AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ. ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ […]

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!
ರಾಗಿಣಿ ದ್ವಿವೇದಿ (ಎಡ); ಸಂಜನಾ ಗಲ್ರಾನಿ (ಬಲ)
KUSHAL V
|

Updated on:Oct 09, 2020 | 10:06 AM

Share

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ.

ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ ಕಿತ್ತಾಟ ನಡೀತಿದೆ ಎಂದು ತಿಳಿದುಬಂದಿದೆ. ನಟಿಮಣಿಯರ ಜಗಳ ಇತರೆ ಕೈದಿಗಳಿಗೆ ನಿತ್ಯ ತಲೆನೋವು ಆಗಿಬಿಟ್ಟಿದೆಯಂತೆ. ಒಬ್ಬರು ಕೂತ್ರೆ ಇನ್ನೊಬ್ಬರಿಗೆ ತಪ್ಪು, ಇನ್ನೊಬ್ಬರು ನಿಂತ್ರೆ ಮತ್ತೊಬ್ಬರಿಗೆ ತಪ್ಪು ಅನ್ನುವಷ್ಟರ ಮಟ್ಟಿಗೆ ಇವರ ಜಡೆಜಗಳ ತಲುಪಿಬಿಟ್ಟಿದೆಯಂತೆ. ಕೆಲವೊಮ್ಮೆ ಕೈ ಕೈ ಮಿಲಾಯಿಸೋ ಹಂತವು ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನ ಸಿಬ್ಬಂದಿ ಇಬ್ಬರ ಜಗಳ ಬಿಡಿಸೋಕೆ ಬಂದ್ರೂ ಸುಮ್ಮನಾಗುತ್ತಿಲ್ಲವಂತೆ. ಹಾಗಾಗಿ, ನಟಿಯರ ಜಡೆಜಗಳಕ್ಕೆ ಜೈಲ್ ಸಿಬ್ಬಂದಿಯೇ ಕಂಗಾಲಾಗಿ ಹೋಗಿದ್ದಾರೆ.

ಮೊದಲು ಕಿತ್ತಾಟ ಆಮೇಲೆ ಕಣ್ಣೀರು! ಬೈ ದಿ ಬೈ, ನಶೆರಾಣಿಯರ ಜಡೆಜಗಳ ಕೇವಲ ಕಿತ್ತಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗಳದ ನಂತರ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಅಳಲು ಶುರುಮಾಡ್ತಾರಂತೆ. ಅಸಲಿಗೆ, ಸಂಜನಾ ಹಾಗೂ ರಾಗಿಣಿ ಕಿತ್ತಾಟದ ಜೊತೆಗೆ ಕಣ್ಣೀರಿಡ್ತಿರೋದಕ್ಕೆ ಕಾರಣ ED ಗುನ್ನಾ. ಹೌದು, ನಟಿಮಣಿಯರ ಕಿತ್ತಾಟ ಹಾಗೂ ಕಣ್ಣೀರಿನ ಹಿಂದಿನ ಅಸಲಿ ಕಹಾನಿಯನ್ನು ಟಿವಿ 9 ಬಿಚ್ಚಿಟ್ಟಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಟ್ಟ ಬಳಿಕ ತುಪ್ಪದ ಹುಡುಗಿ ಹಾಗೂ ಗಂಡ ಹೆಂಡತಿ ಬೆಡಗಿ ನಡುವೆ ಬಿರುಕು ಶುರುವಾಗಿದೆ ಎಂದು ತಿಳಿದುಬಂದಿದೆ. ಖಾಕಿ ತನಿಖೆಯಿಂದ ತಪ್ಪಿಸಿಕೊಳ್ಳೋ ಪ್ಲ್ಯಾನ್​ನಲ್ಲಿದ್ದವರಿಗೆ ED ಗುನ್ನಾದ ಏಟು ಕಷ್ಟವಾಗಿಬಿಟ್ಟಿದೆ. ಹಾಗಾಗಿ, ED ತನಿಖೆಯಲ್ಲಿ ಸಿಲುಕಿರುವ ಸಂಜನಾ, ರಾಗಿಣಿ ಜೈಲಿನಲ್ಲಿ ಪರಸ್ಪರ ಕಿತ್ತಾಡುತ್ತಾ, ಕಣ್ಣೀರಿಡ್ತಿದ್ದಾರೆ ಎಂದು ಹೇಳಲಾಗಿದೆ. ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು

Published On - 9:43 am, Fri, 9 October 20

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ