AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Clapping Incredible Benefits: ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!

ಚಪ್ಪಾಳೆ ತಟ್ಟಿ ರೋಗ ಮುಕ್ತರಾಗಬಹುದು. ಶ್ರದ್ಧೆಯಿಂದ ಪರಾಮರ್ಷಿಸಿ, ಕಳೆದುಕೊಳ್ಳಬೇಕಾದು ಏನೂ ಇಲ್ಲ ಇಲ್ಲಿ! ಸೈಡ್ ಎಫೆಕ್ಟ್​​​ ರಗಳೆ, ಕಾಟ, ಆತಂಕ ಇಲ್ಲವೇ ಇಲ್ಲ. ದಿನಕ್ಕೆ ಕೇವಲ 5-6 ನಿಮಿಷ ಚಪ್ಪಾಳೆ ತಟ್ಟಿದರೆ ಸಾಕು... ಪ್ರಯತ್ನಿಸಿ ನೋಡಿ

Clapping Incredible Benefits: ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!
ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!
TV9 Web
| Updated By: ಸಾಧು ಶ್ರೀನಾಥ್​|

Updated on: Oct 04, 2022 | 12:57 PM

Share

ಚಪ್ಪಾಳೆ ತಟ್ಟಿ ರೋಗ ಮುಕ್ತರಾಗಬಹುದು. ಶ್ರದ್ಧೆಯಿಂದ ಪರಾಮರ್ಷಿಸಿ, ಕಳೆದುಕೊಳ್ಳಬೇಕಾದು ಏನೂ ಇಲ್ಲ ಇಲ್ಲಿ! ಸೈಡ್ ಎಫೆಕ್ಟ್​​​ ರಗಳೆ, ಕಾಟ, ಆತಂಕ ಇಲ್ಲವೇ ಇಲ್ಲ. ದಿನಕ್ಕೆ ಕೇವಲ 5-6 ನಿಮಿಷ ಚಪ್ಪಾಳೆ ತಟ್ಟಿದರೆ ಸಾಕು… ಪ್ರಯತ್ನಿಸಿ ನೋಡಿ

ಚಪ್ಪಾಳೆ ತಟ್ಟುವುದು ಹೇಗೆ? ನೇರವಾಗಿ ನಿಲ್ಲಿರಿ, ನಿಮ್ಮ ಎರಡೂ ಕೈಗಳನ್ನು ಭುಜಕ್ಕೆ ಎದುರು-ಬದುರಾಗಿ ಮೇಲೆತ್ತಿರಿ. ಕೈಗಳನ್ನು ಸಾಧ್ಯವಾದಷ್ಟೂ ಅಗಲಿಸಿ. ನಿಧಾನವಾಗಿ ಒಂದು ನಿಮಿಷ ಚಪ್ಪಾಳೆ ತಟ್ಟಿರಿ. ಸ್ವಲ್ಪ ಆಯಾಸವಾದಂತೆನಿಸಿದರೆ ಒಂದರ್ಧ ನಿಮಿಷ ಕೈ ಕೆಳಗೆ ಬಿಟ್ಟು ವಿಶ್ರಾಂತಿ ಪಡೆಯಿರಿ. ಮತ್ತೇ ಒಂದು ನಿಮಿಷ ಚಪ್ಪಾಳೆ ತಟ್ಟಿರಿ. ಹೀಗೆ 4-5 ಸಲ ಮಾಡಿರಿ. ಒಂದು ವಾರದಲ್ಲಿ ನಿಮಗಿದು ರೂಢಿಯಾಗುವುದು. ನಿಮಿಷಕ್ಕೆ 50 ರಿಂದ 100 ಚಪ್ಪಾಳೆಯನ್ನು ನೀವು ಹೊಡೆಯಬಹುದು. ಅಂದರೆ, 5 ನಿಮಿಷದಲ್ಲಿ 300 ರಿಂದ 500 ಚಪ್ಪಾಳೆ ಹೊಡೆಯಬಹುದು (Clapping has Incredible Benefits).

ಮುಂಜಾನೆ ನಿತ್ಯ ಕರ್ಮಾದಿಗಳನ್ನು ಮಾಡಿದ ಮೇಲೆ 5 ನಿಮಿಷ ಚಪ್ಪಾಳೆ ಹೊಡೆಯುವ ಕಾರ್ಯಕ್ರಮವನ್ನು ನಿಯಮಿತವಾಗಿ ಮಾಡಿರಿ. ನಂತರ 5 ನಿಮಿಷ ಮಲಗಿ, ಅಂಗಾಂಗಗಳನ್ನು ಸಡಿಲ ಬಿಟ್ಟು ಶವಾಸನ ಮಾಡಿರಿ. ನಿಮಗೆ ಮಾಡಬೇಕೆಂಬ ಜರೂರತ್ತು ಮೂಡಿದರೆ ಸಂಜೆ ಊಟಕ್ಕೆ ಮೊದಲು ಇದೇ ಕಾರ್ಯಕ್ರಮ ಮಾಡಬಹುದು. ಇದನ್ನು ಒಬ್ಬರೇ ಮಾಡಬಹುದು ಅಥವಾ ತಂಡೋಪಾದಿಯಲ್ಲಿಯೂ ಮಾಡಬಹುದು.

ತಿಂಗಳಲ್ಲಿ ಬೊಜ್ಜು ಕರಗುವುದು. ರಕ್ತದ ಒತ್ತಡ ಸಮಾಧಾನಕರ ಸ್ಥಿತಿಗೆ ಇಳಿಯುವುದು. ಸಕ್ಕರೆ ರೋಗ ನಿಯಂತ್ರಣಕ್ಕೆ ಬರುವುದು. ಕಣ್ಣಿನ ದೃಷ್ಟಿ ಸ್ಪಷ್ಟವಾಗುವುದು. ಕಿವಿಗಳು ಚುರುಕಾಗುವವು. ಒಟ್ಟಾರೆ ಶರೀರ ಲವಲವಿಕೆಯಿಂದ ಕೂಡಿರುವ (motivation) ಅನುಭವ ನಿಮ್ಮದಾಗುವುದು.

“ಆಕ್ಯುಪ್ರೆಶರ್” ತತ್ವ ಇದರಲ್ಲಿ ಅಡಗಿದ್ದು, ಎರಡೂ ಅಂಗೈಯಲ್ಲಿರುವ ಸಹಸ್ರಾರು ಬಿಂದುಗಳಲ್ಲಿ ಚಪ್ಪಾಳೆಯಿಂದ ಒತ್ತಡ ಉಂಟಾಗಿ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತಾಗುವುದರಿಂದ ಆರೋಗ್ಯ ಲಾಭವಾಗುವುದಕ್ಕೆ ಕಾರಣವೆಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ರೋಗರುಜಿನಗಳಿಂದ ಔಷಧೋಪಚಾರ ದಿನೇ ದಿನೇ ದುಬಾರಿಯಾಗುತ್ತಿರುವಾಗ ಯಾವ ಖರ್ಚು, ವೆಚ್ಚವಿಲ್ಲದೆ ಚಪ್ಪಾಳೆ ಹೊಡೆಯುವ ಪ್ರಯೋಗವನ್ನು ಆರೋಗ್ಯದ ಬಗೆಗೆ ಕಾಳಜಿಯುಳ್ಳವರು ಯಾಕೆ ಮಾಡಿ ನೋಡಬಾರದು? ಅವಶ್ಯವಾಗಿ ಮಾಡಿ ನೋಡಿ, ಅದರ ಪ್ರಯೋಜನವನ್ನು ಪಡೆಯಿರಿ. (ಬರಹ- ಎಸ್.​ಹೆಚ್.​ ನದಾಫ್)​

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ