AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಪ್​ಕಾರ್ನ್​ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನಾಕ್ಸ್​ಗಳಲ್ಲೂ ಕಡಿಮೆ ಕ್ಯಾಲೋರಿಯುಳ್ಳ ಆಹಾರವಿರುತ್ತದೆ. ಅದನ್ನು ಸೇವಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದುವೇ ಪಾಪ್​ಕಾರ್ನ್​.

ಪಾಪ್​ಕಾರ್ನ್​ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ
ಪಾಪ್​ಕಾರ್ನ್​
TV9 Web
| Edited By: |

Updated on: Feb 06, 2022 | 11:34 AM

Share

ಕೆಲವರ ಪಾಲಿಗೆ ದೇಹದ ತೂಕ ಇಲಿಸಿಕೊಳ್ಳುವುದು ಒಂದು ರೀತಿಯ ನಿರಂತರ ಕೆಲಸ ಎನ್ನುವಂತಾಗಿರುತ್ತದೆ.  ಸದಾ ಕಾಲ ಕರಿದ ಪದಾರ್ಥಗಳಿಗೆ, ಜಂಕ್​ ಫುಡ್​ಗಳತ್ತ ಎಳೆಯುವ ಮನಸ್ಸು ಡೆಯೆಟ್​ ಕಡೆಗೆ ಗಮನಹರಿಸುವುದಿಲ್ಲ. ಕೊನೆಗೆ ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳು ಆರಂಭವಾಗುತ್ತದೆ. ಇದಕ್ಕೆ ನೀವು ಕಡಿಮೆ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ.  ಸ್ನಾಕ್ಸ್​ಗಳಲ್ಲೂ ಕಡಿಮೆ ಕ್ಯಾಲೋರಿಯುಳ್ಳ ಆಹಾರವಿರುತ್ತದೆ. ಅದನ್ನು ಸೇವಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದುವೇ ಪಾಪ್​ಕಾರ್ನ್​. ಹೌದು ಪಾಪ್ ಕಾರ್ನ್​ ನಲ್ಲಿ ಕಡಿಮೆ ಕ್ಯಾಲೋರಿಯಿರುತ್ತದೆ ಎನ್ನಲಾಗಿದ್ದು, ದೇಹದ ತೂಕ ಇಳಿಕೆಗೆ ಸಹಾಯಕ ಎನ್ನಲಾಗಿದೆ.  ಈ ಕುರಿತು ಟೈಮ್ಸ್​ ಆಫ್​ ಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಾಪ್​ ಕಾರ್ನ್​ ದೇಹದ ತೂಕ ಇಳಿಸಿಕೊಳ್ಳುವ ಅತ್ಯುತ್ತಮ ಆಹಾರವಾಗಿದೆ.  ಆದರೆ ಅದನ್ನು ನೀವು ಹೇಗೆ ಸೇವಿಸುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ.  ಪಾಪ್​ಕಾರ್ನ್​ ದೇಹದ ತೂಕ ಇಳಿಕೆ ಮಾಡುತ್ತದೆ ಎಂದು ನಿರಂತರವಾಗಿ ಸೇವಿಸಬೇಡಿ. ಇದು ನಿಮ್ಮ ಡಯೆಟ್​ ಪ್ಲಾನ್​ಅನ್ನು ಹಾಳು ಮಾಡುತ್ತದೆ. ರೆಸ್ಟೋರೆಂಟ್​​, ಹೊಟೇಲ್​ಗಳಲ್ಲಿ ಕೊಡುವ ಪಾಪ್​​ಕಾರ್ನ್​ಗಳ್ಲಿ ಹೆಚ್ಚು ಮಸಾಲೆ ಮತ್ತು ಉಪ್ಪು ಮಿಶ್ರಣಗೊಂಡಿರುತ್ತದೆ ಹೀಗಾಗಿ ಅದರ ಅತಿಯಾದ ಬಳಕೆ ಬೇಡ. ನೀವು ಪಾಪ್​ಕಾರ್ನ್​ ತಿನ್ನ ಬೇಕೆಂದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ.  ಒಂದ ಬೌಲ್​ ಪಾಪ್​ಕಾರ್ನ್​ನಲ್ಲಿ ಸುಮಾರು 30 ರಷ್ಟು ಕ್ಯಾಲೋರಿ ಇರುತ್ತದೆ. ಅಲ್ಲದೆ ಪಾಪ್​​ಕಾರ್ನ್​ನಲ್ಲಿ ವಿಟಮಿನ್ ಬಿ,ಎ, ಇ,ಕೆ ಜತೆಗೆ ಪ್ರೋಟೀನ್​ ಕೂಡ ಒಳಗೊಂಡಿದೆ ಎನ್ನುತ್ತಾರೆ ತಜ್ಞರು. 75 ಗ್ರಾಂ  ಏರ್​ ಪಾಪ್ಡ್​ ನಲ್ಲಿ ಸುಮಾರು 750 ಗ್ರಾಂ ಪಾಲಿಫಿನಾಲ್ಗಳಿರುತ್ತವೆ. 

ಪಾಪ್​ಕಾರ್ನ್​ಗಳು ದೇಹದ ತೂಕ ಮಾತ್ರವಲ್ಲದೆ ಹಲವು ಕಾಯಿಲೆಗಳು ಬರದಂತೆಯೂ ತಡೆಯುತ್ತದೆ ಎನ್ನಲಾಗಿದೆ. ಅದರಲ್ಲಿ ಮೊದಲನೆಯದು ಕ್ಯಾನ್ಸರ್​. ದೇಹದಲ್ಲಿ ಕ್ಯಾನ್ಸರ್​ ಜೀವಕೋಶಗಳ ಉತ್ಪತ್ತಿಯನ್ನು ತಡೆಯುತ್ತದೆ. ಕಣ್ಣಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಜತೆಗೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಪಾಪ್​ಕಾರ್ನ್​ ನೆರವಾಗುವುದಂತೆ.  ಜೀರ್ಣ ಕ್ರಿಯೆ ಸಮಸ್ಯೆಗೂ  ಪರಿಹಾರ ನೀಡುವ  ಪಾಪ್​ಕಾರ್ನ್​ ಹಲವು  ಆರೋಗ್ಯ ಸುಧಾರಿಸುವ ಗುಣಗಳನ್ನು ಹೊಂದಿದೆ.

(ಇಲ್ಲಿರುವ ಮಾಹಿತಿ ಟಿವಿ9 ಕನ್ನಡ ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೀಮ್ಸ್​ ಆಪ್​ ಇಂಡಿಯಾ ವರದಿಯನ್ನು ಆಧರಿಸಿ ಸಲಹೆ ನೀಡಲಾಗಿದೆ)

ಇದನ್ನೂ ಓದಿ:

Health Tips: ದೇಹದಲ್ಲಿನ ಊತವನ್ನು ತೆಗೆದುಹಾಕಲು ಈ 5 ಮನೆಮದ್ದುಗಳನ್ನು ಅನುಸರಿಸಿ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು