AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಸಮಯದಲ್ಲಿ 15 ಲಕ್ಷ ರೂ. ಗಳಿಕೆ, ಸಹ ಕಲಾವಿದರ ನೆರವಿಗೆ ಪಣತೊಟ್ಟ ಗಾಯಕ

ಚೆನ್ನೈ: ಕೊರೊನಾ ಮಹಾಮರಿಯ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಘೋಷಿಸಿದ ಲಾಕ್​​ಡೌನ್​ನಿಂದ ದೇಶದ ಎಲ್ಲಾ ಚಿತ್ರರಂಗಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವು. ಕೇವಲ ನಟರಲ್ಲದೆ ಇತರೆ ಕಲಾವಿದರು ಮತ್ತು ತಂತ್ರಜ್ಞರು ಸಹ ಈ ವೇಳೆಯಲ್ಲಿ ಆದಾಯವಿಲ್ಲದೆ ಬಳಲಿ ಬೆಂಡಾಗಿ ಹೋದರು. ಇದರಲ್ಲಿ ತಮಿಳುನಾಡಿನ ಕಾಲಿವುಡ್ ಚಿತ್ರರಂಗದ ಕಲಾವಿದರು ಕೂಡ ಒಬ್ಬರು. ಸಹ ಗಾಯಕರ ನೆರವಿಗೆ ನಿಂತ ಸತ್ಯನ್​ ಮಹಾಲಿಂಗಂ ಆದರೆ, ಇಂಥ ಸಮಯದಲ್ಲಿ ಧೃತಿಗೆಡದೆ, ಕಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕನೊಬ್ಬ ತನ್ನ ಸಹ ಗಾಯಕರ ನೆರವಿಗೆ ಮುಂದಾಗಿದ್ದಾರೆ. ಸೋಷಿಯಲ್​ […]

ಲಾಕ್​ಡೌನ್​ ಸಮಯದಲ್ಲಿ 15 ಲಕ್ಷ ರೂ. ಗಳಿಕೆ, ಸಹ ಕಲಾವಿದರ ನೆರವಿಗೆ ಪಣತೊಟ್ಟ ಗಾಯಕ
KUSHAL V
| Updated By: |

Updated on: Jun 28, 2020 | 2:17 PM

Share

ಚೆನ್ನೈ: ಕೊರೊನಾ ಮಹಾಮರಿಯ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಘೋಷಿಸಿದ ಲಾಕ್​​ಡೌನ್​ನಿಂದ ದೇಶದ ಎಲ್ಲಾ ಚಿತ್ರರಂಗಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವು. ಕೇವಲ ನಟರಲ್ಲದೆ ಇತರೆ ಕಲಾವಿದರು ಮತ್ತು ತಂತ್ರಜ್ಞರು ಸಹ ಈ ವೇಳೆಯಲ್ಲಿ ಆದಾಯವಿಲ್ಲದೆ ಬಳಲಿ ಬೆಂಡಾಗಿ ಹೋದರು. ಇದರಲ್ಲಿ ತಮಿಳುನಾಡಿನ ಕಾಲಿವುಡ್ ಚಿತ್ರರಂಗದ ಕಲಾವಿದರು ಕೂಡ ಒಬ್ಬರು.

ಸಹ ಗಾಯಕರ ನೆರವಿಗೆ ನಿಂತ ಸತ್ಯನ್​ ಮಹಾಲಿಂಗಂ ಆದರೆ, ಇಂಥ ಸಮಯದಲ್ಲಿ ಧೃತಿಗೆಡದೆ, ಕಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕನೊಬ್ಬ ತನ್ನ ಸಹ ಗಾಯಕರ ನೆರವಿಗೆ ಮುಂದಾಗಿದ್ದಾರೆ. ಸೋಷಿಯಲ್​ ಮೀಡಿಯಾವನ್ನ ಅಸ್ತ್ರವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯ ಆಧಾರದ ಮೇಲೆ ಕಳೆದ 64ದಿನಗಳಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಇವರು ಬೇರೆ ಯಾರು ಅಲ್ಲ ಚೆನ್ನೈ ಮೂಲದ ಸತ್ಯನ್​ ಮಹಾಲಿಂಗಂ.

ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ‘ಸತ್ಯನ್​ ಉತ್ಸವ’ ಎಂಬ ಹೆಸರಿನ ಲೈವ್ ಕಾರ್ಯಕ್ರಮದ ಮೂಲಕ ಸತತವಾಗಿ ಹಾಡುಗಳನ್ನ ಹಾಡಿದ ಸತ್ಯನ್ ಅದರಲ್ಲಿ ಬಂದ ಹಣವನ್ನ ತಮ್ಮ ಸಹ ಗಾಯಕರಿಗೆ ನೀಡಿದ್ದಾರೆ. ‘ಮ್ಯೂಸಿಕ್​ ಫಾರ್​ ಮ್ಯುಸಿಶಿಯನ್ಸ್​ ’ ಎಂಬ ಯೋಜನೆ ಅಡಿಯಲ್ಲಿ ಇಂಡಸ್ಟ್ರಿಯ ಇತರರ ಸಹಾಯಕ್ಕೆ ಮುಂದಾಗಿದ್ದಾರೆ. ಗಾಯಕರ ಸಂಕಷ್ಟಗಳನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಹೇಳಿರುವ ಸತ್ಯನ್​ ಕಳೆದ ಮೇ 30ರಂದು 25 ಗಂಟೆಗಳ ಕಾಲ ನಿರಂತರವಾಗಿ ಹಾಡುತ್ತಾ ಆರ್ಕೆಸ್ಟ್ರಾ ಗಾಯಕರ ನೆರವಿಗೆ ಮುಂದಾಗಿದ್ದರು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ