ಅಮೃತ್ ಮಹಲ್ ಹಸುಗಳ ನರಳಾಟ: ವೈದ್ಯ ಸೋಮಶೇಖರ್ ಮನೆಗೆ

ಹಾಸನ: ಅಮೃತ್ ಮಹಲ್ ಕಾವಲ್​ನಲ್ಲಿ 230 ಹಸುಗಳು ಕೆಸರಿನಲ್ಲಿ ಸಿಲುಕಿ ನರಳಾಟ ಪ್ರಕರಣ ಸಂಬಂಧ ಮುಖ್ಯ ಪಶು ವೈದ್ಯಾಧಿಕಾರಿ ಅಮಾನತಾಗಿದ್ದಾರೆ. ಚನ್ನರಾಯ ಪಟ್ಟಣ ತಾಲೂಕಿನ ರಾಯಸಂದ್ರದಲ್ಲಿನ ಅಮೃತ್ ಮಹಲ್​ನಲ್ಲಿ ಮಳೆಯಿಂದ ಕೆಸರಿನಲ್ಲಿ ಸಿಲುಕಿ 230 ಹಸುಗಳು ಸಾವಿನಂಚಿನಲ್ಲಿದ್ದವು. ನ.8ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಶುಸಂಗೊಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ್ ಭೇಟಿ ನೀಡಿದ್ದರು. ಈ ವೇಳೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ಕರ್ತವ್ಯ ಲೋಪ ಆರೋಪದ ಮೇಲೆ […]

ಅಮೃತ್ ಮಹಲ್ ಹಸುಗಳ ನರಳಾಟ: ವೈದ್ಯ ಸೋಮಶೇಖರ್ ಮನೆಗೆ
ಸಾಧು ಶ್ರೀನಾಥ್​

Updated on: Nov 12, 2019 | 12:31 PM

ಹಾಸನ: ಅಮೃತ್ ಮಹಲ್ ಕಾವಲ್​ನಲ್ಲಿ 230 ಹಸುಗಳು ಕೆಸರಿನಲ್ಲಿ ಸಿಲುಕಿ ನರಳಾಟ ಪ್ರಕರಣ ಸಂಬಂಧ ಮುಖ್ಯ ಪಶು ವೈದ್ಯಾಧಿಕಾರಿ ಅಮಾನತಾಗಿದ್ದಾರೆ.

ಚನ್ನರಾಯ ಪಟ್ಟಣ ತಾಲೂಕಿನ ರಾಯಸಂದ್ರದಲ್ಲಿನ ಅಮೃತ್ ಮಹಲ್​ನಲ್ಲಿ ಮಳೆಯಿಂದ ಕೆಸರಿನಲ್ಲಿ ಸಿಲುಕಿ 230 ಹಸುಗಳು ಸಾವಿನಂಚಿನಲ್ಲಿದ್ದವು. ನ.8ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಶುಸಂಗೊಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ್ ಭೇಟಿ ನೀಡಿದ್ದರು.

ಈ ವೇಳೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ಕರ್ತವ್ಯ ಲೋಪ ಆರೋಪದ ಮೇಲೆ ನುಗ್ಗೆಹಳ್ಳಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಲ್.ಜಿ.ಸೋಮಶೇಖರ್ ಅವರನ್ನ ಇಲಾಖೆ ಅಧಿಕಾರಿಗಳು ಅಮಾನತು ಮಾಡಿದ್ದಾರೆ.

Published On - 12:22 pm, Tue, 12 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us