Clapping Incredible Benefits: ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!

ಚಪ್ಪಾಳೆ ತಟ್ಟಿ ರೋಗ ಮುಕ್ತರಾಗಬಹುದು. ಶ್ರದ್ಧೆಯಿಂದ ಪರಾಮರ್ಷಿಸಿ, ಕಳೆದುಕೊಳ್ಳಬೇಕಾದು ಏನೂ ಇಲ್ಲ ಇಲ್ಲಿ! ಸೈಡ್ ಎಫೆಕ್ಟ್​​​ ರಗಳೆ, ಕಾಟ, ಆತಂಕ ಇಲ್ಲವೇ ಇಲ್ಲ. ದಿನಕ್ಕೆ ಕೇವಲ 5-6 ನಿಮಿಷ ಚಪ್ಪಾಳೆ ತಟ್ಟಿದರೆ ಸಾಕು... ಪ್ರಯತ್ನಿಸಿ ನೋಡಿ

Clapping Incredible Benefits: ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!
ಚಪ್ಪಾಳೆ ತಟ್ಟುವುದರಲ್ಲಿದೆ ಆನಂದ, ಆರೋಗ್ಯ! ರೋಗ ಮುಕ್ತಿಗಾಗಿ ಚಪ್ಪಾಳೆ!
Follow us
| Updated By: ಸಾಧು ಶ್ರೀನಾಥ್​

Updated on: Oct 04, 2022 | 12:57 PM

ಚಪ್ಪಾಳೆ ತಟ್ಟಿ ರೋಗ ಮುಕ್ತರಾಗಬಹುದು. ಶ್ರದ್ಧೆಯಿಂದ ಪರಾಮರ್ಷಿಸಿ, ಕಳೆದುಕೊಳ್ಳಬೇಕಾದು ಏನೂ ಇಲ್ಲ ಇಲ್ಲಿ! ಸೈಡ್ ಎಫೆಕ್ಟ್​​​ ರಗಳೆ, ಕಾಟ, ಆತಂಕ ಇಲ್ಲವೇ ಇಲ್ಲ. ದಿನಕ್ಕೆ ಕೇವಲ 5-6 ನಿಮಿಷ ಚಪ್ಪಾಳೆ ತಟ್ಟಿದರೆ ಸಾಕು… ಪ್ರಯತ್ನಿಸಿ ನೋಡಿ

ಚಪ್ಪಾಳೆ ತಟ್ಟುವುದು ಹೇಗೆ? ನೇರವಾಗಿ ನಿಲ್ಲಿರಿ, ನಿಮ್ಮ ಎರಡೂ ಕೈಗಳನ್ನು ಭುಜಕ್ಕೆ ಎದುರು-ಬದುರಾಗಿ ಮೇಲೆತ್ತಿರಿ. ಕೈಗಳನ್ನು ಸಾಧ್ಯವಾದಷ್ಟೂ ಅಗಲಿಸಿ. ನಿಧಾನವಾಗಿ ಒಂದು ನಿಮಿಷ ಚಪ್ಪಾಳೆ ತಟ್ಟಿರಿ. ಸ್ವಲ್ಪ ಆಯಾಸವಾದಂತೆನಿಸಿದರೆ ಒಂದರ್ಧ ನಿಮಿಷ ಕೈ ಕೆಳಗೆ ಬಿಟ್ಟು ವಿಶ್ರಾಂತಿ ಪಡೆಯಿರಿ. ಮತ್ತೇ ಒಂದು ನಿಮಿಷ ಚಪ್ಪಾಳೆ ತಟ್ಟಿರಿ. ಹೀಗೆ 4-5 ಸಲ ಮಾಡಿರಿ. ಒಂದು ವಾರದಲ್ಲಿ ನಿಮಗಿದು ರೂಢಿಯಾಗುವುದು. ನಿಮಿಷಕ್ಕೆ 50 ರಿಂದ 100 ಚಪ್ಪಾಳೆಯನ್ನು ನೀವು ಹೊಡೆಯಬಹುದು. ಅಂದರೆ, 5 ನಿಮಿಷದಲ್ಲಿ 300 ರಿಂದ 500 ಚಪ್ಪಾಳೆ ಹೊಡೆಯಬಹುದು (Clapping has Incredible Benefits).

ಮುಂಜಾನೆ ನಿತ್ಯ ಕರ್ಮಾದಿಗಳನ್ನು ಮಾಡಿದ ಮೇಲೆ 5 ನಿಮಿಷ ಚಪ್ಪಾಳೆ ಹೊಡೆಯುವ ಕಾರ್ಯಕ್ರಮವನ್ನು ನಿಯಮಿತವಾಗಿ ಮಾಡಿರಿ. ನಂತರ 5 ನಿಮಿಷ ಮಲಗಿ, ಅಂಗಾಂಗಗಳನ್ನು ಸಡಿಲ ಬಿಟ್ಟು ಶವಾಸನ ಮಾಡಿರಿ. ನಿಮಗೆ ಮಾಡಬೇಕೆಂಬ ಜರೂರತ್ತು ಮೂಡಿದರೆ ಸಂಜೆ ಊಟಕ್ಕೆ ಮೊದಲು ಇದೇ ಕಾರ್ಯಕ್ರಮ ಮಾಡಬಹುದು. ಇದನ್ನು ಒಬ್ಬರೇ ಮಾಡಬಹುದು ಅಥವಾ ತಂಡೋಪಾದಿಯಲ್ಲಿಯೂ ಮಾಡಬಹುದು.

ತಿಂಗಳಲ್ಲಿ ಬೊಜ್ಜು ಕರಗುವುದು. ರಕ್ತದ ಒತ್ತಡ ಸಮಾಧಾನಕರ ಸ್ಥಿತಿಗೆ ಇಳಿಯುವುದು. ಸಕ್ಕರೆ ರೋಗ ನಿಯಂತ್ರಣಕ್ಕೆ ಬರುವುದು. ಕಣ್ಣಿನ ದೃಷ್ಟಿ ಸ್ಪಷ್ಟವಾಗುವುದು. ಕಿವಿಗಳು ಚುರುಕಾಗುವವು. ಒಟ್ಟಾರೆ ಶರೀರ ಲವಲವಿಕೆಯಿಂದ ಕೂಡಿರುವ (motivation) ಅನುಭವ ನಿಮ್ಮದಾಗುವುದು.

“ಆಕ್ಯುಪ್ರೆಶರ್” ತತ್ವ ಇದರಲ್ಲಿ ಅಡಗಿದ್ದು, ಎರಡೂ ಅಂಗೈಯಲ್ಲಿರುವ ಸಹಸ್ರಾರು ಬಿಂದುಗಳಲ್ಲಿ ಚಪ್ಪಾಳೆಯಿಂದ ಒತ್ತಡ ಉಂಟಾಗಿ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತಾಗುವುದರಿಂದ ಆರೋಗ್ಯ ಲಾಭವಾಗುವುದಕ್ಕೆ ಕಾರಣವೆಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ರೋಗರುಜಿನಗಳಿಂದ ಔಷಧೋಪಚಾರ ದಿನೇ ದಿನೇ ದುಬಾರಿಯಾಗುತ್ತಿರುವಾಗ ಯಾವ ಖರ್ಚು, ವೆಚ್ಚವಿಲ್ಲದೆ ಚಪ್ಪಾಳೆ ಹೊಡೆಯುವ ಪ್ರಯೋಗವನ್ನು ಆರೋಗ್ಯದ ಬಗೆಗೆ ಕಾಳಜಿಯುಳ್ಳವರು ಯಾಕೆ ಮಾಡಿ ನೋಡಬಾರದು? ಅವಶ್ಯವಾಗಿ ಮಾಡಿ ನೋಡಿ, ಅದರ ಪ್ರಯೋಜನವನ್ನು ಪಡೆಯಿರಿ. (ಬರಹ- ಎಸ್.​ಹೆಚ್.​ ನದಾಫ್)​

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್