
ನೀವು ಅಧ್ಯಾತ್ಮ ಅಥವಾ ಯೋಗಾಭ್ಯಾಸದಲ್ಲಿ ಅತಿ ಹೆಚ್ಚು ಸಮಯ ಕಳೆಯುವಿರಿ. ನೀವು ತುಂಬ ನಂಬಿಕೆ ಇರಿಸಿದ್ದ ವ್ಯಕ್ತಿಯಿಂದ ವಂಚನೆ ಆಗಿರುವ ಬಗ್ಗೆ ಮಾಹಿತಿ ತಿಳಿಯಲಿದೆ. ಪ್ರಾಪಂಚಿಕ ವಿಷಯಗಳಿಗಿಂತ ಒಳಮನಸ್ಸಿನ ಶಾಂತಿ ಮುಖ್ಯವೆಂದು ನಿಮಗನಿಸುತ್ತದೆ. ಹತ್ತಿರದ ಕಾಡು ಅಥವಾ ಗುಡ್ಡಗಾಡು ಪ್ರದೇಶಗಳಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಆದಾಯ ಹೆಚ್ಚಿಸಿಕೊಳ್ಳಲು ಬೇಕಾದ ಪ್ರಯತ್ನಗಳನ್ನು ಮಾಡುವಿರಿ. ಮಕ್ಕಳ ವರ್ತನೆಯಿಂದ ಸ್ವಲ್ಪ ಬೇಸರವಾಗಬಹುದು, ಆದರೆ ಪ್ರೀತಿಯಿಂದ ಅವರಿಗೆ ಬುದ್ಧಿ ಹೇಳುವುದು ಸೂಕ್ತ.
ಸ್ನೇಹಿತರ ವರ್ತನೆಯಿಂದ ಸ್ವಲ್ಪ ಮಟ್ಟಿಗೆ ಕಿರಿಕಿರಿ ಆಗಲಿದೆ. ಇತರರು ಮಾಡಬೇಕಿದ್ದ ಕೆಲಸಗಳನ್ನು ನೀವೇ ಮಾಡಬೇಕಾಗುವುದರಿಂದ ದೈಹಿಕ ಶ್ರಮ ನಿಮ್ಮನ್ನು ಆವರಿಸಿಕೊಳ್ಳಲಿವೆ. ಮನೆ ರಿಪೇರಿ ಅಥವಾ ತೋಟದ ಕೆಲಸಗಳಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಹಣಕಾಸಿನ ಲಾಭವು ಅಲ್ಪ ಪ್ರಮಾಣದಲ್ಲಿ ಇರಲಿದೆ. ಹಳೆಯ ಸಾಲವನ್ನು ಮರುಪಾವತಿಸಲು ಅಥವಾ ನೀಡಿದ ಹಣವನ್ನು ವಾಪಸ್ ಪಡೆಯಲು ಗಟ್ಟಿಯಾಗಿ ಪ್ರಯತ್ನಿಸಿ. ಕಾಲುನೋವು ಅಥವಾ ಕೀಲು ನೋವಿನ ಬಗ್ಗೆ ಎಚ್ಚರವಿರಲಿ.
ನೀವು ಅನಿರೀಕ್ಷಿತವಾಗಿ ದೂರದ ಊರಿನಿಂದ ಬಂದ ಅತಿಥಿಗಳನ್ನು ಸ್ವಾಗತಿಸುವಿರಿ. ಅವರಿಗೆ ಆಗಬೇಕಾದ ಕೆಲಸದ ಸಲುವಾಗಿ ಓಡಾಟ ಹೆಚ್ಚಾಗಿ ಇರಲಿದೆ. ನೀವು ಈ ಹಿಂದೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಅವಕಾಶವೊಂದನ್ನು ಪಡೆದುಕೊಳ್ಳಲು ಉತ್ತಮ ಯೋಗ ಸಿಗಲಿದೆ. ಕೋಪ ಮಾಡಿಕೊಳ್ಳುವುದೋ ಅಥವಾ ಹಣಕಾಸನ್ನು ನೀಡುವ ಮೂಲಕವೋ ಮಾಡುವ ಬದಲಾಗಿ, ಪ್ರೀತಿ ಮತ್ತು ಅನುಕಂಪದ ಮೂಲಕ ಜನರ ಮನಸ್ಸನ್ನು ಗೆಲ್ಲುವಿರಿ. ಆಧ್ಯಾತ್ಮಿಕ ಗ್ರಂಥಗಳ ಓದಿನಲ್ಲಿ ಆಸಕ್ತಿ ಮೂಡಲಿದೆ.
ಲೇಖನ- ಸ್ವಾತಿ ಎನ್.ಕೆ.