AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತವಾದ ಬಾಲಕನ ಜೀವ ಉಳಿಸಿತು ‘ಬಿಗಿಲ್​’ ಚಿತ್ರ; ಅಚ್ಚರಿಯ ರೀತಿಯಲ್ಲಿ ನಡೆಯಿತು ಆಪರೇಷನ್​

ಇತ್ತೀಚೆಗೆ 10 ವರ್ಷದ ಬಾಲಕನೊಬ್ಬ ಬೈಕ್​ ಆಕ್ಸಿಡೆಂಟ್​ಗೆ ಒಳಗಾಗಿದ್ದ. ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಕರೆದುಕೊಂಡ ಬಂದಾಗ ತಲೆಯ ಗಾಯದಿಂದ ರಕ್ತಸ್ರಾವ ಆಗುತ್ತಿತ್ತು.

ಅಪಘಾತವಾದ ಬಾಲಕನ ಜೀವ ಉಳಿಸಿತು ‘ಬಿಗಿಲ್​’ ಚಿತ್ರ; ಅಚ್ಚರಿಯ ರೀತಿಯಲ್ಲಿ ನಡೆಯಿತು ಆಪರೇಷನ್​
ದಳಪತಿ ವಿಜಯ್​
TV9 Web
| Edited By: |

Updated on: Jul 09, 2021 | 12:58 PM

Share

ಕಾಲಿವುಡ್​ ನಟ ದಳಪತಿ ವಿಜಯ್ ಅವರಿ​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. 2019ರಲ್ಲಿ ಬಿಡುಗಡೆಯಾದ ಅವರ ‘ಬಿಗಿಲ್’​ ಸಿನಿಮಾ ಬಗ್ಗೆ ಈಗ ಮತ್ತೆ ಸುದ್ದಿ ಆಗುತ್ತಿದೆ. ಆದರೆ ಅದು ಬಾಕ್ಸ್​ ಆಫೀಸ್ ಕಲೆಕ್ಷನ್​​, ಸ್ಯಾಟಲೈಟ್​ ರೈಟ್ಸ್​ ಇತ್ಯಾದಿ ವ್ಯವಹಾರಕ್ಕೆ ಸಂಬಂಧಿಸಿದ ಸುದ್ದಿ ಅಲ್ಲ. ಅಚ್ಚರಿ ಎಂದರೆ ಒಬ್ಬ ಬಾಲಕನ ಪ್ರಾಣ ಉಳಿಸಲು ಬಿಗಿಲ್ ಸಿನಿಮಾ ನೆರವಾಗಿದೆ. ಅಚ್ಚರಿ ಎನಿಸಿದರೂ ಹೀಗೊಂದು ಘಟನೆ ವರದಿ ಆಗಿದೆ. ವಿಷಯ ಗೊತ್ತಾದ ಬಳಿಕ ಅಭಿಮಾನಿಗಳಿಗೆ ವಿಜಯ್​ ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತಿದೆ.

ಇತ್ತೀಚೆಗೆ 10 ವರ್ಷದ ಬಾಲಕನೊಬ್ಬ ಬೈಕ್​ ಆಕ್ಸಿಡೆಂಟ್​ಗೆ ಒಳಗಾಗಿದ್ದ. ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಕರೆದುಕೊಂಡ ಬಂದಾಗ ತಲೆಯ ಗಾಯದಿಂದ ರಕ್ತಸ್ರಾವ ಆಗುತ್ತಿತ್ತು. ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ಇಂಜೆಕ್ಷನ್​ಗೆ ಹೆದರಿಕೊಂಡ ಆತ ಯಾವುದಕ್ಕೂ ಅವಕಾಶವನ್ನೇ ನೀಡಲಿಲ್ಲ. ಆಗ ವೈದ್ಯರ ಸಹಾಯಕ್ಕೆ ಬಂದಿದ್ದೇ ವಿಜಯ್​ ನಟನೆಯ ಬಿಗಿಲ್​ ಸಿನಿಮಾ.

ಹೌದು, ವೈದ್ಯರೊಬ್ಬರು ಬಾಲಕನ ಜೊತೆ ಮಾತನಾಡಿದಾಗ ಆತನಿಗೆ ನಟ ವಿಜಯ್​ ಎಂದರೆ ತುಂಬ ಇಷ್ಟ ಎಂಬುದು ಗೊತ್ತಾಯಿತು. ‘ಬಿಗಿಲ್​’ ಸಿನಿಮಾ ಕೂಡ ಅವನ ಅಚ್ಚುಮೆಚ್ಚು ಎಂಬುದನ್ನು ವೈದ್ಯರು ಪತ್ತೆ ಮಾಡಿದರು. ಆಗ ಹುಡುಗನ ಮನವೊಲಿಸಿ, ಕೈಗೆ ಮೊಬೈಲ್​ ನೀಡಿ ಅದರಲ್ಲಿ ‘ಬಿಗಿಲ್’​ ಚಿತ್ರ ತೋರಿಸಲಾಯಿತು. ಆತ ಬಿಗಿಲ್​ ನೋಡುತ್ತಿರುವಾಗ ವೈದ್ಯರು ಸರ್ಜರಿ ಮಾಡಲು ಆರಂಭಿಸಿದರು. ಬಾಲಕ ಸಿನಿಮಾದಲ್ಲಿ ಮಗ್ನನಾಗಿರುವಾಗಲೇ ಆಪರೇಷನ್​ ಮಾಡಿ ಮುಗಿಸಲಾಯಿತು ಎಂದು ವರದಿ ಆಗಿದೆ.

ಈ ಘಟನೆ ಕುರಿತು ತಮಿಳು ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟ ಆಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಭಿಮಾನಿಗಳು ವಿಜಯ್​ಗೆ ಜಯಕಾರ ಹಾಕುತ್ತಿದ್ದಾರೆ. ಒಬ್ಬ ನಟನಿಗೆ ಗಲ್ಲಾಪೆಟ್ಟಿಗೆಯಲ್ಲಿ ಸಿಗುವ ಗೆಲುವಿಗಿಂತಲೂ ಈ ರೀತಿ ಸಿಗುವ ಪ್ರೀತಿಯೇ ದೊಡ್ಡದು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

2019ರ ಅಕ್ಟೋಬರ್​ 25ರಂದು ಬಿಡುಗಡೆ ಆಗಿದ್ದ ‘ಬಿಗಿಲ್​’ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡಿದ್ದರು. ವಿಜಯ್​ ಜೊತೆ ನಯನತಾರಾ, ಜಾಕಿ ಶ್ರಾಫ್​ ಮುಂತಾದವರು ನಟಿಸಿದ್ದರು. ದ್ವಿಪಾತ್ರದಲ್ಲಿ ವಿಜಯ್​ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:

Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್​ಗೆ ಶಾರುಖ್ ಖಾನ್​ ಹೊಗಳಿಕೆ; ಯಾವುದು ಆ ಮಾತು?

Thalapathy Vijay: ದಳಪತಿ ವಿಜಯ್​ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರು; ಹಾಗಾದ್ರೆ ಈ ನಟನ ಒಟ್ಟು ಆಸ್ತಿ ಎಷ್ಟು?

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ