಗೆ ಏನು ಹೇಳಿ ಸಮಾಧಾನ ಮಾಡಬೇಕು ಎಂಬುದು ನನಗೆ ತಿಳಿಯುತ್ತಿಲ್ಲ. ಅವರ ತಂದೆ-ತಾಯಿ ಅಂಗಾಂಗಗಳನ್ನು ದಾನ‌ ಮಾಡಲು ಮುಂದಾಗಿದ್ದಾರೆ. ದಯವಿಟ್ಟು ಎಲ್ಲರಿಗೂ ನಾನು ರಿಕ್ವೆಸ್ಟ್ ಮಾಡೋದು ಏನಂದ್ರೆ ದಯವಿಟ್ಟು ಹೆಲ್ಮೆಟ್ ಧರಿಸಿ. ನನ್ನ ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದೊಕೊಂಡಿದ್ದೆ. ಆದರೆ, ಈಗ ಬಂದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:20 pm, Sat, 18 February 23