Sign In

By signing in or creating an account, you agree with Associated Broadcasting Company's Terms & Conditions and Privacy Policy.

Prayashaha: ‘ಪ್ರಾಯಶಃ’ ಗಿಟಾರ್, ಕೊಳಲಿನ ಕರೆ ನಿಮ್ಮ ಮನಗೆಲ್ಲದೇ ಇರದು

Kannada Cinema: ಅತ್ಯಾಚಾರ ಹಾಗೂ ಕೊಲೆಯ ಹಿಂದೆ ಇರುವಂತಹ ಊಹೆಗೂ ಸಿಗದ ಕಾಣದ ಕೈಗಳ ಹುಡುಕಾಟವೇ ಕತೆಯ ಮುಖ್ಯ ಹಂದರವಾಗಿದ್ದು, ಚಿತ್ರದ ಪ್ರಾರಂಭಿಕ ಅಧ್ಯಾಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.

Prayashaha: ‘ಪ್ರಾಯಶಃ’ ಗಿಟಾರ್, ಕೊಳಲಿನ ಕರೆ ನಿಮ್ಮ ಮನಗೆಲ್ಲದೇ ಇರದು
ಪ್ರಾಯಶಃ ಚಿತ್ರದ ಟೈಟಲ್​​
Follow us
Skanda
|

Updated on:Feb 04, 2021 | 3:28 PM

ಪ್ರಾಯಶಃ ಇದೇ ಮೊದಲ ಬಾರಿಗೆ ಹೀಗೆ ಹೊಸ ವರ್ಷವೊಂದು ಸಿನಿಮಾಗಳ ಅಬ್ಬರವಿಲ್ಲದೆ ಆರಂಭವಾಗಿರೋದು. ಕೊರೊನಾ ಬಂದಿದ್ದೇ ಬಂದಿದ್ದು ಚಿತ್ರಮಂದಿರಗಳೆಲ್ಲಾ ಮೌನಕ್ಕೆ ಜಾರುವಂತಾಗಿಬಿಟ್ಟಿತು. ಸದ್ದುಗದ್ದಲಗಳೊಂದಿಗೆ ಕಂಗೊಳಿಸುತ್ತಿದ್ದ ಚಿತ್ರರಂಗ ತಣ್ಣಗಾಗಿಬಿಟ್ಟಿತ್ತು. ಆದರೆ, ಇದೀಗ ಚಂದನವನಕ್ಕೆ ಕವಿದಿದ್ದ ಕಾರ್ಮೋಡ ನಿಧಾನಕ್ಕೆ ಸರಿಯುತ್ತಿದೆ. ಸ್ತಬ್ಧಗೊಂಡಿದ್ದ ಚಿತ್ರರಂಗದಲ್ಲಿ ಮತ್ತೆ ಬಣ್ಣ ಮೂಡುತ್ತಿದೆ. ಪ್ರಾಯಶಃ ಇನ್ನೊಂದೆರೆಡು ತಿಂಗಳಲ್ಲಿ ಎಲ್ಲವೂ ಮೊದಲಿನಂತಾಗಬಹುದು ಎಂಬ ನಿರೀಕ್ಷೆ ಇದೆ. ಅಂದಹಾಗೆ ಇದೆಲ್ಲವೂ ಸರಿಯಾಗುವ ಹೊತ್ತಿನಲ್ಲಿ ‘ಪ್ರಾಯಶಃ’  ಸಿನಿಮಾ ನಿಮ್ಮ ಮುಂದೆ ಬರಲಿದೆ.

ಕನ್ನಡದ ಅತ್ಯುತ್ಸಾಹಿ ಯುವಕರ ತಂಡವೊಂದು ಅರ್ಹ ಕ್ರಿಯೇಷನ್ಸ್ ಮೂಲಕ ತನ್ನ ಚೊಚ್ಚಲ ಚಲನಚಿತ್ರ ‘ಪ್ರಾಯಶಃ’ವನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲು ಸಿದ್ಧವಾಗಿದೆ. ಕಳೆದ ವಾರವಷ್ಟೇ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿ ಗಮನ ಸೆಳೆದಿದ್ದ ತಂಡ, ಇದೀಗ ಗಿಟಾರ್ ಮತ್ತು ಕೊಳಲಿನ ಸ್ವರ ಸಂಯೋಜನೆ ಎಲ್ಲರ ಹೃದಯ ಗೆಲ್ಲುತ್ತಿದೆ.

ಕ್ರೈಂ ಥ್ರಿಲ್ಲರ್ ಹಾಗೂ ಲವ್ ಸ್ಟೋರಿಯ ಎಳೆಯನ್ನು ಹೊಂದಿರುವ ಚಿತ್ರಕ್ಕೆ ವಿಜಯಕೃಷ್ಣ ಅವರು ಸಂಗೀತ ನೀಡಿದ್ದು, ರಂಜಿತ್ ರಾವ್ ಅವರ ಕಥೆ, ಚಿತ್ರಕಥೆ, ನಿರ್ದೇಶನದೊಂದಿಗೆ ಮೂಡಿಬಂದಿರುವ ಚಿತ್ರದಲ್ಲಿ ರಾಹುಲ್, ಕೃಷ್ಣ ಭಟ್, ಶೋಭರಾಜ್, ವಿನೀತ್, ಮಧು ಹೆಗ್ಡೆ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್ ಪಾಟೀಲ್​ ಛಾಯಾಗ್ರಹಣ ಹಾಗೂ ಅಶೋಕ್ ಅವರ ಸಂಕಲನದಲ್ಲಿ ಚಿತ್ರ ಸಿದ್ಧವಾಗಿದೆ.

ಅತ್ಯಾಚಾರ ಹಾಗೂ ಕೊಲೆಯ ಹಿಂದೆ ಇರುವಂತಹ ಊಹೆಗೂ ಸಿಗದ ಕಾಣದ ಕೈಗಳ ಹುಡುಕಾಟವೇ ಕತೆಯ ಮುಖ್ಯ ಹಂದರವಾಗಿದ್ದು, ಚಿತ್ರದ ಪ್ರಾರಂಭಿಕ ಅಧ್ಯಾಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಯಶಃ ಚಿತ್ರದ ಗಿಟಾರ್-ಕೊಳಲಿನ ನಾದಝರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

Vikrant Rona On Burj Khalifa ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕಿಚ್ಚ ಸುದೀಪ್ ಕಟೌಟ್!

Published On - 3:23 pm, Thu, 4 February 21

ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು