AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಿಕೆಗೆ ಒಳ್ಳೆಯ ಬೆಲೆ: ಅಡಿಕೆ ನಾಡು ಚನ್ನಗಿರಿಯಲ್ಲಿ ಚುರುಕಾಯ್ತು ವ್ಯಾಪಾರ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅಡಿಕೆ ವ್ಯಾಪಾರ ಭರ್ಜರಿ ಏರಿಕೆ ಕಂಡಿದೆ. ಒಳ್ಳೆಯ ಬೆಲೆ ಹಾಗೂ ಒಳ್ಳೆಯ ಫಸಲು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಅಡಿಕೆಗೆ ಒಳ್ಳೆಯ ಬೆಲೆ: ಅಡಿಕೆ ನಾಡು ಚನ್ನಗಿರಿಯಲ್ಲಿ ಚುರುಕಾಯ್ತು ವ್ಯಾಪಾರ
ಅಡಿಕೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jul 09, 2021 | 1:25 PM

Share

ರಾಜ್ಯದಲ್ಲಿ ಅಡಿಕೆ ನಾಡು ಎಂದೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಪ್ರಸಿದ್ಧ. ಕಾರಣ, ಇದು ರಾಜ್ಯದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ತಾಲೂಕು ಕೇಂದ್ರ. ಲಾಕ್​ಡೌನ್​ನಿಂದ ಬಾಡಿದ್ದ ಅಡಿಕೆ ಬೆಳೆಗಾರರ ಮುಖದಲ್ಲಿ ಈಗ ಮಂದಹಾಸವಿದೆ. ಕಾರಣ, ಮಾರುಕಟ್ಟೆಯಲ್ಲಿ ಅಡಿಕೆಗೆ ಈಗ ಒಳ್ಳೆಯ ದರ ಬಂದಿದೆ. ಆದ್ದರಿಂದಲೇ, ಚನ್ನಗಿರಿಯಲ್ಲಿ ಅಡಿಕೆ ವ್ಯಾಪಾರ ಭರ್ಜರಿ ಚೇತರಿಕೆ ಕಂಡಿದೆ.

ಚನ್ನಗಿರಿ ತಾಲೂಕಿನಲ್ಲಿ ಸುಮಾರು 30ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಕಳೆದ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ 15ರಿಂದ 18 ಕ್ವಿಂಟಾಲ್ ಇಳುವರಿ ದೊರೆತಿದೆ. ಈ ಪ್ರಮಾಣದ ಇಳುವರಿಯಿಂದಾಗಿ ರೈತರ ಮುಖದಲ್ಲಿ ನಗು ಮೂಡಿದೆ. ಅಲ್ಲದೆ, ಈ ಬಾರಿ ಅಡಿಕೆ ಬೆಲೆಯೂ ಉತ್ತಮವಾಗಿದೆ. ಪ್ರತಿ ಕ್ವಿಂಟಾಲ್ ಅಡಿಕೆಗೆ 41,500ರೂ.ಗಳಿಂದ 42,500ರೂ.ಗಳವರೆಗೆ ಮಾರುಕಟ್ಟೆ ದರವಿದೆ. ಇದರಿಂದಾಗಿ ರೈತರು ಈಗ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಪರಿಣಾಮವಾಗಿ, ರೈತರು ಚನ್ನಗಿರಿ ತುಮ್ಕೋಸ್ ಸಂಸ್ಥೆಗೆ ಒಂದೇ ದಿನದಲ್ಲಿ 20 ಸಾವಿರ ಚೀಲ ಅಡಿಕೆಯನ್ನು ಮಾರಾಟ ಮಾಡಿದ್ದಾರೆ. ಉತ್ತಮ ಬೆಲೆ ಹಾಗೂ ಉತ್ತಮ ಫಸಲಿನಿಂದಾಗಿ ಕರೊನಾ ಕಷ್ಟ ಕಾಲದಲ್ಲೂ ವಾಣಿಜ್ಯ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ.

ಈ ಬಾರಿ ತಾಲೂಕಿನಲ್ಲಿ ಅಷ್ಟು ಉತ್ತಮವಾಗಿ ಮಳೆಯಾಗಿಲ್ಲ. ಆದ್ದರಿಂದ ಅಡಕೆ ಕೊಯ್ಲಿನ ಕಾರ್ಯ ಚುರುಕಾಗಿದೆ. ಪ್ರತೀ ವರ್ಷ ಮಳೆಯ ಕಾರಣದಿಂದಾಗಿ ಅಡಿಕೆ ಕೊಯ್ಲು ನಿಧಾನಕ್ಕೆ ಸಾಗುತ್ತಿತ್ತು. ಆದರೆ ಈ ಬಾರಿ ಹಾಗಾಗಿಲ್ಲ. ಚನ್ನಗಿರಿಯಲ್ಲಿ ಜುಲೈನಿಂದ ಬಹುತೇಕ ಮೂರು ತಿಂಗಳ ಕಾಲ ಅಡಿಕೆ ಕೊಯ್ಲು ಮುಂದುವರೆಯುತ್ತದೆ. ಈ ಬಾರಿ ಕರೊನಾ ಕಾರಣದಿಂದಾಗಿ ಅಡಕೆ ವ್ಯಾಪಾರ ಕುಂಠಿತಗೊಂಡಿತ್ತು. ಸರ್ಕಾರದ ನಿಯಮಾವಳಿಗಳಲ್ಲಿ ಬದಲಾವಣೆಯಾಗಿರುವುದರಿಂದ ವ್ಯಾಪಾರದಲ್ಲಿ ಒಳ್ಳೆಯ ಚೇತರಿಕೆ ಕಂಡಿದೆ.

ಇದನ್ನೂ ಓದಿ: ಅಪಘಾತವಾದ ಬಾಲಕನ ಜೀವ ಉಳಿಸಿತು ‘ಬಿಗಿಲ್​’ ಚಿತ್ರ; ಅಚ್ಚರಿಯ ರೀತಿಯಲ್ಲಿ ನಡೆಯಿತು ಆಪರೇಷನ್​

(Areca Nut Market is increasing in Channagiri, Davanagere district farmers are happy)

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ