AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Tea Benefits: ಗ್ರೀನ್​ ಟೀ ನಿಮ್ಮ ದೇಹಕ್ಕೆ ಎಷ್ಟು ಒಳಿತು? ಇಲ್ಲಿದೆ ಗ್ರೀನ್​ ಟೀ ಮಹತ್ವ

ಗ್ರೀನ್​ ಟೀಯಲ್ಲಿನ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್​ ಎನ್ನುವ ಸಸ್ಯದಿಂದ ಪಡೆಯಲಾಗುತ್ತದೆ. ಬಳಿಕ ಅದನ್ನು ಆಕ್ಸಿಡೀಕರಿಸಲಾಗುತ್ತದೆ. ಗ್ರೀನ್​ ಟೀ ಕಡಿಮೆ ಸಂಸ್ಕರಣೆಗೆ ಒಳಗಾದ ಟೀ ಗಳಲ್ಲಿ ಒಂದಾಗಿದೆ.

Green Tea Benefits: ಗ್ರೀನ್​ ಟೀ ನಿಮ್ಮ ದೇಹಕ್ಕೆ ಎಷ್ಟು ಒಳಿತು? ಇಲ್ಲಿದೆ ಗ್ರೀನ್​ ಟೀ ಮಹತ್ವ
ಗ್ರೀನ್ ಟೀ
TV9 Web
| Edited By: |

Updated on: Dec 11, 2021 | 7:40 AM

Share

ನಾವು ಸೇವಿಸುವ ಆಹಾರ ನಮ್ಮನ್ನು ಆರೋಗ್ಯಯುತವಾಗಿ ಇಡುವಂತೆ ಮಾಡಬೇಕು. ಆಗ ಮಾತ್ರ ಸ್ವಾಸ್ಥ್ಯ ಜೀವನವನ್ನು ನಡೆಸಲು ಸಾಧ್ಯ. ಹಿತಮಿತ ಆಹಾರ ಸೇವನೆ, ವ್ಯಾಯಾಮದಂತಹ ಅಭ್ಯಾಸಗಳಿಂದ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಕೆಲವೊಂದು ಪಾನೀಯಗಳನ್ನು ನಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅವುಗಳಲ್ಲಿ ಗ್ರೀನ್​ ಟೀ ಕೂಡ ಒಂದು. ಗ್ರೀನ್​ ಟೀಯಲ್ಲಿನ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್​ ಎನ್ನುವ ಸಸ್ಯದಿಂದ ಪಡೆಯಲಾಗುತ್ತದೆ. ಬಳಿಕ ಅದನ್ನು ಆಕ್ಸಿಡೀಕರಿಸಲಾಗುತ್ತದೆ. ಗ್ರೀನ್​ ಟೀ ಕಡಿಮೆ ಸಂಸ್ಕರಣೆಗೆ ಒಳಗಾದ ಟೀ ಗಳಲ್ಲಿ ಒಂದಾಗಿದೆ. ಅಲ್ಲದೆ ಗ್ರೀನ್​ಟೀಯಲ್ಲಿ ಹೆಚ್ಚು ರೋಗ ನಿರೊಧಕ ಶಕ್ತಿ ಇರುತ್ತದೆ. ಜತೆಗೆ ಪಲಿಫಿನಾಲ್​ ಅಂಶಗಳು ಹೇರಳವಾಗಿರುತ್ತವೆಗ್ರೀನ್​ ಟೀ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಅಲ್ಲದೆ ಒಂದು ಅಧ್ಯಯನದ ಪ್ರಕಾರ ಗ್ರೀನ ಟಿ ಮಾನವನ ಜೀವಿತಾವಧಿಯನ್ನು ಕೂಡ ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಗ್ರೀನ್​ ಟೀ ಸೇವನೆ ಉತ್ತಮ ಅಭ್ಯಾಸವಾಗಿದೆ.

ರೋಗ ನಿರೋಧಕ ಶಕ್ತಿ ಗ್ರೀನ್​ ಟೀ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗ್ರೀನ್​ ಟೀಯಲ್ಲಿರುವ ಉತ್ತಮ ಪೋಷಕಾಂಶಗಳು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ನೆರವಾಗಿ,ದೇಹವನ್ನು ಶುದ್ಧವಾಗಿರಿಸುತ್ತದೆ.

ತ್ವಚೆಯ ರಕ್ಷಣೆ ಗ್ರೀನ್​ ಟೀ ತ್ವಚೆಯ ರಕ್ಷಣೆಯನ್ನು ಮಾಡುತ್ತದೆ. ಸುಕ್ಕಾದ ಹಾಗೂ ಕಳೆಗುಂದಿದ ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಅತಿಯಾದ ತೂಕವನ್ನೂ ತೆಗೆದುಹಾಕಲು ಗ್ರೀನ್​ ಟೀ ಉತ್ತಮ ಪಾನೀಯವಾಗಿದೆ.

ಹೃದಯದ ರಕ್ಷಣೆ ಗ್ರೀನ್​ ಟೀ ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ. ಹೃದಯದ ರಕ್ತನಾಳದಲ್ಲಿನ ಕಾಯಿಲೆಗಳನ್ನು ದೂರಮಾಡುತ್ತವೆ. ಹಾಗೂ ರಕ್ತದೊತ್ತಡವನ್ನು ಕಡಿಮೆಗೊಳಿಸಿ ರಕ್ತಸಂಚಾರವನ್ನು ಸರಾಗಗೊಳಿಸುತ್ತದೆ.

ಅಮೆರಿಕನ್​ ಜರ್ನಲ್​ ಆಫ್​ ಕ್ಲಿನಕಲ್​ ನ್ಯೂಟ್ರಿಷನ್​ನಲ್ಲಿ ಪ್ರಕಟವಾದ ವರದಿ ಕೂಡ ಗ್ರೀನ್​ ಟೀ ಸೇವನೆ ಮಧ್ಯ ವಯಸ್ಕರಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ ಎಂದು ಸಾಬೀತುಪಡಿಸಿದೆ. ಹೀಗಾಗಿ ದಿನಕ್ಕೆ 2-3ಬಾರಿಯಾದರೂ ಗ್ರೀನ್​ ಟೀ ಸೇವಿಸಿ ಇದು ನಿಮ್ಮ ಆರೋಗ್ಯ ಜೀವನಕ್ಕೆ ಕೀಲಿಕೈ ಆಗಲಿದೆ. ನೆನಪಿಡಿ ದಿನದಲ್ಲಿ 3 ಕ್ಕಿಂತ ಹೆಚ್ಚು ಬಾರಿ ಗ್ರೀನ್ ಟೀ ಸೇವನೆ ಒಳಿತಲ್ಲ. ಇದು ನಿಮ್ಮ ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು.​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ