AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Allopathic vs Homeopathic: ಎರಡು ವೈದ್ಯಕೀಯ ವಿಧಾನಗಳನ್ನು ಅನುಸರಿಸುವುದರಿಂದ ಆಗುವ ಸಾಧಕ-ಬಾಧಕಗಳೇನು? ವೈದ್ಯರು ಏನು ಹೇಳುತ್ತಾರೆ?

ರೋಗವನ್ನು ಗುಣಪಡಿಸಲು ಅಲೋಪತಿ ಅಥವಾ ಹೋಮಿಯೋಪತಿ ವಿಧಾನವನ್ನು ಅನುಸರಿಸಬೇಕೇ ಎಂಬ ಸಂದಿಗ್ಧತೆ ಯಾವಾಗಲೂ ಇದೆ. ಹೀಗಿದ್ದಾಗ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗಿಗಳು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕು? ಇಲ್ಲಿದೆ ನೋಡಿ ಮಾಹಿತಿ.

Allopathic vs Homeopathic: ಎರಡು ವೈದ್ಯಕೀಯ ವಿಧಾನಗಳನ್ನು ಅನುಸರಿಸುವುದರಿಂದ ಆಗುವ ಸಾಧಕ-ಬಾಧಕಗಳೇನು? ವೈದ್ಯರು ಏನು ಹೇಳುತ್ತಾರೆ?
ಸಾಂಕೇತಿಕ ಚಿತ್ರ
TV9 Web
| Updated By: Rakesh Nayak Manchi|

Updated on: Aug 27, 2022 | 6:00 AM

Share

ಕೋವಿಡ್ -19 ಲಸಿಕೆ ಕುರಿತು ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ಅವರ ಕಾಮೆಂಟ್‌ಗಳು ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿರುವುದು ಗೊತ್ತೇ ಇದೆ. ರಾಮ್​ದೇವ್ ಅವರ ಹೇಳಿಕೆಗೆ ತಿರುಗಿಬಿದ್ದ ವೈದ್ಯಕೀಯ ಮಂಡಳಿ, ಬಾಬಾ ರಾಮ್‌ದೇವ್ ಅವರು ಅಲೋಪತಿ ವೈದ್ಯಕೀಯ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಕೂಡ ಗೊತ್ತೇ ಇದೆ. ಅದೇ ರೀತಿ ಸುಪ್ರೀಂಕೋರ್ಟ್ ಕೂಡ ರಾಮದೇವ್ ಬಾಬಾ ಹೇಳಿಕೆಗೆ ಅಸಹನೆ ವ್ಯಕ್ತಪಡಿಸಿದೆ. ರೋಗವನ್ನು ಗುಣಪಡಿಸಲು ಅಲೋಪತಿ ಅಥವಾ ಹೋಮಿಯೋಪತಿ ವಿಧಾನವನ್ನು ಅನುಸರಿಸಬೇಕೇ ಎಂಬ ಸಂದಿಗ್ಧತೆ ಯಾವಾಗಲೂ ಇದೆ. ಹೀಗಿದ್ದಾಗ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗಿಗಳು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕು? ಮುಂಬೈನ ವೊಕಾರ್ಡ್ ಆಸ್ಪತ್ರೆಯ ಮೆಡಿಸಿನ್ ಮುಖ್ಯಸ್ಥ ಡಾ.ಬೆಹ್ರಾಮ್ ಪಾರ್ಧಿವಾಲಾ ಅವರು ಟಿವಿ9 ಜೊತೆ ವಿಶೇಷವಾಗಿ ಇಂತಹ ವಿಷಯಗಳ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹಂಚಿಕೊಂಡ ವಿಷಯಗಳು ಅವರ ಮಾತಿನಲ್ಲೇ ಇವೆ.

ರೋಗವನ್ನು ಗುಣಪಡಿಸಲು ಅಲೋಪತಿ ಅಥವಾ ಹೋಮಿಯೋಪತಿ ವಿಧಾನವನ್ನು ಅನುಸರಿಸಬೇಕೇ ಎಂಬ ಸಂದಿಗ್ಧತೆ ಯಾವಾಗಲೂ ಇದೆ. ಈ ಚರ್ಚೆ ನಡೆಯುತ್ತಿರುವಾಗ ರೋಗಿಯು ಎರಡು ಕಾರ್ಯವಿಧಾನಗಳನ್ನು ಅನುಸರಿಸುವ ಪರಿಣಾಮಗಳೇನು? ಅನೇಕ ಅಲೋಪತಿ ವೈದ್ಯರು ಪರ್ಯಾಯ ಔಷಧವು ಅಸ್ತಿತ್ವದಲ್ಲಿಲ್ಲ ಎಂಬ ಅಭಿಪ್ರಾಯದಲ್ಲಿದ್ದಾರೆ. ಆದರೆ ಕೆಲವು ಆಯುರ್ವೇದ ಔಷಧಿಗಳಲ್ಲಿ ಲೋಹಗಳು ಪತ್ತೆಯಾದ ಪ್ರಕರಣಗಳೂ ಇವೆ. ಅಲೋಪತಿಯ ಪರ್ಯಾಯ ಚಿಕಿತ್ಸೆಯು ಕೋವಿಡ್-19 ನಂತಹ ಕಾಯಿಲೆಗಳನ್ನು ಗುಣಪಡಿಸಬಹುದು ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ ಇದು ಮಾನವ ಜೀವನದ ವಿಷಯವಾಗಿದೆ ಎಂದು ಗುರುತಿಸಬೇಕು.

ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ

ಅಲೋಪತಿಯಿಂದ ಮಾತ್ರ ಗುಣಪಡಿಸಬಹುದಾದ ಕೆಲವು ರೋಗಗಳಿವೆ. ಅಂತಹ ಸಂದರ್ಭಗಳಲ್ಲಿ ಆಯುರ್ವೇದ ಅಥವಾ ಯಾವುದೇ ಪರ್ಯಾಯ ವಿಧಾನಗಳು ಕೆಲಸ ಮಾಡುವುದಿಲ್ಲ ಎಂದು ರೋಗಿಯು ಅರಿತುಕೊಳ್ಳಬೇಕು. ಒಬ್ಬ ವ್ಯಕ್ತಿಯು ಯಾವುದೇ ಕಾಯಿಲೆಯಿಂದ ಬಳಲುತ್ತಿರುವಾಗ ಅವನು ಎಲ್ಲವನ್ನೂ ನಂಬುತ್ತಾನೆ. ಆದರೆ ಚಿಕಿತ್ಸೆಗಾಗಿ ಆಯ್ಕೆ ಮಾಡುವ ವಿಧಾನಗಳನ್ನು ಸಂಪೂರ್ಣವಾಗಿ ತಿಳಿದಿರಬೇಕು. ಕೆಲವು ವಿಧದ ಆಯುರ್ವೇದ ಔಷಧಿಗಳಲ್ಲಿ ಅಲೋಪತಿ ಔಷಧವಿದೆ ಎಂದು ನಮ್ಮ ಸಂಶೋಧನೆಯು ತೋರಿಸಿದೆ.

ಇದೇ ವಿಚಾರವಾಗಿ ಖ್ಯಾತ ಹೋಮಿಯೋಪತಿ ವೈದ್ಯ ಡಾ.ಕುಶಾಲ್ ಬ್ಯಾನರ್ಜಿ ಹೇಳಿದ್ದು, ಹೋಮಿಯೋಪತಿ ಮತ್ತು ಅಲೋಪತಿ ಚಿಕಿತ್ಸೆಯನ್ನು ಒಟ್ಟಿಗೆ ತೆಗೆದುಕೊಂಡರೆ ಯಾವುದೇ ಅಪಾಯವಿಲ್ಲ. ಆದರೆ ರೋಗಿಯು ಈ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಅನೇಕ ರೋಗಿಗಳು ತಮ್ಮ ವೈದ್ಯರಿಗೆ ತಾವು ಯಾವ ವೈದ್ಯಕೀಯ ವಿಧಾನಕ್ಕೆ ಒಳಗಾಗುತ್ತಿದ್ದೇವೆ ಎಂದು ಹೇಳುವುದಿಲ್ಲ. ವೈದ್ಯರು ತನಗೆ ತಿಳಿದಿರುವ ಗಡಿಗಳಿಗೆ ಅಂಟಿಕೊಳ್ಳಬೇಕು. ಹೋಮಿಯೋಪತಿ ತನ್ನ ಕ್ಷೇತ್ರದ ಬಗ್ಗೆ ಮಾತ್ರ ಮಾತನಾಡಬೇಕು, ಅಲೋಪತಿಗೆ ತನ್ನ ವೈದ್ಯಕೀಯ ವಿಜ್ಞಾನದ ಜ್ಞಾನವಿರುತ್ತದೆ.

ಇಬ್ಬರೂ ಸೇರಿ ರೋಗಿಗೆ ಚಿಕಿತ್ಸೆ ನೀಡಬಹುದು ಎಂದು ಕುಶಾಲ್ ವಿವರಿಸಿದರು. ಆದರೆ ಎರಡು ವೈದ್ಯಕೀಯ ವಿಧಾನಗಳನ್ನು ವಿವೇಚನೆಯಿಲ್ಲದೆ ಅನುಸರಿಸುವುದು ಅಪಾಯಕಾರಿ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯೊಬ್ಬರು ಕೆಲವು ವಾರಗಳವರೆಗೆ ಅಲೋಪತಿ ಚಿಕಿತ್ಸೆಯನ್ನು ತೆಗೆದುಕೊಂಡರೂ ರೋಗ ಗುಣಮುಖವಾಗದಿದ್ದರೆ ಹೋಮಿಯೋಪತಿಗೆ ಮಾರುಹೋಗುತ್ತಾರೆ. ಇದು ಕೂಡ ಫಲಕಾರಿಯಾಗದಿದ್ದರೆ ಮತ್ತೆ ಅಲೋಪತಿ ಚಿಕಿತ್ಸೆಗೆ ಒಳಗಾಗುತ್ತಾರೆ. ಇದು ರೋಗವನ್ನು ನಿಯಂತ್ರಿಸಲು ಹೆಚ್ಚು ಕಷ್ಟಕರವಾಗಿಸಬಹುದು.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್