Diabetes Care: ಮಧುಮೇಹಿಗಳು ಎಂದಿಗೂ ಈ ಹಣ್ಣುಗಳನ್ನು ತಿನ್ನಲೇಬೇಡಿ!

|

Updated on: Oct 04, 2023 | 6:25 PM

ವಯಸ್ಸಾದವರು ಮಾತ್ರವಲ್ಲದೆ ಯುವಜನರು ಸಹ ಮಧುಮೇಹದಿಂದ ಬಳಲುತ್ತಿದ್ದಾರೆ. ಒತ್ತಡದ ಜೀವನಶೈಲಿಯಿಂದ ಮಧುಮೇಹ ಕಾಯಿಲೆ ಹೆಚ್ಚಾಗುತ್ತಿದೆ ಎಂದು ದೆಹಲಿಯ ಆರೋಗ್ಯ ತಜ್ಞ ಡಾ.ಅಜಯ್ ಎಚ್ಚರಿಸುತ್ತಾರೆ. ಇದರೊಂದಿಗೆ, ಮಧುಮೇಹ ರೋಗಿಗಳಿಗೆ ಕೆಲವು ಹಣ್ಣುಗಳಿಂದ ದೂರವಿರುವಂತೆಯೂ ಅವರು ಸಲಹೆ ನೀಡಿದ್ದಾರೆ.

Diabetes Care: ಮಧುಮೇಹಿಗಳು ಎಂದಿಗೂ ಈ ಹಣ್ಣುಗಳನ್ನು ತಿನ್ನಲೇಬೇಡಿ!
Diabetes Care
Follow us on

ಪ್ರಪಂಚದಾದ್ಯಂತ ಸಾಕಷ್ಟು ಜನರು ಟೈಪ್ 2 ಮಧುಮೇಹದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಯೋವೃದ್ಧರು ಮಾತ್ರವಲ್ಲ ಯುವಕರು ಕೂಡ ಇದಕ್ಕೆ ತುತ್ತಾಗುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ಮಧುಮೇಹವನ್ನು ಗುಣಪಡಿಸಲಾಗುವುದಿಲ್ಲ ಆದರೆ ಅದನ್ನು ನಿಯಂತ್ರಿಸಬಹುದು. ಕಳಪೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿಯ ಮೂಲಕ ಈ ಸಮಸ್ಯೆಯನ್ನು ನಿಭಾಯಿಸಬಹುದಾಗಿದೆ. ಈ ಕುರಿತು ದೆಹಲಿಯ ಆರೋಗ್ಯ ತಜ್ಞರಾದ ಡಾ. ಡಾ.ಅಜಯ್ ಅವರು ಮಧುಮೇಹಿಗಳ ಆಹಾರ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.

ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಹಣ್ಣುಗಳು:

ನೈಸರ್ಗಿಕ ಸಕ್ಕರೆ ಹಣ್ಣುಗಳಲ್ಲಿ ಕಂಡುಬರುತ್ತದೆ, ಆದರೆ ಕೆಲವು ಹಣ್ಣುಗಳು ಮಧುಮೇಹ ರೋಗಿಗಳಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ಡಾ. ಅಜಯ್ ಹೇಳುತ್ತಾರೆ. ಕೆಲವು ಹಣ್ಣುಗಳನ್ನು ತಿನ್ನುವುದು ರಕ್ತದಲ್ಲಿ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗಲು ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹ ರೋಗಿಗಳು ಯಾವ ಹಣ್ಣುಗಳಿಂದ ದೂರವಿರಬೇಕು ಎಂದು ತಿಳಿಯೋಣ.

ಬಾಳೆಹಣ್ಣು:

ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನಬಾರದು. ಬಾಳೆಹಣ್ಣು ಹೆಚ್ಚಿನ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಅನಾನಸ್:

ಅನಾನಸ್‌ನಲ್ಲಿ ವಿಟಮಿನ್ ಸಿ ಕೂಡ ಇದೆ ಎಂದು ಡಾ.ಅಜಯ್ ಹೇಳುತ್ತಾರೆ, ಆದರೆ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶದಿಂದಾಗಿ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ರಾತ್ರಿ ಊಟ ಬಿಡುವುದರಿಂದ ಆರೋಗ್ಯದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ?

ಚಿಕ್ಕು ಅಥವಾ ಸಪೋಟ:

ಆಲೂಗೆಡ್ಡೆಯಂತೆ ಕಾಣುವ ಸಪೋಟ ತಿನ್ನಲು ರುಚಿಯಾಗಿರುತ್ತದೆ ಆದರೆ ಮಧುಮೇಹಿಗಳು ಅದರಿಂದ ದೂರವಿರಬೇಕು. ಸಪೋಟಾವು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ, ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.

ಲಿಚಿ:

ಮಧುಮೇಹ ರೋಗಿಗಳು ಲಿಚಿ ತಿನ್ನುವುದನ್ನು ತಪ್ಪಿಸಬೇಕು. ವಾಸ್ತವವಾಗಿ, ಲಿಚಿಯು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯು ವೇಗವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಸಪೋಟಾದಿಂದ ದೂರವಿರಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಯಾವ ಹಣ್ಣುಗಳನ್ನು ತಿನ್ನಬೇಕು?

ಈ ಕುರಿತು ಡಾ.ಅಜಯ್ ಕುಮಾರ್ ಅವರು ಹೇಳುವಂತೆ, ಮಧುಮೇಹ ರೋಗಿಗಳು ಸೀಮಿತ ಪ್ರಮಾಣದಲ್ಲಿ ಸೇಬು ತಿನ್ನಬಹುದು. ಇದಲ್ಲದೆ, ಕಿತ್ತಳೆ ಹಣ್ಣು ಸಹ ತಿನ್ನಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: