ಪಾಪ್​ಕಾರ್ನ್​ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನಾಕ್ಸ್​ಗಳಲ್ಲೂ ಕಡಿಮೆ ಕ್ಯಾಲೋರಿಯುಳ್ಳ ಆಹಾರವಿರುತ್ತದೆ. ಅದನ್ನು ಸೇವಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದುವೇ ಪಾಪ್​ಕಾರ್ನ್​.

ಪಾಪ್​ಕಾರ್ನ್​ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ
ಪಾಪ್​ಕಾರ್ನ್​
Follow us
| Updated By: Pavitra Bhat Jigalemane

Updated on: Feb 06, 2022 | 11:34 AM

ಕೆಲವರ ಪಾಲಿಗೆ ದೇಹದ ತೂಕ ಇಲಿಸಿಕೊಳ್ಳುವುದು ಒಂದು ರೀತಿಯ ನಿರಂತರ ಕೆಲಸ ಎನ್ನುವಂತಾಗಿರುತ್ತದೆ.  ಸದಾ ಕಾಲ ಕರಿದ ಪದಾರ್ಥಗಳಿಗೆ, ಜಂಕ್​ ಫುಡ್​ಗಳತ್ತ ಎಳೆಯುವ ಮನಸ್ಸು ಡೆಯೆಟ್​ ಕಡೆಗೆ ಗಮನಹರಿಸುವುದಿಲ್ಲ. ಕೊನೆಗೆ ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳು ಆರಂಭವಾಗುತ್ತದೆ. ಇದಕ್ಕೆ ನೀವು ಕಡಿಮೆ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ.  ಸ್ನಾಕ್ಸ್​ಗಳಲ್ಲೂ ಕಡಿಮೆ ಕ್ಯಾಲೋರಿಯುಳ್ಳ ಆಹಾರವಿರುತ್ತದೆ. ಅದನ್ನು ಸೇವಿಸಿದರೆ ದೇಹದ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದುವೇ ಪಾಪ್​ಕಾರ್ನ್​. ಹೌದು ಪಾಪ್ ಕಾರ್ನ್​ ನಲ್ಲಿ ಕಡಿಮೆ ಕ್ಯಾಲೋರಿಯಿರುತ್ತದೆ ಎನ್ನಲಾಗಿದ್ದು, ದೇಹದ ತೂಕ ಇಳಿಕೆಗೆ ಸಹಾಯಕ ಎನ್ನಲಾಗಿದೆ.  ಈ ಕುರಿತು ಟೈಮ್ಸ್​ ಆಫ್​ ಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಾಪ್​ ಕಾರ್ನ್​ ದೇಹದ ತೂಕ ಇಳಿಸಿಕೊಳ್ಳುವ ಅತ್ಯುತ್ತಮ ಆಹಾರವಾಗಿದೆ.  ಆದರೆ ಅದನ್ನು ನೀವು ಹೇಗೆ ಸೇವಿಸುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ.  ಪಾಪ್​ಕಾರ್ನ್​ ದೇಹದ ತೂಕ ಇಳಿಕೆ ಮಾಡುತ್ತದೆ ಎಂದು ನಿರಂತರವಾಗಿ ಸೇವಿಸಬೇಡಿ. ಇದು ನಿಮ್ಮ ಡಯೆಟ್​ ಪ್ಲಾನ್​ಅನ್ನು ಹಾಳು ಮಾಡುತ್ತದೆ. ರೆಸ್ಟೋರೆಂಟ್​​, ಹೊಟೇಲ್​ಗಳಲ್ಲಿ ಕೊಡುವ ಪಾಪ್​​ಕಾರ್ನ್​ಗಳ್ಲಿ ಹೆಚ್ಚು ಮಸಾಲೆ ಮತ್ತು ಉಪ್ಪು ಮಿಶ್ರಣಗೊಂಡಿರುತ್ತದೆ ಹೀಗಾಗಿ ಅದರ ಅತಿಯಾದ ಬಳಕೆ ಬೇಡ. ನೀವು ಪಾಪ್​ಕಾರ್ನ್​ ತಿನ್ನ ಬೇಕೆಂದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ.  ಒಂದ ಬೌಲ್​ ಪಾಪ್​ಕಾರ್ನ್​ನಲ್ಲಿ ಸುಮಾರು 30 ರಷ್ಟು ಕ್ಯಾಲೋರಿ ಇರುತ್ತದೆ. ಅಲ್ಲದೆ ಪಾಪ್​​ಕಾರ್ನ್​ನಲ್ಲಿ ವಿಟಮಿನ್ ಬಿ,ಎ, ಇ,ಕೆ ಜತೆಗೆ ಪ್ರೋಟೀನ್​ ಕೂಡ ಒಳಗೊಂಡಿದೆ ಎನ್ನುತ್ತಾರೆ ತಜ್ಞರು. 75 ಗ್ರಾಂ  ಏರ್​ ಪಾಪ್ಡ್​ ನಲ್ಲಿ ಸುಮಾರು 750 ಗ್ರಾಂ ಪಾಲಿಫಿನಾಲ್ಗಳಿರುತ್ತವೆ. 

ಪಾಪ್​ಕಾರ್ನ್​ಗಳು ದೇಹದ ತೂಕ ಮಾತ್ರವಲ್ಲದೆ ಹಲವು ಕಾಯಿಲೆಗಳು ಬರದಂತೆಯೂ ತಡೆಯುತ್ತದೆ ಎನ್ನಲಾಗಿದೆ. ಅದರಲ್ಲಿ ಮೊದಲನೆಯದು ಕ್ಯಾನ್ಸರ್​. ದೇಹದಲ್ಲಿ ಕ್ಯಾನ್ಸರ್​ ಜೀವಕೋಶಗಳ ಉತ್ಪತ್ತಿಯನ್ನು ತಡೆಯುತ್ತದೆ. ಕಣ್ಣಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಜತೆಗೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಪಾಪ್​ಕಾರ್ನ್​ ನೆರವಾಗುವುದಂತೆ.  ಜೀರ್ಣ ಕ್ರಿಯೆ ಸಮಸ್ಯೆಗೂ  ಪರಿಹಾರ ನೀಡುವ  ಪಾಪ್​ಕಾರ್ನ್​ ಹಲವು  ಆರೋಗ್ಯ ಸುಧಾರಿಸುವ ಗುಣಗಳನ್ನು ಹೊಂದಿದೆ.

(ಇಲ್ಲಿರುವ ಮಾಹಿತಿ ಟಿವಿ9 ಕನ್ನಡ ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೀಮ್ಸ್​ ಆಪ್​ ಇಂಡಿಯಾ ವರದಿಯನ್ನು ಆಧರಿಸಿ ಸಲಹೆ ನೀಡಲಾಗಿದೆ)

ಇದನ್ನೂ ಓದಿ:

Health Tips: ದೇಹದಲ್ಲಿನ ಊತವನ್ನು ತೆಗೆದುಹಾಕಲು ಈ 5 ಮನೆಮದ್ದುಗಳನ್ನು ಅನುಸರಿಸಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ