AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ನಟಿಸಿದ ಕೊನೆ ಸಿನಿಮಾದ ಟ್ರೈಲರ್ ಹೇಗಿದೆ ಗೊತ್ತಾ?

ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಆದ್ರೆ ಈ ನಟ ಬಿಟ್ಟು ಹೋಗಿರುವ ಅದ್ಭುತ ಸಿನಿ ನೆನಪುಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಇದೀಗ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ ‘ದಿಲ್ ಬೇಚಾರ’ದ ಟ್ರೈಲರ್ ರಿಲೀಸ್ ಆಗಿದೆ. ‘ದಿಲ್ ಬೇಚಾರ’ ಟ್ರೈಲರ್ ನೋಡಿ ಅದೆಷ್ಟು ಮಂದಿ ಕಣ್ಣೀರು ಹಾಕ್ತಿದ್ದಾರೋ ಗೊತ್ತಿಲ್ಲ. ಯಾಕಂದ್ರೆ, ನೋವಿನಲ್ಲೂ ನಗುವ ಸುಶಾಂತ್​ನ ರಿಯಲ್ ಲೈಫ್ ಕ್ಯಾರೆಕ್ಟರ್​ನ ಸಿನಿಮಾದ ಟ್ರೈಲರ್​ನಲ್ಲಿ ಕಾಣಬಹುದು. ಅಂದ ಹಾಗೆ, ಸುಶಾಂತ್ ಗೆಳೆಯ ಮುಕೇಶ್ […]

ಸುಶಾಂತ್ ನಟಿಸಿದ ಕೊನೆ ಸಿನಿಮಾದ ಟ್ರೈಲರ್ ಹೇಗಿದೆ ಗೊತ್ತಾ?
ಸುಶಾಂತ್ ಸಿಂಗ್ ರಜಪೂತ್
KUSHAL V
| Edited By: |

Updated on:Jul 06, 2020 | 8:44 PM

Share

ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಆದ್ರೆ ಈ ನಟ ಬಿಟ್ಟು ಹೋಗಿರುವ ಅದ್ಭುತ ಸಿನಿ ನೆನಪುಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಇದೀಗ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ ‘ದಿಲ್ ಬೇಚಾರ’ದ ಟ್ರೈಲರ್ ರಿಲೀಸ್ ಆಗಿದೆ.

‘ದಿಲ್ ಬೇಚಾರ’ ಟ್ರೈಲರ್ ನೋಡಿ ಅದೆಷ್ಟು ಮಂದಿ ಕಣ್ಣೀರು ಹಾಕ್ತಿದ್ದಾರೋ ಗೊತ್ತಿಲ್ಲ. ಯಾಕಂದ್ರೆ, ನೋವಿನಲ್ಲೂ ನಗುವ ಸುಶಾಂತ್​ನ ರಿಯಲ್ ಲೈಫ್ ಕ್ಯಾರೆಕ್ಟರ್​ನ ಸಿನಿಮಾದ ಟ್ರೈಲರ್​ನಲ್ಲಿ ಕಾಣಬಹುದು. ಅಂದ ಹಾಗೆ, ಸುಶಾಂತ್ ಗೆಳೆಯ ಮುಕೇಶ್ ಛಾಬ್ರಾ ನಿರ್ದೇಶಿಸಿರೋ ಈ ಸಿನಿಮಾ ಜುಲೈ 24ರಂದು OTT ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿದೆ.

ದಿಲ್ ಬೇಚಾರ ಕ್ಯೂಟ್ ಜೋಡಿಯೊಂದರ ನೋವಿನ ಪ್ರೇಮ್ ಕಹಾನಿ. ನಟಿ ಸಂಜನಾ ಸಾಂಘಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಶಾಂತ್​ರದ್ದು ಎಂದಿನಂತೆ ನೋವಿನಲ್ಲೂ ನಗುವ ಪಾತ್ರ. ಇದೀಗ ಸುಶಾಂತ್ ಕೊನೆಯ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ರಾಗ ಸಂಯೋಜನೆ ಮಾಡಿದ್ದಾರೆ. ಹಾಗಾಗಿ, ಸಂಗೀತ ಪ್ರಿಯರಿಗೂ ಈ ಸಿನಿಮಾ ಪಕ್ಕಾ ಲೈಕ್​ ಆಗತ್ತೆ . ಒಟ್ಟಾರೆ, ‘ದಿಲ್ ಬೇಚಾರ’ ಟ್ರೈಲರ್ ನೋಡಿ ಸುಶಾಂತ್ ಫ್ಯಾನ್ಸ್ ನೋವಿನಲ್ಲೂ ಸಂತಸದ ನಗೆ ಬೀರಿದ್ದಾರೆ.

Published On - 8:03 pm, Mon, 6 July 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ