ದೈಹಿಕವಾಗಿ ಫಿಟ್ ಆಗಿರಲು ಇವುಗಳನ್ನ ಫಾಲೋ ಮಾಡ್ತಾರಂತೆ ಈ ಚೆಲುವೆ

ಈಕೆ ಚಂದನವನದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ತನ್ನ ನಟನೆಯ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹಲ್​ ಚಲ್ ಎಬ್ಬಿಸಿದ ಬ್ಯೂಟಿ. ತನ್ನ ಸೌಂದರ್ಯದಿಂದಲೇ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ಕ್ರೇಜಿ ಬಾಯ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ. ತಮ್ಮ ಮೊದಲ ಚಿತ್ರದಲ್ಲೇ ಭರವಸೆಯನ್ನು ಮೂಡಿಸಿ, ಇದೀಗ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ. ಆಶಿಕಾ ಅವರು ನಟನೆಯ ಜೊತೆಜೊತೆಗೆ ಫರ್ಪೆಕ್ಟ್​ ಫಿಟ್ನೆಸ್ ಕೂಡಾ ಮೇಂಟೇನ್ ಮಾಡಿದ್ದಾರೆ. ಹಾಲುಗೆನ್ನೆ ಚೆಲುವೆ ಆಶಿಕಾ ಅವರ ಫಿಟ್ನೆಸ್ ಗುಟ್ಟು ನಿತ್ಯದ […]

ದೈಹಿಕವಾಗಿ ಫಿಟ್ ಆಗಿರಲು ಇವುಗಳನ್ನ ಫಾಲೋ ಮಾಡ್ತಾರಂತೆ ಈ ಚೆಲುವೆ
ಸಾಧು ಶ್ರೀನಾಥ್​

Updated on: Nov 10, 2019 | 10:53 PM

ಈಕೆ ಚಂದನವನದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ತನ್ನ ನಟನೆಯ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹಲ್​ ಚಲ್ ಎಬ್ಬಿಸಿದ ಬ್ಯೂಟಿ. ತನ್ನ ಸೌಂದರ್ಯದಿಂದಲೇ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ಕ್ರೇಜಿ ಬಾಯ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ. ತಮ್ಮ ಮೊದಲ ಚಿತ್ರದಲ್ಲೇ ಭರವಸೆಯನ್ನು ಮೂಡಿಸಿ, ಇದೀಗ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ.

ಆಶಿಕಾ ಅವರು ನಟನೆಯ ಜೊತೆಜೊತೆಗೆ ಫರ್ಪೆಕ್ಟ್​ ಫಿಟ್ನೆಸ್ ಕೂಡಾ ಮೇಂಟೇನ್ ಮಾಡಿದ್ದಾರೆ. ಹಾಲುಗೆನ್ನೆ ಚೆಲುವೆ ಆಶಿಕಾ ಅವರ ಫಿಟ್ನೆಸ್ ಗುಟ್ಟು ನಿತ್ಯದ ಜಿಮ್​ ವರ್ಕೌಟ್ ಅಂತೆ. ಇವರು ವಾರದಲ್ಲಿ 3 ಅಥವಾ 4 ದಿನ ತಪ್ಪದೆ ಜಿಮ್ ವರ್ಕೌಟ್ ಮಾಡ್ತಾರಂತೆ. ಬೇರೆ ಎಕ್ಸ್​ಸೈಜ್ ಶುರು ಮಾಡುವುದಕ್ಕಿಂತ ಮೊದಲು ವಾರ್ಮ್​ ಅಫ್ ಎಕ್ಸ್​ಸೈಜ್​ಗಳ ಕಡೆ ಗಮನ ಹರಿಸೋ ಇವರು ಕಾರ್ಡಿಯೋದಿಂದ ವರ್ಕೌಟ್ ಸ್ಟಾರ್ಟ್ ಮಾಡ್ತಾರಂತೆ.

ಮೂರರಿಂದ ಐದು ನಿಮಿಷ ಈ ಎಕ್ಸ್​ಸೈಜ್ ಮಾಡ್ತಾರಂತೆ. ಹಾಗೆಯೇ ಸ್ಟ್ರೆಚಸ್ ಕೂಡಾ ಮಾಡ್ತಾರೆ. ಈ ಎಕ್ಸ್​ಸೈಜ್​ಗಳು ಇವರನ್ನು ದೈಹಿಕವಾಗಿ ರಿಲ್ಯಾಕ್ಸ್​ ಮಾಡುತ್ತಂತೆ. ಟ್ರೇನರ್ ಸಲಹೆಯಂತೆ ಜಿಮ್ ವರ್ಕೌಟ್​ಗಳನ್ನು ಫಾಲೋ ಮಾಡ್ತೀನಿ ಅಂತಾರೆ ಆಶಿಕಾ.

ಹಾಗೆಯೇ ಆಶಿಕಾ ಅವರ ಸೌಂದರ್ಯದ ಇನ್ನೊಂದು ಗುಟ್ಟು, ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಮತ್ತು ಜ್ಯೂಸ್. ಇದು ತ್ಚಚೆಯನ್ನು ತೇವಾಂಶದಿಂದ ಇರುವಂತೆ ಮಾಡಿ ಫಿಟ್ ಆಗಿಡಲು ಸಹಕಾರಿಯಾಗಿದೆಯಂತೆ.

Published On - 10:52 pm, Sun, 10 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us