Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಕ ಇಳಿಸಿಕೊಳ್ಳಲು ಪ್ರತಿ ಸಲ ಊಟವಾದ ಮೇಲೂ ಗ್ರೀನ್ ಟೀ ಕುಡಿಯಬೇಕಾ?

ಪೌಷ್ಟಿಕಾಂಶ ತಜ್ಞರು ಕೂಡ ಗ್ರೀನ್ ಟೀಯ ಅದ್ಭುತವಾದ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ತಿಳಿಸುವ ಅಧ್ಯಯನಗಳನ್ನು ಒಪ್ಪುತ್ತಾರೆ. ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಸೇವಿಸುವುದನ್ನು ಶಿಫಾರಸು ಮಾಡುತ್ತಾರೆ. ಆದರೆ, ಗ್ರೀನ್ ಟೀಯ ಅತಿಯಾದ ಸೇವನೆ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ತೂಕ ಇಳಿಸಿಕೊಳ್ಳಲು ಪ್ರತಿ ಸಲ ಊಟವಾದ ಮೇಲೂ ಗ್ರೀನ್ ಟೀ ಕುಡಿಯಬೇಕಾ?
ಗ್ರೀನ್ ಟೀ
Follow us
ಸುಷ್ಮಾ ಚಕ್ರೆ
|

Updated on: Jan 08, 2024 | 1:44 PM

ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಅತ್ಯುತ್ತಮ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಗ್ರೀನ್ ಟೀ ಉತ್ತಮ ಆಹಾರವಾಗಿದೆ. ಗ್ರೀನ್ ಟೀ ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲದ ಕಾಯಿಲೆಯ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಗ್ರೀನ್ ಟೀಯನ್ನು ಕುಡಿಯುವುದು ತೂಕ ಇಳಿಸಿಕೊಳ್ಳುವಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ, ವ್ಯಾಯಾಮದ ಮೊದಲು ಅಥವಾ ಪ್ರತಿ ಊಟದ ನಂತರ ಗ್ರೀನ್ ಟೀ ಸೇವಿಸಬಹುದು. ಅನೇಕ ಜನರು ಬೇಗ ತಮ್ಮ ತೂಕ ಇಳಿಸಿಕೊಳ್ಳಲು ದಿನಕ್ಕೆ 3 ಕಪ್ ಗ್ರೀನ್ ಟೀ ಸೇವಿಸುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಗ್ರೀನ್ ಟೀ ನಿಜವಾಗಿಯೂ ತೂಕವನ್ನು ಇಳಿಸಿಕೊಳ್ಳುವ ಸುಲಭವಾದ ಮಾರ್ಗವೇ? ಎಂಬ ಬಗ್ಗೆ ಪೌಷ್ಟಿಕತಜ್ಞರು ವಿವರಿಸುತ್ತಾರೆ.

ಹಲವು ವರ್ಷಗಳಿಂದ ನಡೆಸಿದ ಅಧ್ಯಯನಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವಲ್ಲಿ ಗ್ರೀನ್ ಟೀ ಪರಿಣಾಮಕಾರಿಯಾಗಿದೆ ಎಂದು ಕಂಡುಹಿಡಿದಿವೆ. ಪೌಷ್ಟಿಕಾಂಶ ತಜ್ಞರು ಕೂಡ ಗ್ರೀನ್ ಟೀಯ ಅದ್ಭುತವಾದ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ತಿಳಿಸುವ ಅಧ್ಯಯನಗಳನ್ನು ಒಪ್ಪುತ್ತಾರೆ ಮತ್ತು ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಸೇವಿಸುವುದನ್ನು ಶಿಫಾರಸು ಮಾಡುತ್ತಾರೆ. ಆದರೆ, ಪೌಷ್ಟಿಕ ತಜ್ಞರು ಗ್ರೀನ್ ಟೀಯ ಅತಿಯಾದ ಸೇವನೆಯ ಬಗ್ಗೆ ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ.

ಇದನ್ನೂ ಓದಿ: ಮಾನಸಿಕ ಒತ್ತಡದಿಂದ ದೇಹದ ತೂಕ ಹೆಚ್ಚಾಗಲು ಕಾರಣವೇನು?

ಅತಿಯಾದ ಗ್ರೀನ್ ಟೀ ಸೇವನೆಯು ಆತಂಕ, ಕಿರಿಕಿರಿ ಮತ್ತು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ನಿದ್ರೆಯ ತೊಂದರೆಗಳನ್ನೂ ಹೆಚ್ಚಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಗ್ರೀನ್ ಚಹಾದ ಪ್ರಯೋಜನಗಳು:

ಗ್ರೀನ್ ಟೀಯಲ್ಲಿನ ಸಕ್ರಿಯ ಸಂಯುಕ್ತಗಳು ನೊರ್‌ಪೈನ್ಫ್ರಿನ್‌ನಂತಹ ಕೆಲವು ಬಗೆಯ ಕೊಬ್ಬನ್ನು ಬರ್ನ್ ಮಾಡುವ ಹಾರ್ಮೋನುಗಳ ಪರಿಣಾಮವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಒಂದು ಅಧ್ಯಯನದಲ್ಲಿ, ವ್ಯಾಯಾಮದ ಮೊದಲು ಗ್ರೀನ್ ಟೀಯನ್ನು ಸೇವಿಸಿದ ಪುರುಷರು ಸಪ್ಲಿಮೆಂಟ್ ಅನ್ನು ಸೇವಿಸದ ಪುರುಷರಿಗಿಂತ ಶೇ. 17ರಷ್ಟು ಹೆಚ್ಚು ಕೊಬ್ಬನ್ನು ಕರಗಿಸುತ್ತಾರೆ. ಗ್ರೀನ್ ಟೀಯ ಸಾರಗಳ ಸೇವನೆಯು ನೀವು ನಿದ್ರೆ ಮಾಡುವಾಗಲೂ ಹೆಚ್ಚಿನ ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ನಿಯಮಿತವಾಗಿ ಗ್ರೀನ್ ಚಹಾ ಸೇವನೆಯು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ಕ್ಯಾಲೊರಿಗಳನ್ನು ಕಡಿತಗೊಳಿಸಲು ಪರೋಕ್ಷವಾಗಿ ನಿಮಗೆ ಸಹಾಯ ಮಾಡುತ್ತದೆ.

ಪ್ರತಿ ಊಟದ ನಂತರ ನೀವು ಗ್ರೀನ್ ಟೀ ಕುಡಿಯಬೇಕೇ?:

ಭಾರೀ ಊಟದ ನಂತರ ಕೆಲವರು ಗ್ರೀನ್ ಟೀಯನ್ನು ಏಕೆ ಕುಡಿಯುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ತೂಕವನ್ನು ಇಳಿಸಿಕೊಳ್ಳಲು ಇದು ನಿಜವಾಗಿಯೂ ಸಹಾಯ ಮಾಡುತ್ತದೆಯೇ? ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಈ ಬಗ್ಗೆ ತನ್ನ ಇತ್ತೀಚಿನ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಊಟದ ನಂತರದ ಜೀರ್ಣಕ್ರಿಯೆಗೆ ಸಹಕಾರಿ:

ಗ್ರೀನ್ ಟೀ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಭಾರೀ ಊಟದ ನಂತರ ಜೀರ್ಣಕ್ರಿಯೆಗೆ ಗ್ರೀನ್ ಟೀ ಸಹಕಾರಿ. ಗ್ರೀನ್ ಚಹಾವು ಅದರ ಸಂಭಾವ್ಯ ಜೀರ್ಣಕಾರಿ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಭಾರೀ ಊಟದ ನಂತರ ಗ್ರೀನ್ ಟೀ ಸೇವಿಸಿದರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅದರ ಉತ್ಕರ್ಷಣ ನಿರೋಧಕಗಳು, ನಿರ್ದಿಷ್ಟವಾಗಿ ಕ್ಯಾಟೆಚಿನ್​ಗಳು, ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಸಬೇಕಾ? ಈ 7 ಹಣ್ಣುಗಳನ್ನು ಮಿಸ್ ಮಾಡಬೇಡಿ

ಆದರೆ, ಗ್ರೀನ್ ಟೀ ದೇಹದ ಕ್ಯಾಲೋರಿಗಳನ್ನು ಕರಗಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಚಯಾಪಚಯ ದರ ಮತ್ತು ಕೊಬ್ಬು ಸುಡುವಿಕೆಯನ್ನು ಸ್ವಲ್ಪ ಹೆಚ್ಚಿಸಬಹುದೇ ವಿನಃ ಕ್ಯಾಲೋರಿಯನ್ನು ಬರ್ನ್ ಮಾಡುವುದಿಲ್ಲ ಎಂದು ಬಾತ್ರಾ ಹೇಳುತ್ತಾರೆ. ನಿಮ್ಮ ದೈನಂದಿನ ಆಹಾರಕ್ರಮಕ್ಕೆ ಗ್ರೀನ್ ಟೀ ಉಪಯುಕ್ತವಾದ ಸೇರ್ಪಡೆ. ಸಮತೋಲಿತ ಆಹಾರದಿಂದ ಮತ್ತು ಸರಿಯಾದ ತೂಕವನ್ನು ಸಾಧಿಸುವವರೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ, ತೂಕ ಇಳಿಸಲು ಅದರ ಮೇಲೆ ಹೆಚ್ಚು ಅವಲಂಬಿತವಾಗುವುದು ಒಳ್ಳೆಯದಲ್ಲ ಎಂದು ಅವರು ಹೇಳುತ್ತಾರೆ.

ಕಾಫಿಗಿಂತ ಕಡಿಮೆ ಕೆಫೀನ್ ಹೊಂದಿರುವ ಗ್ರೀನ್ ಟೀ ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಪಾನೀಯವಾಗಿದೆ ಎಂಬುದು ನಿಜವಾದರೂ ಮಿತವಾಗಿ ಅದನ್ನು ಸೇವಿಸುವುದು ಒಳಿತು. ತೂಕ ಇಳಿಸಲು ಗ್ರೀನ್ ಟೀ ಸೇವಿಸುವುದರ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಕೂಡ ಬಹಳ ಮುಖ್ಯ. ಕಾಫಿಗೆ ಹೋಲಿಸಿದರೆ ಗ್ರೀನ್ ಚಹಾವು ಕಡಿಮೆ ಕೆಫೀನ್ ಅಂಶವನ್ನು ಹೊಂದಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ