AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಗ್ರಹ’ಕ್ಕಾಗಿ ಗ್ರಾಮಸ್ಥರು-ಅರ್ಚಕರ ನಡುವೆ ಬಿಗ್ ಫೈಟ್!

ಬಳ್ಳಾರಿ: ಬೆಣಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ದುರ್ಗಮ್ಮ ಹಾಗೂ ಮರಿಗೆಮ್ಮ ದೇವಿಯ ರಕ್ತಚಂದನದ ವಿಗ್ರಹಗಳಿವೆ. ಆದ್ರೆ, ದೇವಾಲಯ ಚಿಕ್ಕದಾಗಿದ್ದರಿಂದ 2009ರಲ್ಲಿ ಹೊಸದಾಗಿ ದೇಗುಲ ನಿರ್ಮಿಸಲು ಗ್ರಾಮಸ್ಥರು ಮುಂದಾದ್ರು. ಅದರಂತೆ ಹಳೆ ದೇವಸ್ಥಾನ ಬಳಿಯೇ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಆದ್ರೆ, ಗರ್ಭಗುಡಿಯಲ್ಲಿ ಹಳೆ ವಿಗ್ರಹಗಳನ್ನ ಇಡಬೇಕೋ ಅಥವಾ ಹೊಸ ವಿಗ್ರಹಗಳನ್ನ ಪ್ರತಿಷ್ಠಾಪಿಸಬೇಕೋ ಅನ್ನೋ ವಿಚಾರಕ್ಕೆ ಜಟಾಪಟಿ ನಡೀತಿದೆ. ಹಳೆ ಮೂರ್ತಿಗಳನ್ನ ಇಡಲು ಟ್ರಸ್ಟ್ ಸದಸ್ಯರು ಒಪ್ಪುತ್ತಿಲ್ಲ. ಬದಲಾಗಿ ಹೊಸ ಕಲ್ಲಿನ ಮೂರ್ತಿಗಳನ್ನ ಪ್ರತಿಷ್ಠಾಪಿಸಲು ಪ್ಲಾನ್ […]

‘ವಿಗ್ರಹ’ಕ್ಕಾಗಿ ಗ್ರಾಮಸ್ಥರು-ಅರ್ಚಕರ ನಡುವೆ ಬಿಗ್ ಫೈಟ್!
ಸಾಧು ಶ್ರೀನಾಥ್​
|

Updated on: Dec 27, 2019 | 7:04 AM

Share

ಬಳ್ಳಾರಿ: ಬೆಣಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ದುರ್ಗಮ್ಮ ಹಾಗೂ ಮರಿಗೆಮ್ಮ ದೇವಿಯ ರಕ್ತಚಂದನದ ವಿಗ್ರಹಗಳಿವೆ. ಆದ್ರೆ, ದೇವಾಲಯ ಚಿಕ್ಕದಾಗಿದ್ದರಿಂದ 2009ರಲ್ಲಿ ಹೊಸದಾಗಿ ದೇಗುಲ ನಿರ್ಮಿಸಲು ಗ್ರಾಮಸ್ಥರು ಮುಂದಾದ್ರು. ಅದರಂತೆ ಹಳೆ ದೇವಸ್ಥಾನ ಬಳಿಯೇ ನೂತನ ಕಟ್ಟಡ ನಿರ್ಮಾಣಗೊಂಡಿದೆ.

ಆದ್ರೆ, ಗರ್ಭಗುಡಿಯಲ್ಲಿ ಹಳೆ ವಿಗ್ರಹಗಳನ್ನ ಇಡಬೇಕೋ ಅಥವಾ ಹೊಸ ವಿಗ್ರಹಗಳನ್ನ ಪ್ರತಿಷ್ಠಾಪಿಸಬೇಕೋ ಅನ್ನೋ ವಿಚಾರಕ್ಕೆ ಜಟಾಪಟಿ ನಡೀತಿದೆ. ಹಳೆ ಮೂರ್ತಿಗಳನ್ನ ಇಡಲು ಟ್ರಸ್ಟ್ ಸದಸ್ಯರು ಒಪ್ಪುತ್ತಿಲ್ಲ. ಬದಲಾಗಿ ಹೊಸ ಕಲ್ಲಿನ ಮೂರ್ತಿಗಳನ್ನ ಪ್ರತಿಷ್ಠಾಪಿಸಲು ಪ್ಲಾನ್ ಮಾಡಿದ್ದಾರೆ. ಇದಕ್ಕೆ ದೇವಸ್ಥಾನದ ಅರ್ಚಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರ ವಿರೋಧದ ಚರ್ಚೆ ನಡುವೆಯೇ ಜನವರಿ 28ರಂದು ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೀತಿದೆ.

ಆಂಧ್ರ ಗಡಿಭಾಗದಲ್ಲಿರೋ ಬೆಣಕಲ್ಲು ಗ್ರಾಮದಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ದೇವಾಲಯದ ಗರ್ಭಗುಡಿ, ಹೊರ ಆವರಣದ ಕೆಲಸಗಳು ಮುಗಿದಿದೆ. ಆದ್ರೆ, ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡೋ ವಿಚಾರಕ್ಕೆ ಅರ್ಚಕರು ಹಾಗೂ ಟ್ರಸ್ಟ್ ನಡುವೆ ಒಮ್ಮತ ಮೂಡುತ್ತಿಲ್ಲ. ಹಿಂದಿನಿಂದಲೂ ಹಳೆ ವಿಗ್ರಹಗಳಿಗೆ ಪೂಜೆ ಮಾಡಲಾಗ್ತಿದೆ. ಈಗ ವಿಗ್ರಹಗಳನ್ನ ಬದಲಾಯಿಸೋದು ಬೇಡ ಅನ್ನೋದು ಅರ್ಚಕರ ವಾದ. ಅಲ್ಲದೆ, ಗ್ರಾಮದ ಸಭೆ ನಡೆಸದೇ ನಿರ್ಧಾರ ಕೈಗೊಂಡ ಟ್ರಸ್ಟ್​ ವಿರುದ್ಧ ಬೇಸರ ವ್ಯಕ್ತಪಡಿಸ್ತಿದ್ದಾರೆ.

ವಿಗ್ರಹದ ವಿಚಾರಕ್ಕೆ ಅರ್ಚಕರು ಹಾಗೂ ಟ್ರಸ್ಟ್ ಸದಸ್ಯರ ನಡುವೆ ನಡೀತಿರೋ ಗುದ್ದಾಟಕ್ಕೆ ಕಳೆದೊಂದು ದಶಕದಿಂದ ಜಾತ್ರೆಯೇ ನಡೆದಿಲ್ಲ. ವಿಗ್ರಹ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್ ಆದ್ರೂ, ಮೂಲ ವಿಗ್ರಹಕ್ಕೆ ಪೂಜೆ ಮಾಡಬೇಕೋ? ಹೊಸ ಮೂರ್ತಿಗಳನ್ನ ಪ್ರತಿಷ್ಠಾಪಿಸಬೇಕೋ ಅನ್ನೋ ಚರ್ಚೆ ನಡೆಯುತ್ತಲೇ ಇದೆ.

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ