AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ! ಯಾವ ರಾಶಿಗೆ ಶುಭಫಲ

ಸಿಂಹದಲ್ಲಿ ಕುಜ ಹಾಗೂ ಶುಕ್ರರಿದ್ದು ಈಗ ಬುಧನೂ ಪ್ರವೇಶ ಮಾಡುವನು. ಮೂರೂ ಗ್ರಹಗಳು ಸಿಂಹ ರಾಶಿಯಲ್ಲಿ ಇರಲಿವೆ. ಇವರಲ್ಲಿ ಪರಸ್ಪರ ಶತ್ರುತ್ವ, ಮಿತ್ರತ್ವ ಹಾಗೂ ಸಮತ್ವಗಳು ಇರಲಿವೆ.

ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ! ಯಾವ ರಾಶಿಗೆ ಶುಭಫಲ
ಸಿಂಹ ರಾಶಿImage Credit source: istock
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 26, 2023 | 6:04 AM

Share

ಸಿಂಹದಲ್ಲಿ ಕುಜ ಹಾಗೂ ಶುಕ್ರರಿದ್ದು ಈಗ ಬುಧನೂ ಪ್ರವೇಶ ಮಾಡುವನು. ಮೂರೂ ಗ್ರಹಗಳು ಸಿಂಹ ರಾಶಿ (Leo)ಯಲ್ಲಿ ಇರಲಿವೆ. ಇವರಲ್ಲಿ ಪರಸ್ಪರ ಶತ್ರುತ್ವ, ಮಿತ್ರತ್ವ ಹಾಗೂ ಸಮತ್ವಗಳು ಇರಲಿವೆ. ಕುಜನಿಗೆ ಶುಕ್ರನು ಮಿತ್ರ, ಆದರೆ ಬುಧ ಶತ್ರು. ಬುಧನಿಗೆ ಶುಕ್ರ ಮಿತ್ರ ಆದರೆ ಕುಜ ಸಮ. ಶುಕ್ರನಿಗೆ ಬುಧ ಮಿತ್ರ ಹಾಗೂ ಕುಜನು ಸಮ. ಆದರೆ ಇವರು ಇರುವಂತಹ ಸ್ಥಳ‌ ಸೂರ್ಯನದ್ದು. ಹಾಗಾಗಿ ಇವರು ಸೂರ್ಯನಿಗೆ ಕುಜ ಮಿತ್ರನಾದರೆ ಶುಕ್ರನು ಶತ್ರು, ಬುಧನು ಸಮನಾಗಿರುವನು. ಕುಜ ಹಾಗೂ ಬುಧರಿಗೆ ರವಿ ಮಿತ್ರನಾದರೆ ಶುಕ್ರನಿಗೆ ಶತ್ರು.

ಹೀಗೆ ಸಿಂಹರಾಶಿಯಲ್ಲಿ ಇರುವ ಗ್ರಹಗಳ ಸ್ಥಿತಿ. ಮಿತ್ರ ಅಥವಾ ಸಮರಾಗಿದ್ದರೆ ಆಧಿಕ‌ಫಲವನ್ನು ಗ್ರಹರು ಕೊಡುವರು. ಶತ್ರುವಿನ ಸಹವಾಸ ಅಥವಾ ಶತ್ರುವಿನ ಮನೆಯಲ್ಲಿ ಇದ್ದರೆ ಫಲ ಕಡಿಮೆ ಅಥವಾ ವಿರುದ್ಧಫಲವನ್ನೂ ಕೊಡಬಹುದು. ಈ ಸ್ಥಳದಲ್ಲಿ ಅತ್ಯಂತ ಹೆಚ್ಚು ಬಲಿಷ್ಠರು ಕುಜ ಹಾಗೂ ಬುಧರು.

ತುಲಾರಾಶಿಯವರಿಗೆ ಹೆಚ್ಚು ಶುಭಫಲವಿದೆ.‌ ಸಹೋದರ ಅಥವಾ ಸಹೋದರಿಯಿಂದ ಬೇಕಾದ ಸಹಾಯವನ್ನು ಪಡೆಯಬಹುದು. ನಿಮ್ಮ ಎಲ್ಲ ಮಾತುಗಳಿಗೂ ಇವರ ಒಪ್ಪಿಗೆ ಸಿಗಲಿದೆ.

ಧನುರಾಶಿಯವರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಉತ್ತಮ ವಿದ್ಯಾಸಂಸ್ಥೆಗೆ ಸೇರಿಕೊಳ್ಳುವ ಆಸಕ್ತಿ‌ ಇದ್ದರೆ ಇದು ಶುಭ ಸಮಯ.‌ ಸೀಟ್ ಇಲ್ಲವೆಂದರೂ ನಿಮ್ಮ ಪ್ರಯತ್ನವನ್ನು ಬಿಡದೇ ಮುಂದುವಿರಿ.

ಮೇಷರಾಶಿವರಿಗೇ ಶುಭವು ಸಿಗಲಿದೆ. ಒಂಭತ್ತನೆಯ ಮನೆಯಾಗಿರುವುದರಿಂದ ಗುರು ಹಿರಿಯರ ಸೇವೆಯಿಂದ ಒಳ್ಳೆಯದಾಗುವುದು. ಉದ್ಯೋಗದ ಸ್ಥಳದಲ್ಲಿ ನಿಮಗೆ ಒಳ್ಳೆಯ ಬೆಂಬಲವೂ ಸಿಗುವುದು.

ಮಿಥುನರಾಶಿಯವರು ಭಾಷಣಕಾರರಾಗಿದ್ದರೆ ಅಥವಾ ಬರಹಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗುವುದು. ಶಿಕ್ಷಕರಾಗಿದ್ದರೆ ಹೆಚ್ಚಿನ ಸಂಪತ್ತು ಹಾಗೂ ಕೀರ್ತಿಯನ್ನು ನೀವು ಗಳಿಸುವಿರಿ.

ಕುಜನಿಂದ ಏನಾಗುತ್ತದೆ?

ಚತುರ್ಥಸ್ಥಾನದ ಮೇಲೆ‌ ಅವನ ದೃಷ್ಟಿಯು ಬೀಳುವುದರಿಂದ ವೃಶ್ಚಿಕ ರಾಶಿಯವರಿಗೆ ಹೆಚ್ಚು ಬಲ ಬರಲಿದೆ. ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಡುವಿರಿ.

ಮಕರವು‌ ಕುಜನ ಉಚ್ಚಕ್ಷೇತ್ರವಾಗಿದ್ದ ಅವರ ರಕ್ಷಣೆಯು ಕುಜನ ಕರ್ತವ್ಯವಾಗಿದೆ. ತನ್ನ ಭುಜಬಲದಿಂದ ಶತ್ರುಗಳನ್ನು ಸಂಹರಿಸುವನು. ಆರೋಗ್ಯವನ್ನೂ ಹೆಚ್ಚಿಸುವನು.

ಮೇಷವು ಕುಜನ ಕ್ಷೇತ್ರವಾಗಿದ್ದು ಪೂರ್ವಪುಣ್ಯದ ಫಲವನ್ನು ಅನುಭವಿಸುವನು. ಹಿರಿಯರಿಗೆ ಗೌರವವನ್ನು ಕೊಡಲಿದ್ದಾರೆ. ಭೂಮಿಯನ್ನು ಖರೀದಿಸಬಹುದು.

ಶುಕ್ರನು ನೀಚಗಾಮಿಯಾಗಿರುವುದರಿಂದ ಭೋಗಕ್ಕೆ ಸಂಬಂಧಿಸಿದ ಯಾವುದನ್ನೂ ಮಾಡಿದರೂ ಅದು ಹಾನಿಯಾಗುವುದು. ಧನನಷ್ಟವೇ. ವಾಹನ‌ ಖರೀದಿಯನ್ನೂ ನೀವು ಮುಂದೂಡುವುದು ಉತ್ತಮ. ಹೊಸ ಕೆಲಸಗಳನ್ನು ಆರಂಭ ಮಾಡುವುದು ಬೇಡ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು