ಗುಡಿಸಲಿಗೆ ಬೆಂಕಿ: ಅಗ್ನಿ ಅವಘಡದಲ್ಲಿ ಸೂರು ಕಳೆದುಕೊಂಡ ವೃದ್ಧೆ ಬೀದಿಪಾಲು..

ಆಕಸ್ಮಿಕವಾಗಿ ಬೆಂಕಿ ತಾಗಿ ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಅಶ್ವಥ್ ನಗರದಲ್ಲಿ ನಡೆದಿದೆ. ಕೊಲಮ್ಮ ಎಂಬ ವೃದ್ಧೆಗೆ ಸೇರಿದ್ದ ಗುಡಿಸಿಲು ಅವಘಡದಲ್ಲಿ ಭಸ್ಮವಾಗಿದೆ.

ಗುಡಿಸಲಿಗೆ ಬೆಂಕಿ: ಅಗ್ನಿ ಅವಘಡದಲ್ಲಿ ಸೂರು ಕಳೆದುಕೊಂಡ ವೃದ್ಧೆ ಬೀದಿಪಾಲು..
ಅಗ್ನಿ ಅವಘಡದಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಗುಡಿಸಲು

Updated on: Dec 21, 2020 | 12:54 PM

ದಾವಣಗೆರೆ: ಆಕಸ್ಮಿಕವಾಗಿ ಬೆಂಕಿ ತಾಗಿ ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಅಶ್ವಥ್ ನಗರದಲ್ಲಿ ನಡೆದಿದೆ. ಕೊಲಮ್ಮ ಎಂಬ ವೃದ್ಧೆಗೆ ಸೇರಿದ್ದ ಗುಡಿಸಿಲು ಅವಘಡದಲ್ಲಿ ಭಸ್ಮವಾಗಿದೆ. ಏಕಾಏಕಿ ಕಾಣಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿದೆ. ಇದೀಗ, ತಮ್ಮ ಸೂರನ್ನು ಕಳೆದುಕೊಂಡ ಕೊಲ್ಲಮ್ಮ ಬೀದಿಪಾಲಾಗಿದ್ದಾರೆ.

ಇನ್ನು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಗೂಡ್ಸ್‌ ರೈಲಿನ ಬೋಗಿಯಲ್ಲಿ ಅಗ್ನಿ ಆಕಸ್ಮಿಕ, ಹೊತ್ತಿ ಉರಿದ 2 ಬೋಗಿಗಳು

Published On - 12:42 pm, Mon, 21 December 20