ಇಂದೂ ನೂರರ ಎಲ್ಲೆಮೀರಿದ ಸೋಂಕಿತರ ಸಂಖ್ಯೆ, ಕೋಟೆನಾಡು ಲೀಡಿಂಗ್!

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 100 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ 20, ಯಾದಗಿರಿ 14, ಹಾಸನ 13, ದಾವಣಗೆರೆ 10, ಬೀದರ್ 10, ಬೆಳಗಾವಿ 13, ವಿಜಯಪುರ 5, ಉಡುಪಿ 3, ಕೋಲಾರ 2, ಬೆಂಗಳೂರು ನಗರ 2, ಬಾಗಲಕೋಟೆ 1, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ತಲಾ 1 ಕೊರೊನಾ ಪ್ರಕರಣ ಪತ್ತೆಯಾಗಿದೆ. 2,282 ಕೊರೊನಾ ಸೋಂಕಿತರ ಪೈಕಿ ಈವರೆಗೆ 722 ಕೊರೊನಾ ಸೋಂಕಿತರು ಗುಣಮುಖರಾಗಿ […]

ಇಂದೂ ನೂರರ ಎಲ್ಲೆಮೀರಿದ ಸೋಂಕಿತರ ಸಂಖ್ಯೆ, ಕೋಟೆನಾಡು ಲೀಡಿಂಗ್!
Edited By:

Updated on: May 26, 2020 | 2:31 PM

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 100 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ 20, ಯಾದಗಿರಿ 14, ಹಾಸನ 13, ದಾವಣಗೆರೆ 10, ಬೀದರ್ 10, ಬೆಳಗಾವಿ 13, ವಿಜಯಪುರ 5, ಉಡುಪಿ 3, ಕೋಲಾರ 2, ಬೆಂಗಳೂರು ನಗರ 2, ಬಾಗಲಕೋಟೆ 1, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ತಲಾ 1 ಕೊರೊನಾ ಪ್ರಕರಣ ಪತ್ತೆಯಾಗಿದೆ.

2,282 ಕೊರೊನಾ ಸೋಂಕಿತರ ಪೈಕಿ ಈವರೆಗೆ 722 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1,515 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 44 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Published On - 1:07 pm, Tue, 26 May 20