ಕನ್ನಡದಲ್ಲಿ ಹೊಸ ಸಿನಿಮಾ ‘ಯಾಕೆ’; ತೆಲುಗಿನಲ್ಲಿ ‘ಸಂಸ್ಥಾನಂ’

ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿರುವ ‘ಯಾಕೆ’ ಸಿನಿಮಾಗೆ ಸೀತಾ ಹರ್ಷವರ್ಧನ್ ನಿರ್ಮಾಣ, ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಲಾಂಚ್ ಮಾಡಲಾಗಿದೆ. ಈ ಸಮಾರಂಭಕ್ಕೆ ‘ಒರಟ’ ಪ್ರಶಾಂತ್, ಟಿ.ಪಿ. ಸಿದ್ದರಾಜು, ಶ್ರೀನಗರ ಕಿಟ್ಟಿ, ಅಂಬುಜಾ ಸೇರಿದಂತೆ ಹಲವರು ಬಂದು ವಿಶ್ ಮಾಡಿದ್ದಾರೆ. ತೆಲುಗಿನಲ್ಲೂ ಈ ಚಿತ್ರ ನಿರ್ಮಾಣ ಆಗಲಿದೆ.

ಕನ್ನಡದಲ್ಲಿ ಹೊಸ ಸಿನಿಮಾ ‘ಯಾಕೆ’; ತೆಲುಗಿನಲ್ಲಿ ‘ಸಂಸ್ಥಾನಂ’
‘ಯಾಕೆ’ ಸಿನಿಮಾ ತಂಡ

Updated on: Oct 21, 2024 | 4:49 PM

ಚಿತ್ರರಂಗದಲ್ಲಿ ಭಾಷೆಗಳ ನಡುವೆ ಗಡಿ ಸಣ್ಣದಾಗಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಚಾಲ್ತಿಗೆ ಬಂದ ಬಳಿಕ ಅಂಥ ಪ್ರಯತ್ನಗಳು ಜಾಸ್ತಿ ಆಗಿವೆ. ಈಗ ಕನ್ನಡ ಮತ್ತು ತೆಲುಗಿನಲ್ಲಿ ಒಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ಕನ್ನಡದಲ್ಲಿ ‘ಯಾಕೆ’ ಎಂದು ಶೀರ್ಷಿಕೆ ಇಡಲಾಗಿದೆ. ತೆಲುಗಿನಲ್ಲಿ ಇದೇ ಸಿನಿಮಾಗೆ ‘ಸಂಸ್ಥಾನಂ’ ಎಂದು ಟೈಟಲ್ ಇಡಲಾಗಿದೆ. ಪ್ರೇಮ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸೀತಾ ಹರ್ಷವರ್ಧನ್ ಅವರು ಎರಡೂ ಭಾಷೆಗಳಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು.

ಶೀರ್ಷಿಕೆ ಅನಾವರಣದ ಜೊತೆ ‘ಸಿರಿ ಸಿನಿಮಾಸ್’ ಪ್ರೊಡಕ್ಷನ್ ಹೌಸ್ ಉದ್ಘಾಟನೆ ಕೂಡ ನಡೆಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಈ ಕಾರ್ಯಕ್ರಮ ಮಾಡಲಾಯಿತು. ಒರಟ ಪ್ರಶಾಂತ್, ನಿರ್ಮಾಪಕ ಟಿಪಿ ಸಿದ್ದರಾಜು, ಶ್ರೀನಗರ ಕಿಟ್ಟಿ, ಅಂಬುಜಾ ಮುಂತಾದವರು ಬಂದು ಟೈಟಲ್​ ಅನಾವರಣ ಮಾಡಿದರು. ಅಲ್ಲದೇ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್​ ಎಂದರು.

ಕಾರ್ಯಕ್ರಮದಲ್ಲಿ ನಿರ್ಮಾಪಕಿ ಸೀತಾ ಹರ್ಷವರ್ಧನ್ ಅವರು ಮಾತನಾಡಿದರು. ‘ನಾನು ಕನ್ನಡದ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ತೆಲುಗು ಸೀರಿಯಲ್​ಗಳಲ್ಲೂ ನಟಿಸಿದ್ದೇನೆ. ನಿರ್ದೇಶಕ ಪ್ರೇಮ್ ಅವರು ಒಮ್ಮೆ ಹೇಳಿದ ಈ ಕಥೆ ನನಗೆ ಇಷ್ಟವಾಯ್ತು. ಆದ್ದರಿಂದ ನಿರ್ಮಾಣ ಮಾಡಲು ಮುಂದಾಗಿದ್ದೇನೆ. ನಮ್ಮ ಪ್ರಯತ್ನಕ್ಕೆ ಅಮೇಜಾನ್ ಮತ್ತು ಹೈದರಾಬಾದ್​ನ ಖುಷಿ ಸಿನಿಮಾ ಸಂಸ್ಥೆ ಸಾಥ್ ನೀಡಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:  ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ದಿನ ನಡೆಯಲ್ಲ: ಹೀಗೆಂದರೇಕೆ ಅಲ್ಲು ಅರ್ಜುನ್ ತಂದೆ

ನವೆಂಬರ್​ನಲ್ಲಿ ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. 2025ರ ಏಪ್ರಿಲ್​ ತಿಂಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ‘ಯಾಕೆ’ ಸಿನಿಮಾದ ಡೈರೆಕ್ಟರ್ ಪ್ರೇಮ್ ಮಾತನಾಡಿ, ‘ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಇದರಲ್ಲಿ ಉತ್ತಮವಾದ ಕಥಾವಸ್ತು ಇದೆ. ಅದು ಎಲ್ಲರಿಗೂ ಇಷ್ಟ ಆಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು. ಈ ವೇಳೆ ‘ಖುಷಿ ಸಿನಿಮಾಸ್’ ಸಂಸ್ಥೆಯ ಪಾಲುದಾರರು ಈ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.