
ಈ ದಿನ ಆಂಜನೇಯ ದೇವಸ್ಥಾನಕ್ಕೆ ತೆರಳಿ, ಹತ್ತು ನಿಮಿಷವಾದರೂ ದೇವಾಲಯದಲ್ಲಿ ಕೂತಿದ್ದು ಬನ್ನಿ. ಆರೋಗ್ಯ ಸಮಸ್ಯೆ, ವಿರಸ- ಮನಸ್ತಾಪಗಳು. ದೂರವಾಗಿ ಮಾನಸಿಕ ನೆಮ್ಮದಿ ಸಿಗಲಿದೆ.
ವಾಹನ ಸ್ವಂತಕ್ಕೆ ಇಟ್ಟುಕೊಂಡು, ಚಾಲನೆಯನ್ನೂ ಮಾಡುತ್ತಿರುವವರು ಒಂದೋ ಹೊಸ ವಾಹನವನ್ನು ಖರೀದಿಸಬಹುದು ಅಥವಾ ಈಗಿರುವುದರ ಜೊತೆಗೆ ಇನ್ನೊಂದನ್ನು ಖರೀದಿಸಿ, ಬಾಡಿಗೆಗೆ ಬಿಡುವ ಬಗ್ಗೆ ಆಲೋಚಿಸಬಹುದು. ತುಂಬ ಆತುರವಾಗಿ ಮಾಡಿ ಮುಗಿಸಬೇಕಾದ ಕೆಲಸವೊಂದು ಕಾರ್ಪೆಂಟರ್ ಗಳು, ರೇಲಿಂಗ್, ಪೇಂಟಿಂಗ್ ಅಥವಾ ಎಲೆಕ್ಟ್ರಿಕ್ ಕೆಲಸ ಮಾಡುವಂಥವರನ್ನು ಹುಡುಕಿಕೊಂಡು ಬರುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಖಂಡಿತವಾಗಿ ಒಳ್ಳೆಯ ಆದಾಯವಂತೂ ಬರಲಿದೆ.
ನಿರೀಕ್ಷಿತವಾದ ಆದಾಯಗಳು ಈ ದಿನ ನಿಮ್ಮ ಕೈ ಸೇರಲಿವೆ. ಮನಸ್ಸಿಗೆ ಒಂದು ಬಗೆಯ ಸಮಾಧಾನ- ಸಂತೋಷ ಇರಲಿದ್ದು, ನಿಮ್ಮಲ್ಲಿ ಕೆಲವರು ಪ್ರೀತಿಯನ್ನು ನಿವೇದಿಸಿಕೊಳ್ಳುವಂಥ ಅವಕಾಶಗಳಿವೆ. ಹಣ್ಣು- ತರಕಾರಿಗಳ ಹೋಲ್ ಸೇಲ್ ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ನಿರೀಕ್ಷೆ ಮಾಡಬಹುದು. ಯಾವ ಕಾರಣಕ್ಕೂ ಈಗಿರುವ ಗ್ರಾಹಕರನ್ನು ಕಳೆದುಕೊಳ್ಳಬೇಡಿ.
ದೂರ ಪ್ರಯಾಣದ ಬಗ್ಗೆ ಯೋಜನೆ ಹಾಕಿಕೊಂಡವರು ಕೊನೆ ಕ್ಷಣದಲ್ಲಿ ಪ್ರಯಾಣವನ್ನು ರದ್ದು ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಬೇರೆಯವರನ್ನು ಜೊತೆಗೆ ಬರಲೇಬೇಕೆಂದು ಒತ್ತಡ ಹಾಕಿ, ಕೊನೆ ಕ್ಷಣದಲ್ಲಿ ನೀವೇ ತೆರಳದಿದ್ದರೆ ಹೇಗಾಗಬಹುದು ಎಂಬ ಬಗ್ಗೆ ಮೊದಲೇ ಆಲೋಚನೆ ಮಾಡುವುದು ಉತ್ತಮ.
ಲೇಖನ- ಸ್ವಾತಿ ಎನ್.ಕೆ.