
ಈ ದಿನ ರಾಮದೇವರ ದೇವಸ್ಥಾನಕ್ಕೆ ಹಣ್ಣನ್ನು ನೈವೇದ್ಯಕ್ಕೆ ನೀಡಿ. ಇದರಿಂದ ವಿರಸಗಳು ದೂರವಾಗಿ ಸಾಮರಸ್ಯ ಮೂಡುತ್ತದೆ. ಸರ್ಕಾರಿ ಕೆಲಸಗಳು ವಿಳಂಬ ಆಗುತ್ತಾ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಸಹಾಯ ಆಗುತ್ತದೆ.
ಈ ದಿನ ಕೆಲಸ- ಕಾರ್ಯಗಳಲ್ಲಿ ಒಂದು ಬಗೆಯ ನಿರಾಸಕ್ತಿಯನ್ನು ಕಾಡಲಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದರೆ ವೈರಾಗ್ಯವು ನಿಮ್ಮನ್ನು ಆವರಿಸಲಿದೆ. ಕೃಷಿ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಇಳಿಕೆ ಆಗುವ ಸೂಚನೆ ಸಿಗಬಹುದು. ಅಥವಾ ಈಗಾಗಲೇ ಮೊತ್ತವನ್ನು ಅಂತಿಮ ಮಾಡಿಕೊಂಡು ಹೋದವರು ಅಷ್ಟು ಹಣವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು.
ಮನೆಯ ಕೆಲಸಗಳನ್ನು ಮಾಡಿಸುತ್ತಿರುವವರಿಗೆ ಬಹಳ ಸಂತೋಷ- ಸಮಾಧಾನ ದೊರೆಯುವಂತಹ ದಿನ ಇದಾಗಿರುತ್ತದೆ. ಹೋಮ್ ಥಿಯೇಟರ್, ಇಂಟಿರೀಯರ್ ಸೇರಿದಂತೆ ನೀವು ಬಹಳ ಸಮಯದಿಂದ ಬಯಸುತ್ತಿದ್ದ ಕೆಲವು ಕೆಲಸಗಳನ್ನು ಮಾಡಿಸಿದ್ದಲ್ಲಿ ಅದರಿಂದ ಖುಷಿ ಪಡಲಿದ್ದೀರಿ. ಇನ್ನು ನಿಮ್ಮ ಸೋದರ- ಸೋದರಿಯರ ಜತೆಗೆ ಇರುವಂಥ ಭಿನ್ನಾಭಿಪ್ರಾಯವನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ.
ನಿಮ್ಮಲ್ಲಿ ಯಾರಿಗೆ ಬೆನ್ನು ನೋವು, ಮಧುಮೇಹ ಅಥವಾ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವು ಕಾಡುತ್ತಿದ್ದಲ್ಲಿ ಅದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಯೂಟ್ಯೂಬರ್ ಗಳು ಇದ್ದಲ್ಲಿ ವೃತ್ತಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡಲಿಕ್ಕಾಗಿ ಹಣವನ್ನು ಹೊಂದಿಸಿಕೊಳ್ಳಲಿದ್ದೀರಿ ಅಥವಾ ನಿಮ್ಮಲ್ಲಿ ಕೆಲವರು ಖರೀದಿಯನ್ನೇ ಮಾಡುವ ಎಲ್ಲ ಸಾಧ್ಯತೆಗಳು ಇವೆ.
ಲೇಖನ- ಸ್ವಾತಿ ಎನ್.ಕೆ.