AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ. ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ […]

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!
ರಾಗಿಣಿ ದ್ವಿವೇದಿ (ಎಡ); ಸಂಜನಾ ಗಲ್ರಾನಿ (ಬಲ)
KUSHAL V
|

Updated on:Oct 09, 2020 | 10:06 AM

Share

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ.

ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ ಕಿತ್ತಾಟ ನಡೀತಿದೆ ಎಂದು ತಿಳಿದುಬಂದಿದೆ. ನಟಿಮಣಿಯರ ಜಗಳ ಇತರೆ ಕೈದಿಗಳಿಗೆ ನಿತ್ಯ ತಲೆನೋವು ಆಗಿಬಿಟ್ಟಿದೆಯಂತೆ. ಒಬ್ಬರು ಕೂತ್ರೆ ಇನ್ನೊಬ್ಬರಿಗೆ ತಪ್ಪು, ಇನ್ನೊಬ್ಬರು ನಿಂತ್ರೆ ಮತ್ತೊಬ್ಬರಿಗೆ ತಪ್ಪು ಅನ್ನುವಷ್ಟರ ಮಟ್ಟಿಗೆ ಇವರ ಜಡೆಜಗಳ ತಲುಪಿಬಿಟ್ಟಿದೆಯಂತೆ. ಕೆಲವೊಮ್ಮೆ ಕೈ ಕೈ ಮಿಲಾಯಿಸೋ ಹಂತವು ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನ ಸಿಬ್ಬಂದಿ ಇಬ್ಬರ ಜಗಳ ಬಿಡಿಸೋಕೆ ಬಂದ್ರೂ ಸುಮ್ಮನಾಗುತ್ತಿಲ್ಲವಂತೆ. ಹಾಗಾಗಿ, ನಟಿಯರ ಜಡೆಜಗಳಕ್ಕೆ ಜೈಲ್ ಸಿಬ್ಬಂದಿಯೇ ಕಂಗಾಲಾಗಿ ಹೋಗಿದ್ದಾರೆ.

ಮೊದಲು ಕಿತ್ತಾಟ ಆಮೇಲೆ ಕಣ್ಣೀರು! ಬೈ ದಿ ಬೈ, ನಶೆರಾಣಿಯರ ಜಡೆಜಗಳ ಕೇವಲ ಕಿತ್ತಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗಳದ ನಂತರ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಅಳಲು ಶುರುಮಾಡ್ತಾರಂತೆ. ಅಸಲಿಗೆ, ಸಂಜನಾ ಹಾಗೂ ರಾಗಿಣಿ ಕಿತ್ತಾಟದ ಜೊತೆಗೆ ಕಣ್ಣೀರಿಡ್ತಿರೋದಕ್ಕೆ ಕಾರಣ ED ಗುನ್ನಾ. ಹೌದು, ನಟಿಮಣಿಯರ ಕಿತ್ತಾಟ ಹಾಗೂ ಕಣ್ಣೀರಿನ ಹಿಂದಿನ ಅಸಲಿ ಕಹಾನಿಯನ್ನು ಟಿವಿ 9 ಬಿಚ್ಚಿಟ್ಟಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಟ್ಟ ಬಳಿಕ ತುಪ್ಪದ ಹುಡುಗಿ ಹಾಗೂ ಗಂಡ ಹೆಂಡತಿ ಬೆಡಗಿ ನಡುವೆ ಬಿರುಕು ಶುರುವಾಗಿದೆ ಎಂದು ತಿಳಿದುಬಂದಿದೆ. ಖಾಕಿ ತನಿಖೆಯಿಂದ ತಪ್ಪಿಸಿಕೊಳ್ಳೋ ಪ್ಲ್ಯಾನ್​ನಲ್ಲಿದ್ದವರಿಗೆ ED ಗುನ್ನಾದ ಏಟು ಕಷ್ಟವಾಗಿಬಿಟ್ಟಿದೆ. ಹಾಗಾಗಿ, ED ತನಿಖೆಯಲ್ಲಿ ಸಿಲುಕಿರುವ ಸಂಜನಾ, ರಾಗಿಣಿ ಜೈಲಿನಲ್ಲಿ ಪರಸ್ಪರ ಕಿತ್ತಾಡುತ್ತಾ, ಕಣ್ಣೀರಿಡ್ತಿದ್ದಾರೆ ಎಂದು ಹೇಳಲಾಗಿದೆ. ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು

Published On - 9:43 am, Fri, 9 October 20

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?