AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತವಾದ ಬಾಲಕನ ಜೀವ ಉಳಿಸಿತು ‘ಬಿಗಿಲ್​’ ಚಿತ್ರ; ಅಚ್ಚರಿಯ ರೀತಿಯಲ್ಲಿ ನಡೆಯಿತು ಆಪರೇಷನ್​

ಇತ್ತೀಚೆಗೆ 10 ವರ್ಷದ ಬಾಲಕನೊಬ್ಬ ಬೈಕ್​ ಆಕ್ಸಿಡೆಂಟ್​ಗೆ ಒಳಗಾಗಿದ್ದ. ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಕರೆದುಕೊಂಡ ಬಂದಾಗ ತಲೆಯ ಗಾಯದಿಂದ ರಕ್ತಸ್ರಾವ ಆಗುತ್ತಿತ್ತು.

ಅಪಘಾತವಾದ ಬಾಲಕನ ಜೀವ ಉಳಿಸಿತು ‘ಬಿಗಿಲ್​’ ಚಿತ್ರ; ಅಚ್ಚರಿಯ ರೀತಿಯಲ್ಲಿ ನಡೆಯಿತು ಆಪರೇಷನ್​
ದಳಪತಿ ವಿಜಯ್​
TV9 Web
| Updated By: ಮದನ್​ ಕುಮಾರ್​|

Updated on: Jul 09, 2021 | 12:58 PM

Share

ಕಾಲಿವುಡ್​ ನಟ ದಳಪತಿ ವಿಜಯ್ ಅವರಿ​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. 2019ರಲ್ಲಿ ಬಿಡುಗಡೆಯಾದ ಅವರ ‘ಬಿಗಿಲ್’​ ಸಿನಿಮಾ ಬಗ್ಗೆ ಈಗ ಮತ್ತೆ ಸುದ್ದಿ ಆಗುತ್ತಿದೆ. ಆದರೆ ಅದು ಬಾಕ್ಸ್​ ಆಫೀಸ್ ಕಲೆಕ್ಷನ್​​, ಸ್ಯಾಟಲೈಟ್​ ರೈಟ್ಸ್​ ಇತ್ಯಾದಿ ವ್ಯವಹಾರಕ್ಕೆ ಸಂಬಂಧಿಸಿದ ಸುದ್ದಿ ಅಲ್ಲ. ಅಚ್ಚರಿ ಎಂದರೆ ಒಬ್ಬ ಬಾಲಕನ ಪ್ರಾಣ ಉಳಿಸಲು ಬಿಗಿಲ್ ಸಿನಿಮಾ ನೆರವಾಗಿದೆ. ಅಚ್ಚರಿ ಎನಿಸಿದರೂ ಹೀಗೊಂದು ಘಟನೆ ವರದಿ ಆಗಿದೆ. ವಿಷಯ ಗೊತ್ತಾದ ಬಳಿಕ ಅಭಿಮಾನಿಗಳಿಗೆ ವಿಜಯ್​ ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತಿದೆ.

ಇತ್ತೀಚೆಗೆ 10 ವರ್ಷದ ಬಾಲಕನೊಬ್ಬ ಬೈಕ್​ ಆಕ್ಸಿಡೆಂಟ್​ಗೆ ಒಳಗಾಗಿದ್ದ. ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಕರೆದುಕೊಂಡ ಬಂದಾಗ ತಲೆಯ ಗಾಯದಿಂದ ರಕ್ತಸ್ರಾವ ಆಗುತ್ತಿತ್ತು. ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ಇಂಜೆಕ್ಷನ್​ಗೆ ಹೆದರಿಕೊಂಡ ಆತ ಯಾವುದಕ್ಕೂ ಅವಕಾಶವನ್ನೇ ನೀಡಲಿಲ್ಲ. ಆಗ ವೈದ್ಯರ ಸಹಾಯಕ್ಕೆ ಬಂದಿದ್ದೇ ವಿಜಯ್​ ನಟನೆಯ ಬಿಗಿಲ್​ ಸಿನಿಮಾ.

ಹೌದು, ವೈದ್ಯರೊಬ್ಬರು ಬಾಲಕನ ಜೊತೆ ಮಾತನಾಡಿದಾಗ ಆತನಿಗೆ ನಟ ವಿಜಯ್​ ಎಂದರೆ ತುಂಬ ಇಷ್ಟ ಎಂಬುದು ಗೊತ್ತಾಯಿತು. ‘ಬಿಗಿಲ್​’ ಸಿನಿಮಾ ಕೂಡ ಅವನ ಅಚ್ಚುಮೆಚ್ಚು ಎಂಬುದನ್ನು ವೈದ್ಯರು ಪತ್ತೆ ಮಾಡಿದರು. ಆಗ ಹುಡುಗನ ಮನವೊಲಿಸಿ, ಕೈಗೆ ಮೊಬೈಲ್​ ನೀಡಿ ಅದರಲ್ಲಿ ‘ಬಿಗಿಲ್’​ ಚಿತ್ರ ತೋರಿಸಲಾಯಿತು. ಆತ ಬಿಗಿಲ್​ ನೋಡುತ್ತಿರುವಾಗ ವೈದ್ಯರು ಸರ್ಜರಿ ಮಾಡಲು ಆರಂಭಿಸಿದರು. ಬಾಲಕ ಸಿನಿಮಾದಲ್ಲಿ ಮಗ್ನನಾಗಿರುವಾಗಲೇ ಆಪರೇಷನ್​ ಮಾಡಿ ಮುಗಿಸಲಾಯಿತು ಎಂದು ವರದಿ ಆಗಿದೆ.

ಈ ಘಟನೆ ಕುರಿತು ತಮಿಳು ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟ ಆಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಭಿಮಾನಿಗಳು ವಿಜಯ್​ಗೆ ಜಯಕಾರ ಹಾಕುತ್ತಿದ್ದಾರೆ. ಒಬ್ಬ ನಟನಿಗೆ ಗಲ್ಲಾಪೆಟ್ಟಿಗೆಯಲ್ಲಿ ಸಿಗುವ ಗೆಲುವಿಗಿಂತಲೂ ಈ ರೀತಿ ಸಿಗುವ ಪ್ರೀತಿಯೇ ದೊಡ್ಡದು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

2019ರ ಅಕ್ಟೋಬರ್​ 25ರಂದು ಬಿಡುಗಡೆ ಆಗಿದ್ದ ‘ಬಿಗಿಲ್​’ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡಿದ್ದರು. ವಿಜಯ್​ ಜೊತೆ ನಯನತಾರಾ, ಜಾಕಿ ಶ್ರಾಫ್​ ಮುಂತಾದವರು ನಟಿಸಿದ್ದರು. ದ್ವಿಪಾತ್ರದಲ್ಲಿ ವಿಜಯ್​ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:

Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್​ಗೆ ಶಾರುಖ್ ಖಾನ್​ ಹೊಗಳಿಕೆ; ಯಾವುದು ಆ ಮಾತು?

Thalapathy Vijay: ದಳಪತಿ ವಿಜಯ್​ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರು; ಹಾಗಾದ್ರೆ ಈ ನಟನ ಒಟ್ಟು ಆಸ್ತಿ ಎಷ್ಟು?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ