AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿಯಲ್ಲಿ ಬಾಣಂತಿಗೆ ನೆರವು ನೀಡಿದ ಎಎಸ್ಐ; ವೀಕೆಂಡ್ ಕರ್ಫ್ಯೂ ನಡುವೆ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಆಧಿಕಾರಿ

ಬಾಗೇಪಲ್ಲಿಯಿಂದ ಬಸ್ ಮೂಲಕ ಬಳ್ಳಾರಿಗೆ ಕವಿತಾ ಎಂಬ ಬಾಣಂತಿ ಮಹಿಳೆ ತನ್ನ ಮೂರು ತಿಂಗಳ ಶಿಶುವಿನೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಬಂದಿದ್ದರು. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮಕ್ಕೆ ತೆರಳಬೇಕಿದ್ದ ಕವಿತಾ ವೀಕೆಂಡ್ ಕರ್ಫ್ಯೂನಿಂದ ವಾಹನಗಳಿಲ್ಲದೆ 3 ತಿಂಗಳ ಶಿಶು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದರು.

ಬಳ್ಳಾರಿಯಲ್ಲಿ ಬಾಣಂತಿಗೆ ನೆರವು ನೀಡಿದ ಎಎಸ್ಐ; ವೀಕೆಂಡ್ ಕರ್ಫ್ಯೂ ನಡುವೆ ಮಾನವೀಯತೆ ಮೆರೆದ ಸಂಚಾರಿ ಪೊಲೀಸ್ ಆಧಿಕಾರಿ
ಬಾಣಂತಿ ಮಹಿಳೆ ಕುಟುಂಬದವರಿಗೆ ಆಟೋದಲ್ಲಿ ಕಳುಹಿಸಿದ ಸಂಚಾರಿ ಪೊಲೀಸ್ ಆಧಿಕಾರಿ
sandhya thejappa
|

Updated on: Apr 25, 2021 | 2:01 PM

Share

ಬಳ್ಳಾರಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ಇಡೀ ರಾಜ್ಯ ಸ್ತಬ್ಧವಾಗಿದೆ. ಜನರು ಬೇಕಾಬಿಟ್ಟಿಯಾಗಿ ಓಡಾದಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಬಳ್ಳಾರಿಯ ಸಂಚಾರಿ ಪೊಲೀಸ್ ಬಾಣಂತಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆಯ ಮಾತುಗಳನ್ನು ಕೆಲವರು ಭಾಷಣ ಮಾಡುವಾಗ ಅಥವಾ ಇತರರ ಮುಂದೆ ಹೀರೋ ಎಂದೆನಿಕೊಳ್ಳುವಾಗ ಹೇಳುತ್ತಾರೆ. ಆದರೆ ಮಾನವೀಯ ಗುಣಗಳು ಭಾಷಣ ಬಿಗಿಯುವವರಿಗೇ ಇರುವುದಿಲ್ಲ. ಹಾಗಂತ ಎಲ್ಲರೂ ಈ ವರ್ಗಕ್ಕೆ ಸೇರುವುದಿಲ್ಲ. ಕೆಲವರು ತನಗೆ ತೊಂದರೆಯಾಗುತ್ತದೆ, ದುಡ್ಡು ಖರ್ಚಾಗುತ್ತದೆ ಎಂದು ಯೋಚಿಸದೆ ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಹೀಗೆ ಸಹಾಯ ಮಾಡುವ ಮೂಲಕ ಬಳ್ಳಾರಿಯ ಸಂಚಾರಿ ಪೊಲೀಸ್ ಅಧಿಕಾರಿ ಮಾನವೀಯತೆ ಮೆರೆದಿದ್ದಾರೆ.

ಬಾಗೇಪಲ್ಲಿಯಿಂದ ಬಸ್ ಮೂಲಕ ಬಳ್ಳಾರಿಗೆ ಕವಿತಾ ಎಂಬ ಬಾಣಂತಿ ಮಹಿಳೆ ತನ್ನ ಮೂರು ತಿಂಗಳ ಶಿಶುವಿನೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಬಂದಿದ್ದರು. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮಕ್ಕೆ ತೆರಳಬೇಕಿದ್ದ ಕವಿತಾ ವೀಕೆಂಡ್ ಕರ್ಫ್ಯೂನಿಂದ ವಾಹನಗಳಿಲ್ಲದೆ 3 ತಿಂಗಳ ಶಿಶು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಗರದ ರಾಯಲ್ ವೃತ್ತದಲ್ಲಿ ಟ್ರಾಫಿಕ್ ಎಎಸ್​ಐ ಹೆಚ್ ನಾಗಭೂಷಣ ಅವರಿಂದ ಆಕೆಯನ್ನು ವಿಚಾರಿಸಿದರು. ವಿಚಾರಿಸಿದ ಬಳಿಕ ಬಾಣಂತಿ ಗೋಟೂರು ಗ್ರಾಮಕ್ಕೆ ಹೋಗಬೇಕಾಗಿರುವುದು ಸಂಚಾರಿ ಪೊಲೀಸ್ ಆದ ನಾಗಭೂಷಣರವರಿಗೆ ತಿಳಿಯಿತು. 3 ತಿಂಗಳ ಶಿಶು ಎತ್ತಿಕೊಂಡು ನಡೆದು ಹೋಗುತ್ತಿದ್ದ ಬಾಣಂತಿ ಕವಿತಾಳನ್ನು ನಿಲ್ಲಿಸಿ ಆಕೆಗೆ ಮನೆ ಹೋಗಲು ಆಟೋ ವ್ಯವಸ್ಥೆ ಮಾಡುವ ಜೊತೆಗೆ ಆಟೋ ಬಾಡಿಗೆಯನ್ನು ಸ್ವತಃ ತಾವೇ ನೀಡಿ ಕಳುಹಿಸಿಕೊಟ್ಟರು.

ಮೂರು ತಿಂಗಳ ಶಿಶುವಿನೊಂದಿಗೆ ಇರುವ ಮಹಿಳೆ

ಇದನ್ನೂ ಓದಿ

ತೀರ್ಪು ನೀಡುವಾಗ ‘ಜಾಮೀನು ಅಲ್ಲ, ಜೈಲು‘ ಎಂಬ ತತ್ವವನ್ನು ಪಾಲಿಸಿ; ಹೈಕೋರ್ಟ್​ಗಳಿಗೆ ಸುಪ್ರೀಂಕೋರ್ಟ್ ಸೂಚನೆ

ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

(Assistant Sub Inspector helps to woman in bellary)