ಅಭಿನಯ ಚಕ್ರವರ್ತಿಗೆ ‘ಕನ್ನಡ ಕಲಾ ತಿಲಕ’ ಬಿರುದು ಪ್ರದಾನ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ನಟ ಸುದೀಪ್​ಗೆ ಸನ್ಮಾನಿಸಿ ಗೌರವಿಸಿದ್ದಾರೆ.

ಅಭಿನಯ ಚಕ್ರವರ್ತಿಗೆ ‘ಕನ್ನಡ ಕಲಾ ತಿಲಕ’ ಬಿರುದು ಪ್ರದಾನ
ಕಿಚ್ಚ ಸುದೀಪ್​
Edited By:

Updated on: Feb 04, 2021 | 5:21 PM

ಬೆಂಗಳೂರು: ದುಬೈಗೆ ವಿಕ್ರಾಂತ್ ರೋಣ ಟೈಟಲ್ ಟೀಸರ್ ರಿಲೀಸ್​ಗಾಗಿ ತೆರಳಿದ್ದ ಸುದೀಪ್​ಗೆ ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸನ್ಮಾನ ಮಾಡುವ ಮೂಲಕ ‘ಕನ್ನಡ ಕಲಾ ತಿಲಕ’ ಎಂಬ ಬಿರುದನ್ನು ಪ್ರದಾನ ಮಾಡಲಾಗಿದೆ.

ಫೆಬ್ರವರಿ 1ರಂದು ಅತ್ಯಂತ ಎತ್ತರದ ವಾಸ್ತು ಶಿಲ್ಪ ಬುರ್ಜ್ ಖಲೀಫಾದ ಮೇಲೆ ಟೈಟಲ್ ಲೋಗೋ ಲಾಂಚ್ ಆಗಿತ್ತು. ಜೊತೆಗೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ. ಅಲ್ಲದೇ ಕಿಚ್ಚನ 25 ವರ್ಷಗಳ ಸಿನಿ ಸಾಧನೆಗಳನ್ನು ಅಭಿನಂದಿಸಿ ಕನ್ನಡ ಕಲಾ ತಿಲಕ ಬಿರುದು ನೀಡಿ ಸನ್ಮಾನಿಸಿದ್ದಾರೆ.

Photo Gallery | ಕಿಚ್ಚ ಸುದೀಪ್​ ಸಿನಿ ಜರ್ನಿಗೆ 25 ವರ್ಷ.. ಬುರ್ಜ್ ಖಲೀಫಾದ ಮೇಲೆ ರಾರಾಜಿಸಲಿದೆ ವಿಕ್ರಾಂತ್​ ರೋಣ ಟೀಸರ್​..!

Follow Us