AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ಗಂಟೆಗಳಲ್ಲಿ 181 ಕಿ.ಮೀ ಓಡಿದ ಅಶ್ವಿನಿ: ರೊಮೇನಿಯಾದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ ಸಾಗರದ ಓಟಗಾರ್ತಿ

ಅಶ್ವಿನಿ 24 ಗಂಟೆಗಳಲ್ಲಿ 181 ಕಿ.ಮೀ ಓಡಿದ್ದಾರೆ. ಅಕ್ಟೋಬರ್​ನಲ್ಲಿ ರೊಮ್ಯಾನಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತವನ್ನು ಅಶ್ವಿನಿ ಪ್ರತಿನಿಧಿಸಲಿದ್ದಾರೆ.

24 ಗಂಟೆಗಳಲ್ಲಿ 181 ಕಿ.ಮೀ ಓಡಿದ ಅಶ್ವಿನಿ: ರೊಮೇನಿಯಾದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ ಸಾಗರದ ಓಟಗಾರ್ತಿ
ಅಶ್ವಿನಿ ಭಟ್
ರಾಜೇಶ್ ದುಗ್ಗುಮನೆ
|

Updated on:Jan 27, 2021 | 10:21 PM

Share

ಒಂದೆರಡು ಕಿಲೋ ಮೀಟರ್​ ನಡೆಯೋದು ಎಂದರೆ ಅದು ದೊಡ್ಡ ಸವಾಲು ಎಂಬಂತೆ ನೋಡುತ್ತದೆ ಈಗಿನ ಪೀಳಿಗೆ. ಆದರೆ, ಒಂದು ದಿನದಲ್ಲಿ 180 ಕಿ.ಮೀ ಓಡುವುದು ಎಂದರೆ? ಅದು 35ನೇ ವಯಸ್ಸಿಗೆ! ಹೀಗೊಂದು ದಾಖಲೆಯನ್ನು ಸಾಗರ ಮೂಲದ ಅಶ್ವಿನಿ ಭಟ್​ ಮಾಡಿದ್ದಾರೆ.

‘ಬೆಂಗಳೂರು ಸ್ಟೇಡಿಯಂ ರನ್’​ ಸ್ಪರ್ಧೆಯಲ್ಲಿ ಅಶ್ವಿನಿ ಭಟ್​ 24 ಗಂಟೆಗಳಲ್ಲಿ 181 ಕಿ.ಮೀ ಓಡಿದ್ದಾರೆ. ಈ ಮೂಲಕ ಭಾರತದ ಆರು ಜನರ ತಂಡಕ್ಕೆ ಆಯ್ಕೆ ಆಗಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಇವರು ಎನ್ನುವುದು ವಿಶೇಷ. ಅಕ್ಟೋಬರ್​ನಲ್ಲಿ ರೊಮೇನಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತವನ್ನು ಅಶ್ವಿನಿ ಪ್ರತಿನಿಧಿಸಲಿದ್ದಾರೆ.

ಚಿಕ್ಕನಿಂದಲೂ ರನ್ನಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಅಶ್ವಿನಿ. ತಂದೆ ಬಿ.ಕೆ. ಗಣಪತಿ ಅವರು ಚಿಕ್ಕಂದಿನಿಂದಲೂ ಅವರಿಗೆ ಪ್ರೋತ್ಸಾಹ ನೀಡುತ್ತಲೇ ಬರುತ್ತಿದ್ದರು. ಓದು ಮುಗಿದ ನಂತರ ಅವರು ಸೇರಿದ್ದು ಸಾಫ್ಟ್​ವೇರ್ ಇಂಜಿನಿಯರ್​ ಕೆಲಸಕ್ಕೆ. ನೌಕರಿ ಸಾಕೆನಿಸಿದಾಗ, ಕೆಲಸಕ್ಕೆ ರಿಸೈನ್​ ಮಾಡಿದ್ದರು. ನಂತರ ಒಂದು ವರ್ಷ ಫೋಟೋಗ್ರಫಿ ಮಾಡಿದ್ದರು. ಈ ವೇಳೆ ಅವರಿಗೆ ಮತ್ತೆ ಓಡಬೇಕು ಎನ್ನುವ ತುಡಿತ ಶುರುವಾಗಿತ್ತು.

ದೇಶವನ್ನು ನಾನು ಪ್ರತಿನಿಧಿಸಬಹುದು ಎಂದು ಮೊದಲ ಬಾರಿಗೆ ಗೊತ್ತಾಗಿದ್ದು 2018ರಲ್ಲಿ. ಆಗ ನನ್ನ ವಯಸ್ಸು 30 ದಾಟಿತ್ತು. ನಮಗೆಲ್ಲ ಅವಕಾಶ ಸಿಗುವುದಿಲ್ಲ ಎಂದು ನಾನಂದುಕೊಂಡಿದ್ದೆ.  ಆದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ಗೊತ್ತಾಗಿತ್ತು. 42 ಕಿ.ಮೀಗಿಂತ ದೂರದ ರನ್ನಿಂಗ್​ಗೆ ಅಲ್ಟ್ರಾ ರನ್​ ಎಂದು ಕರೆಯುತ್ತಾರೆ. ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಗೊತ್ತಾಗಿತ್ತು. ಕಳೆದ ವರ್ಷದ ಸ್ಪರ್ಧೆಯಲ್ಲಿ ನಾನು 12 ಗಂಟೆಯಲ್ಲಿ  112 ಕಿ.ಮೀ ಓಡಿದ್ದು ದಾಖಲೆ ಆಗಿತ್ತು.. ಎಂದು ತಮ್ಮ ಬಗ್ಗೆ ಮಾಹಿತಿ ನೀಡುತ್ತಾರೆ ಅಶ್ವಿನಿ.

ಈ ಬಾರಿ ರೊಮೇನಿಯಾದಲ್ಲಿ ನಡೆಯಲಿರುವ ಸ್ಪರ್ಧೆಗೆ ಭಾರತದಿಂದ ಆರು ಪುರುಷರು ಹಾಗೂ ಆರು ಮಹಿಳೆಯರನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗಿತ್ತು. ಇದಕ್ಕೆ ಆಯ್ಕೆ ಆಗಬೇಕು ಎಂದರೆ 24 ಗಂಟೆಗಳಲ್ಲಿ ಕನಿಷ್ಠ 175 ಕಿ.ಮೀ ಓಡಬೇಕಿತ್ತು. ನಾನು ಕೂಡ ಇದರಲ್ಲಿ ಪಾಲ್ಗೊಂಡೆ. ಈಗ ಆರು ಜನರ ತಂಡದಲ್ಲಿ ನಾನೂ ಇದ್ದೇನೆ. ರೊಮೇನಿಯಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ನನ್ನ ಸಾಧನೆಗೆ ಗಂಡ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಂತಸ ಹೊರ ಹಾಕುತ್ತಾರೆ ಅಶ್ವಿನಿ.

ಹೋರಿ ಹಬ್ಬದ ವಿಶೇಷ: ಹೋರಿಗಳು ಮಿಂಚಿನ ಓಟ ಓಡಿದ್ದು ಎಲ್ಲಿ ಗೊತ್ತಾ?

Published On - 3:42 pm, Wed, 27 January 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್