
ತರಕಾರಿಯ ಸಿಪ್ಪೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಫೈಬರ್ನಂತಹ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಜನರು ತರಕಾರಿಯ ಸಿಪ್ಪೆ ತೆಗೆಯದೇ ಉಪಯೋಗಿಸಲು ಇಚ್ಛಿಸುತ್ತಿದ್ದಾರೆ. ಆದರೆ ಸಿಪ್ಪೆ ತೆಗೆಯದೇ ಯಾವುದೇ ಹಣ್ಣು ತರಕಾರಿಯನ್ನು ನೀವು ತಿನ್ನಲು ಬಯಸಿದರೆ ಅವುಗಳಲ್ಲಿ ಇರುವ ಕೀಟನಾಶಕ ಗಳನ್ನು ಸರಿಯಾಗಿ ತೆಗೆದುಹಾಕುವುದು ಬಹಳ ಅಗತ್ಯ. ಏಕೆಂದರೆ ಈ ರಾಸಾಯನಿಕಗಳು ದೀರ್ಘಕಾಲಿಕವಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ತಣ್ಣೀರಿನಲ್ಲಿ ತೊಳೆಯುವುದು:
ಹೆಚ್ಚಿನ ಹಣ್ಣು-ತರಕಾರಿಗಳ ಮೇಲೆ ಇರುವ ಸುಮಾರು ಶೇ.75-80 ಕೀಟನಾಶಕದ ಅಂಶ ಸರಿಯಾಗಿ ತಣ್ಣೀರಿನಲ್ಲಿ ತೊಳೆಯುವ ಮೂಲಕವೇ ತೆಗೆದುಹೋಗುತ್ತವೆ. ಇದು ಪ್ರತಿ ಉಪಯೋಗದ ಮುಂಚೆಯೂ ಮಾಡಬೇಕಾದ ಪಾಠವಾಗಬೇಕು. ಇನ್ನಷ್ಟು ಪರಿಣಾಮಕಾರಿಯಾದ ವಿಧಾನವೆಂದರೆ ಉಪ್ಪು ನೀರಿನಲ್ಲಿ ತೊಳೆಯುವುದು. ಇದು ಕೆಲವೊಂದು ಕಠಿಣ ಕೀಟನಾಶಕಗಳ ಅಂಶವನ್ನು ಕಡಿಮೆ ಮಾಡಬಹುದು.
ಈ ರೀತಿಯಾಗಿ ತಯಾರಾದ ಉಪ್ಪು ನೀರಿನಲ್ಲಿ ನೀವು ಹಣ್ಣುಗಳು ಮತ್ತು ತರಕಾರಿಗಳನ್ನು 5 ರಿಂದ 10 ನಿಮಿಷಗಳವರೆಗೆ ಮುಳುಗಿಸಿ, ನಂತರ ತಣ್ಣೀರಿನಲ್ಲಿ ಮತ್ತೆ ತೊಳೆಯಿರಿ.
ಬೇಕಿಂಗ್ ಸೋಡಾ ದ್ರಾವಣ:
ಇದನ್ನೂ ಓದಿ: Health Tips: ದಿನದಲ್ಲಿ ಹಲವು ಬಾರಿ ಮಲ ವಿಸರ್ಜನೆಯಾಗಲು ಕಾರಣವೇನು?
ಮಾಡಬಾರದವು:
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ
ಆಯುರ್ವೇದ ವೈದ್ಯರು, ಶಿರಸಿ – 581401
ದೂರವಾಣಿ: 08384-225836
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Fri, 27 June 25