AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಪ್ತ್​ ಗುಪ್ತ್​ ರೆಸಾರ್ಟ್ ಪಾರ್ಟಿಯಲ್ಲಿ.. ಡ್ರಗ್ಸ್ ಸೇವನೆ -ಫೋಟೋ ಬಿಚ್ಚಿಡ್ತು ರಾಗಿಣಿ ರಹಸ್ಯ!

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲದ ಕುರಿತು ದಿನದಿಂದ ದಿನಕ್ಕೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. CCB ವಿಚಾರಣೆ ವೇಳೆ ನಟಿ ರಾಗಿಣಿ ಆಪ್ತ ರವಿಶಂಕರ್​ ಮತ್ತುಷ್ಟು ಮಾಹಿತಿ ಹೊರಹಾಕಿದ್ದಾನೆ. ಲಾಕ್​ಡೌನ್ ವೇಳೆ ನಡೆದಿದ್ದ ಗೌಪ್ಯ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ನಟಿ ರಾಗಿಣಿ ದ್ವಿವೇದಿ, ಆಕೆಯ ಆಪ್ತ ರವಿಶಂಕರ್ ಜೊತೆ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ರಾಗಿಣಿ MDMA ಡ್ರಗ್ಸ್ ಸೇವಿಸಿದ್ದ ಬಗ್ಗೆ ರವಿಶಂಕರ್​ ಮಾಹಿತಿ ಕೊಟ್ಟಿದ್ದಾನೆ. ಜೊತೆಗೆ, ಪಾರ್ಟಿಯಲ್ಲಿ ಕೇವಲ 25 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದ್ದು […]

ಗುಪ್ತ್​ ಗುಪ್ತ್​ ರೆಸಾರ್ಟ್ ಪಾರ್ಟಿಯಲ್ಲಿ.. ಡ್ರಗ್ಸ್ ಸೇವನೆ -ಫೋಟೋ ಬಿಚ್ಚಿಡ್ತು ರಾಗಿಣಿ ರಹಸ್ಯ!
KUSHAL V
|

Updated on:Sep 05, 2020 | 10:47 AM

Share

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲದ ಕುರಿತು ದಿನದಿಂದ ದಿನಕ್ಕೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. CCB ವಿಚಾರಣೆ ವೇಳೆ ನಟಿ ರಾಗಿಣಿ ಆಪ್ತ ರವಿಶಂಕರ್​ ಮತ್ತುಷ್ಟು ಮಾಹಿತಿ ಹೊರಹಾಕಿದ್ದಾನೆ.

ಲಾಕ್​ಡೌನ್ ವೇಳೆ ನಡೆದಿದ್ದ ಗೌಪ್ಯ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ನಟಿ ರಾಗಿಣಿ ದ್ವಿವೇದಿ, ಆಕೆಯ ಆಪ್ತ ರವಿಶಂಕರ್ ಜೊತೆ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ರಾಗಿಣಿ MDMA ಡ್ರಗ್ಸ್ ಸೇವಿಸಿದ್ದ ಬಗ್ಗೆ ರವಿಶಂಕರ್​ ಮಾಹಿತಿ ಕೊಟ್ಟಿದ್ದಾನೆ. ಜೊತೆಗೆ, ಪಾರ್ಟಿಯಲ್ಲಿ ಕೇವಲ 25 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದ್ದು ಆಹ್ವಾನಿತ 25 ಮಂದಿಯಲ್ಲಿ ಸ್ಟಾರ್​ಗಳು, ಉದ್ಯಮಿಗಳು, ಟೆಕ್ಕಿಗಳು ಹಾಗೂ ಡ್ರಗ್ ಪೆಡ್ಲರ್ಸ್​ಗಳು ಭಾಗಿಯಾಗಿದ್ದರಂತೆ.

ಈ ಗೌಪ್ಯ ಪಾರ್ಟಿ ಯಲಹಂಕ ಹೊರವಲಯದಲ್ಲಿರುವ ಲೇ ರೋಮ ಗಾರ್ಡೇನಿಯಾ ರೆಸಾರ್ಟ್​ನಲ್ಲಿ ನಡೆದಿತ್ತು ಎಂದು ರವಿಶಂಕರ್​ CCB ಅಧಿಕಾರಿಗಳಿಗೆ ತಿಳಿಸಿದ್ದಾನೆ. ರೆಸಾರ್ಟ್​ನಲ್ಲಿ ಯಾವುದೇ ಸಿಸಿಟಿವಿ ಇರಲಿಲ್ಲ. ಜೊತೆಗೆ ಪಾರ್ಟಿ ಮಧ್ಯೆ ಫೋಟೊ, ವಿಡಿಯೋ ಮಾಡುವಂತಿರಲಿಲ್ಲ ಎಂಬ ಕಂಡೀಷನ್​ ಹಾಕಲಾಗಿತ್ತು ಎಂದೂ ಸಹ ರವಿಶಂಕರ್​ ತಿಳಿಸಿದ್ದಾನೆ.

ಅನುಮತಿ ಇಲ್ಲದಿದ್ದರೂ ಫೋಟೋ ಮಾಡಿ ತಗಲಾಕೊಂಡರು! ಪಾರ್ಟಿ ವೇಳೆ ಮೊಬೈಲ್ ಬಳಕೆಗೆ ಅನುಮತಿ ಇಲ್ಲದಿದ್ದರೂ, ರವಿಶಂಕರ್ ಕೆಲ ಫೋಟೋ ತೆಗೆದಿದ್ದನಂತೆ. ಬಳಿಕ ಆ ಫೋಟೊಗಳನ್ನು ಡಿಲಿಟ್ ಮಾಡಿದ್ದನಂತೆ. ಆದರೆ, ರಾಗಿಣಿ ಡ್ರಗ್ಸ್ ಸೇವನೆ ಬಗ್ಗೆ ರವಿಶಂಕರ್​ನ ಮೊಬೈಲ್​ ರಿಟ್ರೀವ್ ಮಾಡಿದ ವೇಳೆ ಇವೆಲ್ಲಾ ಮಹತ್ವದ ಸಾಕ್ಷ್ಯ ತನ್ನಿಂತಾನೇ ದೊರೆತಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ವಿರುದ್ಧ ಕಾಟನ್​​ಪೇಟೆ ಠಾಣೆಯಲ್ಲಿ FIR ದಾಖಲಾಗಿದೆ. ಇದಲ್ಲದೆ, ನಿನ್ನೆ ಪಾರ್ಟಿ ನಡೆದಿದ್ದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಅಧಿಕಾರಿಗಳು ಮತ್ತಷ್ಟು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ.

Published On - 10:41 am, Sat, 5 September 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ