AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂದಹಾಸ ತಂದ ಬ್ಯಾಡಗಿ, ಇಳುವರಿ ಕಮ್ಮಿಯಿದ್ರೂ ರೈತರಿಗೆ ಭರಪೂರ ಆದಾಯ

ಬಳ್ಳಾರಿ: ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ರೈತರು ಅತಿವೃಷ್ಟಿ, ಅನಾವೃಷ್ಟಿಯನ್ನ ಎದುರಿಸುತ್ತಲೇ ಇದ್ದಾರೆ. ಬೆಳೆ ಬಂದ್ರೆ ರೇಟ್ ಇರಲ್ಲ. ರೇಟ್ ಇದ್ರೆ ಬೆಳೆ ಬರಲ್ಲ. ಎರಡೂ ಇದ್ರೆ ಪ್ರಕೃತಿ ಮುನಿಸಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲ್ಲ. ಆದ್ರೆ ಈ ಬಾರಿ ಬ್ಯಾಡಗಿ ಮೆಣಸಿನಕಾಯಿ ರೈತರ ಮೊಗದಲ್ಲಿ ಸಂತಸ ತಂದಿದೆ. ಗಣಿನಾಡಿನ ಚಿಲ್ಲಿ ಬೆಳಗಾರರಿಗೆ ಒಲೀತು ಬಂಪರ್! ಗಣಿನಾಡು ಬಳ್ಳಾರಿ. ಇಲ್ಲಿನ ರೈತರು ಸದಾ ಒಂದಿಲ್ಲೊಂದು ಸಮಸ್ಯೆಯ ಸುಳಿಗೇ ಸಿಕ್ಕಾಕ್ಕೊಂಡೇ ಇರ್ತಾರೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿಯೋ […]

ಮಂದಹಾಸ ತಂದ ಬ್ಯಾಡಗಿ, ಇಳುವರಿ ಕಮ್ಮಿಯಿದ್ರೂ ರೈತರಿಗೆ ಭರಪೂರ ಆದಾಯ
ಸಾಧು ಶ್ರೀನಾಥ್​
|

Updated on:Jan 16, 2020 | 5:17 PM

Share

ಬಳ್ಳಾರಿ: ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ರೈತರು ಅತಿವೃಷ್ಟಿ, ಅನಾವೃಷ್ಟಿಯನ್ನ ಎದುರಿಸುತ್ತಲೇ ಇದ್ದಾರೆ. ಬೆಳೆ ಬಂದ್ರೆ ರೇಟ್ ಇರಲ್ಲ. ರೇಟ್ ಇದ್ರೆ ಬೆಳೆ ಬರಲ್ಲ. ಎರಡೂ ಇದ್ರೆ ಪ್ರಕೃತಿ ಮುನಿಸಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲ್ಲ. ಆದ್ರೆ ಈ ಬಾರಿ ಬ್ಯಾಡಗಿ ಮೆಣಸಿನಕಾಯಿ ರೈತರ ಮೊಗದಲ್ಲಿ ಸಂತಸ ತಂದಿದೆ.

ಗಣಿನಾಡಿನ ಚಿಲ್ಲಿ ಬೆಳಗಾರರಿಗೆ ಒಲೀತು ಬಂಪರ್! ಗಣಿನಾಡು ಬಳ್ಳಾರಿ. ಇಲ್ಲಿನ ರೈತರು ಸದಾ ಒಂದಿಲ್ಲೊಂದು ಸಮಸ್ಯೆಯ ಸುಳಿಗೇ ಸಿಕ್ಕಾಕ್ಕೊಂಡೇ ಇರ್ತಾರೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿಯೋ ಕಡೆ ಒಂದ್ ಸಮಸ್ಯೆಯಾದ್ರೆ, ನೀರಿಲ್ಲದ ಕಡೆ ಮತ್ತೊಂದು ಸಮಸ್ಯೆ. ಅದ್ರಲ್ಲೂ ಈ ಬಾರಿ ಅತಿವೃಷ್ಟಿ ರೈತರನ್ನ ಹಿಂಡಿ ಹಿಪ್ಪೆ ಮಾಡಿತ್ತು. ಕಳೆದ ಮೂರ್ನಾಲ್ಕು ವರ್ಷದಲ್ಲಿ ಮೆಣಸಿನಕಾಯಿ ಬೆಳೆಗಾರರು ನಲುಗಿ ಹೋಗಿದ್ರು. ಆದ್ರೆ ಈ ವರ್ಷ ಬ್ಯಾಡಗಿ ಮೆಣಸಿನಕಾಯಿ ದರ 33 ಸಾವಿರ ದಾಟಿದ್ದು, ರೈತರು ಸಂತಸದಲ್ಲಿದ್ದಾರೆ.

ಇನ್ನು ಈ ಬಾರಿ ಅತಿಹೆಚ್ಚು ಮಳೆಯಾಗಿದ್ದರಿಂದ ಭೂಮಿ ತೇವಾಂಶ ಹೆಚ್ಚಾಗಿ ಇಳುವರಿ ಕುಸಿದಿದೆ. ಎಕರೆಗೆ 20 ಕ್ವಿಂಟಾಲ್ ಬರ್ತಿದ್ದ ಬೆಳೆ ಈ ಬಾರಿ 10 ಕ್ವಿಂಟಾಲ್ ಬಂದಿದೆ. ಗುಂಟೂರು ಮೆಣಸಿನಕಾಯಿ ರೇಟ್ 16ರಿಂದ 17 ಸಾವಿರ ಮಾರಾಟವಾಗ್ತಿದ್ರೆ, ಬ್ಯಾಡಗಿ ಮಾತ್ರ ಗುಂಟೂರ್ ಮೆಣಸಿನಕಾಯಿಯ ದುಪ್ಪಟ್ಟು ರೇಟ್​ಗೆ ಮಾರಾಟವಾಗ್ತಿದೆ.

ಕಳೆದ ಮೂರು ವರ್ಷಗಳಿಂದ ನಷ್ಟದಲ್ಲಿದ್ದ ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯೋದನ್ನ ನಿಲ್ಲಿಸೋ ನಿರ್ಧಾರಕ್ಕೆ ಬಂದಿದ್ರು. ಆದ್ರೆ ಈ ಬಾರಿ ಇಳುವರಿ ಕಮ್ಮಿಯಾದ್ರೂ ರೇಟ್ ಜಾಸ್ತಿ ಇರೋದ್ರಿಂದ ಅನ್ನದಾತರ ಖುಷಿಗೇ ಪಾರವೇ ಇಲ್ಲದಂತಾಗಿದೆ.

Published On - 3:18 pm, Thu, 16 January 20

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ