AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಗೆ ಕನ್ನ: 8 ದುಷ್ಕರ್ಮಿಗಳಿಂದ 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ

ಮಧ್ಯರಾತ್ರಿ ಮನೆ ಬಾಗಿಲು ಒಡೆದು ದುಷ್ಕರ್ಮಿಗಳು ಒಳ ನುಗ್ಗಿದ್ದಾರೆ.  ಚಂದ್ರಶೇಖರ್ ಮತ್ತು ಪತ್ನಿ, ಸೊಸೆಯನ್ನ ಬೆಡ್ ರೂಮ್​ನಲ್ಲಿ ಕೂಡಿಹಾಕಿ ನಂತರ ದರೋಡೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಗೆ ಕನ್ನ: 8 ದುಷ್ಕರ್ಮಿಗಳಿಂದ 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ
ದರೋಡೆಯಾಗಿರುವುದನ್ನು ಪರಿಶೀಲಿಸುತ್ತಿರುವ ಪೊಲೀಸ್.
TV9 Web
| Edited By: |

Updated on:Oct 25, 2022 | 3:25 PM

Share

ಬೆಳಗಾವಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲಿ ದರೋಡೆ (Robbery) ನಡೆದಿದ್ದು, ಎಂಟು ಜನ ದುಷ್ಕರ್ಮಿಗಳಿಂದ 23 ಲಕ್ಷ ಹಣ, 120 ಗ್ರಾಂ ಚಿನ್ನ ದರೋಡೆ ಮಾಡಿರುವಂತಹ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದಲ್ಲಿ ನಡೆದಿದೆ. ಚಂದ್ರಶೇಖರ್ ರಜಪೂತ ಗ್ರಾಮ ಪಂಚಾಯಿತಿ ಅಧ್ಯಕ್ಷ. ಮಧ್ಯರಾತ್ರಿ ಮನೆ ಬಾಗಿಲು ಬಡೆದು ದುಷ್ಕರ್ಮಿಗಳು ಒಳ ನುಗ್ಗಿದ್ದಾರೆ.  ಚಂದ್ರಶೇಖರ್ ಮತ್ತು ಪತ್ನಿ, ಸೊಸೆಯನ್ನ ಬೆಡ್ ರೂಮ್​ನಲ್ಲಿ ಕೂಡಿಹಾಕಿ ನಂತರ ದರೋಡೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪಿಡಿಓ ಆಗಿದ್ದ ಮಗ ಅಕಾಲಿಕ ಮರಣ ಹೊಂದಿದ್ದು, ಮಗನ ಸಾವು ಹಿನ್ನೆಲೆ ವಿಮೆ ಹಣವನ್ನು ಚಂದ್ರಶೇಖರ್​ ಮನೆಯಲ್ಲಿಟ್ಟಿದ್ದರು. ಸ್ಥಳಕ್ಕೆ ಎಎಸ್‌ಪಿ ಮಹಾನಿಂಗ ನಂದಗಾವಿ, ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಶುಂಠಿ ಬೆಳೆ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆ

ಮೈಸೂರು: ಜಿಲ್ಲೆಯಲ್ಲಿ ಕಳ್ಳರ ಗ್ಯಾಂಗ್ ಒಂದು ನಿರಂತರವಾಗಿ ಶುಂಠಿ ಬೆಳೆ ಕದ್ದು ಲಾರಿಯಲ್ಲಿ ಸಾಗಿಸಿರುವಂತಹ ಘಟನೆ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ. ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಕಳ್ಳರು ಶುಂಠಿ ಬೆಳೆ ಕದ್ದು ಸಾಗಾಟ ಮಾಡಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕಷ್ಟಪಟ್ಟು ಬೆಳೆದ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮತ್ತೊಂದೆಡೆ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಶುಂಠಿ ಬೆಳೆ ಕಳವು ಮಾಡಲಾಗುತ್ತಿದೆ. ಹೀಗಾಗಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ಇನ್ನು ಈ ಕುರಿತಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪಾರ್ಕ್ ಮಾಡಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ..!

ಆನೇಕಲ್: ಪಾರ್ಕ್ ಮಾಡಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವಂತಹ ಘಟನೆ ಆನೇಕಲ್​ನ ಹೆನ್ನಾಗರ ಗೇಟ್ ಬಳಿ ನಡೆದಿದೆ. ಬೆಂಗಳೂರಿನ ವೀರಭದ್ರನಗರ ನಿವಾಸಿ ಚೇತನ್ ಕುಮಾರ್ (35) ಮೃತಪಟ್ಟ ವ್ಯಕ್ತಿ. ನಾಲ್ಕೈದು ದಿನಗಳಿಂದ ಕಾರಿನಲ್ಲಿದ್ದ ಶವ, ವಾಸನೆ ಬಂದ ನಂತರ ವಿಚಾರ ಬೆಳಕಿಗೆ ಬಂದಿದೆ. ಹೆನ್ನಾಗರ ಗೇಟ್ ಬಳಿ ಚೇತನ್ ಕಾರು ನಿಲ್ಲಿಸಿದ್ದು, ಡ್ರೈವರ್ ಸೀಟಿನಲ್ಲೇ ಕೊತು ಕೊನೆಯುಸಿಳೆದಿದ್ದಾನೆ. ತಿರುಪತಿಗೆ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದ್ದು, ಮನೆಯವರು ತಿರುಪತಿ ಗೆ ಹೋಗಿದ್ದಾನೆ ಅಂತ ತಿಳಿದುಕೊಂಡಿದ್ದರು. ಇನ್ನು ವ್ಯಕ್ತಿ ಮಲಗಿರಬಹುದೆಂದು ಸ್ಥಳೀಯರು ಊಹಿಸಿದ್ದರು. ನಾಲ್ಕು ದಿನವಾದ್ರೂ ಕಾರು ಒಂದೇ ಕಡೆ ಪಾರ್ಕ್ ಆಗಿದ್ದು, ‌ ಈ ಹಿನ್ನೆಲೆ ಅನುಮನಗೊಂಡು ಸ್ಥಳೀಯರಿಂದ ಕಾರು ಪರಿಶೀಲನೆ ಮಾಡಲಾಗಿದೆ. ಡೋರ್ ತೆಗೆದ ಬಳಿಕ ಕೊಳೆತ ರೂಪದಲ್ಲಿ ಶವ ಪತ್ತೆಯಾಗಿದೆ.

ಕಾರಿನಿಂದ‌ ಶವ ಹೊರ ತೆಗೆದ ಹೆಬ್ಬಗೋಡಿ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆಗೆ‌ ಮೃತದೇಹ ರವಾನೆ ಮಾಡಿದ್ದಾರೆ. ಸಾವಿಗೆ ಕಾರಣ ಏನೆಂದು ಪೊಲೀಸರು ಪರಿಶೀಲಿಸುತ್ತಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

ಕುಖ್ಯಾತ ಸರಗಳ್ಳ ಸೈಯದ್ ಪರ್ವೇಜ್ ಬಂಧನ:

ಬೆಂಗಳೂರು: ಕುಖ್ಯಾತ ಸರಗಳ್ಳ ಸೈಯದ್ ಪರ್ವೇಜ್​ನನ್ನು​ ತಿಲಕ್​ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸೈಯದ್​ನಿಂದ 92 ಗ್ರಾಂ ತೂಕದ 2 ಚಿನ್ನದ ಸರಗಳು ವಶಕ್ಕೆ ಪಡೆಯಲಾಗಿದೆ. ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ಸರಗಳ್ಳತನ ಮಾಡುತ್ತಿದ್ದ. 36 ಸರಗಳ್ಳತನ ಪ್ರಕರಣದಲ್ಲಿ ಸೈಯದ್ ಪರ್ವೇಜ್ ಬೇಕಾಗಿದ್ದ. ತಿಲಕ್​ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:23 pm, Tue, 25 October 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್