AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಸ್ಟ್ ರೋಲ್, ವಿಲನ್ ಆಗೋದು ಇಷ್ಟವಿಲ್ಲ ಪರಭಾಷೆಯಲ್ಲಿ ನಟಿಸಬೇಡಿ ಅಂತಾ ಕಿಚ್ಚನ ಫ್ಯಾನ್ಸ್ ಪಟ್ಟು

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆ ಅಭಿಮಾನಿಗಳಲ್ಲಿ ಆತಂಕ ಹುಟ್ಟು ಹಾಕಿದೆ. ಕಿಚ್ಚನ ನಿರ್ಧಾರ ಬದಲಿಸುವಂತೆ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಅದಕ್ಕಾಗಿ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚನ ಆ ನಿರ್ಧಾರ ಏನೂ ಗೊತ್ತಾ? ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಅನ್ನೋ ಪದಕ್ಕೆ ಒಂದು ತೂಕವಿದೆ. ಸದೀಪ್‌ ಸಿನಿಮಾ, ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಅಭಿಮಾನವನ್ನ ಗಳಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಮಾತ್ರ ಸುದೀಪ್‌ ಕಿಚ್ಚು ಹರಿಸಿಲ್ಲ, ಪರಭಾಷೆಗಳಲ್ಲೂ ಕಿಚ್ಚ ತಮ್ಮ ಖದರ್ ತೋರಿಸಿದ್ದಾರೆ. ಆದ್ರೀಗ ಕಿಚ್ಚನ ಅಭಿಮಾನಿಗಳಿಗೆ […]

ಗೆಸ್ಟ್ ರೋಲ್, ವಿಲನ್ ಆಗೋದು ಇಷ್ಟವಿಲ್ಲ ಪರಭಾಷೆಯಲ್ಲಿ ನಟಿಸಬೇಡಿ ಅಂತಾ ಕಿಚ್ಚನ ಫ್ಯಾನ್ಸ್ ಪಟ್ಟು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 20, 2020 | 12:53 PM

Share

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆ ಅಭಿಮಾನಿಗಳಲ್ಲಿ ಆತಂಕ ಹುಟ್ಟು ಹಾಕಿದೆ. ಕಿಚ್ಚನ ನಿರ್ಧಾರ ಬದಲಿಸುವಂತೆ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಅದಕ್ಕಾಗಿ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚನ ಆ ನಿರ್ಧಾರ ಏನೂ ಗೊತ್ತಾ?

ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಅನ್ನೋ ಪದಕ್ಕೆ ಒಂದು ತೂಕವಿದೆ. ಸದೀಪ್‌ ಸಿನಿಮಾ, ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಅಭಿಮಾನವನ್ನ ಗಳಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಮಾತ್ರ ಸುದೀಪ್‌ ಕಿಚ್ಚು ಹರಿಸಿಲ್ಲ, ಪರಭಾಷೆಗಳಲ್ಲೂ ಕಿಚ್ಚ ತಮ್ಮ ಖದರ್ ತೋರಿಸಿದ್ದಾರೆ. ಆದ್ರೀಗ ಕಿಚ್ಚನ ಅಭಿಮಾನಿಗಳಿಗೆ ಕಿಚ್ಚನ ನಡೆ ಇಷ್ಟವಾಗ್ತಿಲ್ಲ.

ಕಿಚ್ಚ ಸುದೀಪ್​ಗೆ ಅಪಾರವಾದ ಅಭಿಮಾನಿ ಬಳಗ ಇದೆ. ಆದ್ರೆ ಅವ್ರಿಗೆ ಕಿಚ್ಚ ಪರಭಾಷೆ ಸಿನಿಮಾಗಳಲ್ಲಿ ನಟಿಸೋದು ಇಷ್ಟವಿಲ್ಲ. ಈಗಾಗ್ಲೆೇ ತಮಿಳು, ತೆಲುಗು, ಬಾಲಿವುಡ್​ನಲ್ಲಿ ಕಿಚ್ಚ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಹೆಚ್ಚಾಗಿ ಸುದೀಪ್ ಅಥಿತಿ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಅಲ್ಲದೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅದ್ರೆ ಇದು ಸುದೀಪ್ ಅಭಿಮಾನಿಗಳಿಗೆ ಕಿರಿಕಿರಿ ಉಂಟು ಮಾಡಿದೆಯಂತೆ. ಹೀಗಾಗಿ ಬೇರೆ ಭಾಷೆ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಡಿ ಅಂತ ಕಿಚ್ಚನ ಅಭಿಮಾನಿಗಳು ಅಭಿಮಾನದಿಂದಲೇ ಪಟ್ಟು ಹಿಡಿದ್ದಾರೆ.

ಅಂದಹಾಗೇ ನಟ ಸುದೀಪ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಅಂತ ಹೇಳಲಾಗಿತ್ತು. ಆದ್ರೆ ಈ ಸುದ್ದಿಗೆ ಕಿಚ್ಚು ಫುಲ್ ಸ್ಟಾಪ್ ಇಟ್ಟಿದ್ದಾರೆ. ರಾಜಮೌಳಿಯಿಂದ ಕರೆ ಬಂದಿಲ್ಲ. ಮತ್ತು ಆರ್‌ಆರ್‌ಆರ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅನ್ನೋದನ್ನ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಕಿಚ್ಚನ ಈ ಟ್ವೀಟ್‌ ನೋಡಿದ ಅಭಿಮಾನಿಗಳು ಫುಲ್​ ಖುಷಿಯಲ್ಲಿದ್ದಾರೆ. ಕಾರಣ ಸುದೀಪ್​ ಮತ್ತೊಂದು ಪರಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅನ್ನೋದು. ಯಾಕಂದ್ರೆ ತಮ್ಮ ನೆಚ್ಚಿನ ನಾಯಕ ಪರಭಾಷೆಗಳಲ್ಲಿ ವಿಲನ್​ ಆಗೋದು ಕಿಚ್ಚನ ಅಭಿಮಾನಿಗಳಿಗೆ ಬಿಲ್​ಖುಲ್ ಇಷ್ಟ ಇಲ್ಲವಂತೆ.

ತೆಲುಗಿನ ಈಗ, ತಮಿಳಿನ ಪುಲಿ, ಬಾಲಿವುಡ್​ನ ದಬಾಂಗ್ 3, ಸೈರಾ ಸಿನಿಮಾಗಳಲ್ಲಿ ಸುದೀಪ್​ ನೆಗೆಟಿವ್​ ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ವಿಲನ್​ ಆಗಿ ಪರಭಾಷಾ ನಟರ ಕೈಯಲ್ಲಿ ಒದೆ ತಿನ್ನೋದನ್ನ ನೋಡಲು ಕಿಚ್ಚನ ಫ್ಯಾನ್ಸ್​ಗೆ ಇಷ್ಟವಿಲ್ಲವಂತೆ. ಹಾಗಾಗಿ ಇನ್ಮುಂದೆ ಪರಭಾಷಾ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಬೇಡಿ. ಹಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸಿ ಕಾಲರ್​ ಎತ್ತಿಕೊಂಡು ತಿರುಗಾಡುತ್ತೇವೆ ಅಂತ ಕಿಚ್ಚನ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.

ಅಷ್ಟೇ ಅಲ್ಲ ಸೋಷಿಯಲ್​ ಮಿಡಿಯಾದಲ್ಲಿ ಸಾಲು ಸಾಲು ಟ್ಟೀಟ್​ಗಳನ್ನ ಮಾಡಿ ಕಿಚ್ಚನಿಗೆ ಟ್ಯಾಗ್ ಮಾಡಿದ್ದಾರೆ. ಆದ್ರೆ ಅಭಿಮಾನಿಗಳ ಈ ಆಸೆಗೆ ಕಿಚ್ಚ ಸುದೀಪ್ ತಲೆಬಾಗ್ತಾರಾ? ಪರಭಾಷೆಗಳಲ್ಲಿ ಕಿಚ್ಚ ಅತಿಥಿ ಪಾತ್ರದಲ್ಲಿ ಅಭಿನಯಿಸೋದಿಲ್ವಾ? ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 12:52 pm, Mon, 20 January 20

Follow Us
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್