CCB ಬಂಧನದಲ್ಲಿ ನಟಿ ರಾಗಿಣಿ: ಸಾಮಾನ್ಯ ಆರೋಪಿ, ಯಾವುದೇ VIP ಟ್ರೀಟ್ಮೆಂಟ್ ಇಲ್ಲ

[lazy-load-videos-and-sticky-control id=”Z8yJM4BHOlE”] ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್‌ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ CCB  ಇಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ವಿಚಾರಣೆಗೆಂದು CCB ಕಚೇರಿಗೆ ಬಂದಿದ್ದ ರಾಗಿಣಿ ಯಾವುದೇ ಲಗೇಜ್ ತಂದಿರಲಿಲ್ಲ, ಹೀಗಾಗಿ ಧರಿಸಿದ್ದ ಸೀರೆಯಲ್ಲೇ ಇದ್ದಾರೆ. ರಾಗಿಣಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಇಬ್ಬರು ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 3 ಜನ ಇರಬಹುದಾದ ಕೋಣೆಯಲ್ಲಿ ರಾತ್ರಿ ಕಳೆದ ರಾಗಿಣಿಗೆ ಯಾವುದೇ VIP ಟ್ರೀಟ್ಮೆಂಟ್ […]

CCB ಬಂಧನದಲ್ಲಿ ನಟಿ ರಾಗಿಣಿ: ಸಾಮಾನ್ಯ ಆರೋಪಿ, ಯಾವುದೇ VIP ಟ್ರೀಟ್ಮೆಂಟ್ ಇಲ್ಲ
ಸಾಧು ಶ್ರೀನಾಥ್​

Updated on: Sep 05, 2020 | 1:11 PM

[lazy-load-videos-and-sticky-control id=”Z8yJM4BHOlE”]

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್‌ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ CCB  ಇಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.

ವಿಚಾರಣೆಗೆಂದು CCB ಕಚೇರಿಗೆ ಬಂದಿದ್ದ ರಾಗಿಣಿ ಯಾವುದೇ ಲಗೇಜ್ ತಂದಿರಲಿಲ್ಲ, ಹೀಗಾಗಿ ಧರಿಸಿದ್ದ ಸೀರೆಯಲ್ಲೇ ಇದ್ದಾರೆ. ರಾಗಿಣಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಇಬ್ಬರು ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

3 ಜನ ಇರಬಹುದಾದ ಕೋಣೆಯಲ್ಲಿ ರಾತ್ರಿ ಕಳೆದ ರಾಗಿಣಿಗೆ ಯಾವುದೇ VIP ಟ್ರೀಟ್ಮೆಂಟ್ ನೀಡಿಲ್ಲ. ಬದಲಿಗೆ ಸಾಮಾನ್ಯ ಆರೋಪಿಗಳ ರೀತಿಯಲ್ಲಿ ರೂಮ್‌ನಲ್ಲಿ ರಾತ್ರಿ ಕಳೆದಿದ್ದಾರೆ. ಇನ್ನು ರೂಮ್‌ನಲ್ಲಿ ಮಂಚ, ಫ್ಯಾನ್, ರೆಸ್ಟ್ ರೂಮ್ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ಊಟಕ್ಕಾಗಿ ಅನ್ನ, ಸಾಂಬಾರ್, ಚಪಾತಿ, ಪಲ್ಯ ನೀಡಿದ್ದಾರೆ.

ಇಂದೂ ಸಹ ನಟಿ ರಾಗಿಣಿಯನ್ನು CCB ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲ್ಲಿದ್ದು, ಸ್ಫೋಟಕ ಮಾಹಿತಿಗಳು ಹೊರ ಬೀಳುವ ನಿರೀಕ್ಷೆಯಿದೆ.

Published On - 7:13 am, Sat, 5 September 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us