AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ನಟಿಸಿದ ಕೊನೆ ಸಿನಿಮಾದ ಟ್ರೈಲರ್ ಹೇಗಿದೆ ಗೊತ್ತಾ?

ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಆದ್ರೆ ಈ ನಟ ಬಿಟ್ಟು ಹೋಗಿರುವ ಅದ್ಭುತ ಸಿನಿ ನೆನಪುಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಇದೀಗ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ ‘ದಿಲ್ ಬೇಚಾರ’ದ ಟ್ರೈಲರ್ ರಿಲೀಸ್ ಆಗಿದೆ. ‘ದಿಲ್ ಬೇಚಾರ’ ಟ್ರೈಲರ್ ನೋಡಿ ಅದೆಷ್ಟು ಮಂದಿ ಕಣ್ಣೀರು ಹಾಕ್ತಿದ್ದಾರೋ ಗೊತ್ತಿಲ್ಲ. ಯಾಕಂದ್ರೆ, ನೋವಿನಲ್ಲೂ ನಗುವ ಸುಶಾಂತ್​ನ ರಿಯಲ್ ಲೈಫ್ ಕ್ಯಾರೆಕ್ಟರ್​ನ ಸಿನಿಮಾದ ಟ್ರೈಲರ್​ನಲ್ಲಿ ಕಾಣಬಹುದು. ಅಂದ ಹಾಗೆ, ಸುಶಾಂತ್ ಗೆಳೆಯ ಮುಕೇಶ್ […]

ಸುಶಾಂತ್ ನಟಿಸಿದ ಕೊನೆ ಸಿನಿಮಾದ ಟ್ರೈಲರ್ ಹೇಗಿದೆ ಗೊತ್ತಾ?
ಸುಶಾಂತ್ ಸಿಂಗ್ ರಜಪೂತ್
KUSHAL V
| Edited By: |

Updated on:Jul 06, 2020 | 8:44 PM

Share

ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಆದ್ರೆ ಈ ನಟ ಬಿಟ್ಟು ಹೋಗಿರುವ ಅದ್ಭುತ ಸಿನಿ ನೆನಪುಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಇದೀಗ, ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ ‘ದಿಲ್ ಬೇಚಾರ’ದ ಟ್ರೈಲರ್ ರಿಲೀಸ್ ಆಗಿದೆ.

‘ದಿಲ್ ಬೇಚಾರ’ ಟ್ರೈಲರ್ ನೋಡಿ ಅದೆಷ್ಟು ಮಂದಿ ಕಣ್ಣೀರು ಹಾಕ್ತಿದ್ದಾರೋ ಗೊತ್ತಿಲ್ಲ. ಯಾಕಂದ್ರೆ, ನೋವಿನಲ್ಲೂ ನಗುವ ಸುಶಾಂತ್​ನ ರಿಯಲ್ ಲೈಫ್ ಕ್ಯಾರೆಕ್ಟರ್​ನ ಸಿನಿಮಾದ ಟ್ರೈಲರ್​ನಲ್ಲಿ ಕಾಣಬಹುದು. ಅಂದ ಹಾಗೆ, ಸುಶಾಂತ್ ಗೆಳೆಯ ಮುಕೇಶ್ ಛಾಬ್ರಾ ನಿರ್ದೇಶಿಸಿರೋ ಈ ಸಿನಿಮಾ ಜುಲೈ 24ರಂದು OTT ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿದೆ.

ದಿಲ್ ಬೇಚಾರ ಕ್ಯೂಟ್ ಜೋಡಿಯೊಂದರ ನೋವಿನ ಪ್ರೇಮ್ ಕಹಾನಿ. ನಟಿ ಸಂಜನಾ ಸಾಂಘಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಶಾಂತ್​ರದ್ದು ಎಂದಿನಂತೆ ನೋವಿನಲ್ಲೂ ನಗುವ ಪಾತ್ರ. ಇದೀಗ ಸುಶಾಂತ್ ಕೊನೆಯ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ರಾಗ ಸಂಯೋಜನೆ ಮಾಡಿದ್ದಾರೆ. ಹಾಗಾಗಿ, ಸಂಗೀತ ಪ್ರಿಯರಿಗೂ ಈ ಸಿನಿಮಾ ಪಕ್ಕಾ ಲೈಕ್​ ಆಗತ್ತೆ . ಒಟ್ಟಾರೆ, ‘ದಿಲ್ ಬೇಚಾರ’ ಟ್ರೈಲರ್ ನೋಡಿ ಸುಶಾಂತ್ ಫ್ಯಾನ್ಸ್ ನೋವಿನಲ್ಲೂ ಸಂತಸದ ನಗೆ ಬೀರಿದ್ದಾರೆ.

Published On - 8:03 pm, Mon, 6 July 20

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್