AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love jihad: ನರ್ಸಿಂಗ್​ ಓದಿಕೊಂಡು ಕೆಲಸ ಮಾಡ್ತಾ ಮನೆಗೆ ಆಧಾರವಾಗಿದ್ದಳು! ಯಾವ ಮಾಯೆಯಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ?

ಆತ ಯಾರು, ಎನೂ ಅಂತಾ ವಿಚಾರಿಸಿದಾಗ ಈಕೆಯನ್ನ ಎರಡು ವರ್ಷದಿಂದ ಆತ ಪ್ರೀತಿಸುತ್ತಿದ್ದ ಅನ್ನೋದು ಗೊತ್ತಾಗಿದೆ. ಕೂಡಲೇ ತೇಜಸ್ವಿ ತಂದೆ ಗಂಗಪ್ಪಾ ಅವರಿಂದ 306 ಸೆಕ್ಷನ್ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆತನನ್ನ ನಿನ್ನೆ ಬುಧವಾರ ಬಂಧಿಸಿ ಜೈಲಿಗಟ್ಟಿದ್ದಾರೆ.

Love jihad: ನರ್ಸಿಂಗ್​ ಓದಿಕೊಂಡು ಕೆಲಸ ಮಾಡ್ತಾ ಮನೆಗೆ ಆಧಾರವಾಗಿದ್ದಳು! ಯಾವ ಮಾಯೆಯಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ?
ಯಾವ ಮಾಯದಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ? (ಆರೋಪಿ ಆಸಿಫ್)
TV9 Web
| Updated By: ಸಾಧು ಶ್ರೀನಾಥ್​|

Updated on: Feb 02, 2023 | 6:14 PM

Share

ಆತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಇಷ್ಟಾದರೂ ಎರಡು ವರ್ಷದಿಂದ ಅದೊಬ್ಬ ಯುವತಿಯ ಹಿಂದೆ ಬಿದ್ದು ಆಕೆಯನ್ನ ತನ್ನ ಪ್ರೀತಿಯ ಬುಟ್ಟಿಗೆ ಬೀಳಿಸಿಕೊಂಡಿದ್ದ. ಇದಾದ ಬಳಿಕ ಆಕೆಯ ಜತೆಗೆ ಅನ್ಯೋನ್ಯವಾಗ್ತಾ ಮದುವೆ ಆಗುವ ಮಟ್ಟಿಗೆ ಹೋಗಿ ಕೆಲ ದಿನಗಳ ಹಿಂದೆ ಮದುವೆ ಆಗಲ್ಲಾ ಅಂತಾ ಊಲ್ಟಾ ಹೊಡೆದಿದ್ದ. ಇದರಿಂದ ಮನನೊಂದ ಯುವತಿ ಸಾವಿನ ದಾರಿ ಹಿಡಿದಳಾ? ಯುವತಿಯ ಕುಟುಂಬಸ್ಥರ ಆರೋಪ ಎನು? ಇಷ್ಟಕ್ಕೂ ಲವ್ ಜಿಹಾದ್ (Love Jihad) ಆರೋಪ ಯಾಕೆ? ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಆಟ ಆಡ್ತಿದ್ದವನ ಅಸಲಿಯತ್ತೇನು? ಈ ಸ್ಟೋರಿ ನೋಡಿ… ಪೋಟೊದಲ್ಲಿರುವ ಚೆಂದುಳ್ಳಿ ಚೆಲುವೆಯ ಹೆಸರು ತೇಜಸ್ವಿನಿ ಗುಜ್ಜರ್ ಅಂತಾ, ವಯಸ್ಸು 21ವರ್ಷ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ (Belagavi, Athani) ತಾವಂಶಿ ಗ್ರಾಮದ ನಿವಾಸಿ. ಇನ್ನೂ ಕಾಲೇಜಿಗೆ ಹೋಗ್ತಾ ನರ್ಸಿಂಗ್ (Nursing) ಕೆಲಸ ಕೂಡ ಮಾಡುತ್ತಿದ್ದ ಈಕೆ ಜನವರಿ 26ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವಿಷ ಕುಡಿದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

ಇನ್ನು ಮಗಳು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳು ಅನ್ನೋದು ಕುಟುಂಬಸ್ಥರಿಗೆ ಗೊತ್ತಾಗದೇ ಸಂಕಷ್ಟದಲ್ಲಿದ್ದವರಿಗೆ ಪೊಲೀಸರು ಆಕೆಯ ಮೊಬೈಲ್ ನಲ್ಲಿ ಅದೊಬ್ಬ ಯುವಕನ ಫೋಟೋ ಇರುವುದನ್ನ ತೋರಿಸಿ ಇದು ಯಾರು ಅಂತಾ ಕೇಳಿದ್ದಾರೆ. ಈ ವೇಳೆ ತಮಗೆ ಎನೂ ಗೊತ್ತಿಲ್ಲಾ ಅಂತಾ ತೇಜಸ್ವಿನಿ ತಂದೆ ತಾಯಿ ಹೇಳಿದ್ದಾರೆ. ಇದಾದ ಬಳಿಕ ತನಿಖೆ ನಡೆಸಿದಾಗ ಆತ ಆಸಿಫ್ ದೇಸಾಯಿ ಎಂಬ ಹುಡುಗ ಎಂಬುದು ಗೊತ್ತಾಗಿದೆ.

ಆತ ಯಾರು, ಎನೂ ಅಂತಾ ವಿಚಾರಿಸಿದಾಗ ಈಕೆಯನ್ನ ಎರಡು ವರ್ಷದಿಂದ ಆತ ಪ್ರೀತಿಸುತ್ತಿದ್ದ ಅನ್ನೋದು ಗೊತ್ತಾಗಿದೆ. ಕೂಡಲೇ ತೇಜಸ್ವಿ ತಂದೆ ಗಂಗಪ್ಪಾ ಅವರಿಂದ 306 ಸೆಕ್ಷನ್ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆತನನ್ನ ನಿನ್ನೆ ಬುಧವಾರ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಆಕೆಯ ಸಾವಿಗೆ ಆಸಿಫ್ ಎಂಬಾತನೇ ಕಾರಣವಾಗಿದ್ದು ಆತನಿಗೆ ಕಠಿಣ ಶಿಕ್ಷೆ ಆಗಬೇಕು ಅಂತಾ ಯುವತಿಯ ತಂದೆ-ತಾಯಿ ಒತ್ತಾಯ ಮಾಡಿದ್ದಾರೆ.

ಅಷ್ಟಕ್ಕೂ ಈ ಆಸಿಫ್ ದೇಸಾಯಿ ಯಾರು ಅನ್ನೋದನ್ನ ನೋಡೊದಾದ್ರೇ ಈತ ಅಥಣಿ ಪಟ್ಟಣದ ನಿವಾಸಿಯಾಗಿದ್ದು ಎರಡು ವರ್ಷದ ಹಿಂದೆ ತೇಜಸ್ವಿನಿಯನ್ನು ತನ್ನ ಪ್ರೀತಿಯಲ್ಲಿ ಬೀಳಿಸಿಕೊಂಡು ಮೋಸ ಮಾಡಿದ್ದಾನೆ. ಮದುವೆ ಕೂಡ ಆಗಿರುವ ಈ ಆಸಿಫ್ ಗೆ ಈಗಾಗಲೇ ಒಂದು ಮಗು ಕೂಡ ಇದೆ. ಆದ್ರೇ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಜತೆಗೆ ಪ್ರೀತಿ ಪ್ರೇಮದ ಆಟವಾಡಿ ನಂತರ ಅವರನ್ನ ಮಧ್ಯದಲ್ಲೇ ಬಿಡುವ ಕೆಲಸವನ್ನ ಈತ ಮಾಡ್ತಿದ್ದಾನಂತೆ.

ಇನ್ನು ಈತನ ಮೇಲೆ ಹಾಫ್ ಮರ್ಡರ್ ಕೇಸ್ ಕೂಡ ಇದ್ದು ಜೈಲಿಗೆ ಹೋಗಿ ಬಂದು ಮತ್ತೆ ಹುಡುಗಿಯರ ಹಿಂದೆ ಬಿದ್ದು ಈ ರೀತಿ ಜೀವ ಬಲಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ತೇಜಸ್ವಿನಿ ಸಾವಿಗೆ ಕಾರಣ ಲವ್ ಜಿಹಾದ್ ಅನ್ನೋ ಅನುಮಾನ ಕಾಡುತ್ತಿದೆ. ಯಾಕಂದ್ರೇ ಆಸಿಫ್ ಎಂಬಾತ ಈಕೆಯೊಂದಿಗೆ ಲವ್ ನಾಟಕವಾಡಿ ಮದುವೆ ಆಗುತ್ತೇನೆ ಅಂತಾ ನಂಬಿಸಿ ಕೆಲ ದಿನಗಳ ಹಿಂದೆ ಕೈಕೊಟ್ಟಿದ್ದ. ಇದರಿಂದ ಮನನೊಂದಿದ್ದ ತೇಜಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಮುಸ್ಲಿಂ ಯುವಕನೇ ಕಾರಣವಾಗಿದ್ದು, ಏನೂ ಅರಿಯದ ಮಗಳಿಗೆ ಆತ ಮೋಸ ಮಾಡಿದ್ದು ನಮಗೆ ನ್ಯಾಯ ಕೊಡಿಸಿ ಅಂತಾ ಯುವತಿಯ ತಂದೆ ಮನವಿ ಮಾಡಿಕೊಳ್ತಿದ್ದಾರೆ.

ಒಟ್ಟಾರೆ ಓದಿನ ಜತೆಗೆ ಕೆಲಸ ಮಾಡಿಕೊಂಡು ತನ್ನ ಜೀವನ ಕಟ್ಟಿಕೊಳ್ಳುವುದರ ಜತೆಗೆ ಮನೆ ಕೂಡ ನಿರ್ವಹಣೆ ಮಾಡ್ತಿದ್ದ ಯುವತಿಯ ಬಾಳಲ್ಲಿ ಆಡಬಾರದ ಆಟ ಆಡಿ ಇದೀಗ ಆಕೆಯನ್ನೇ ಬಲಿ ಪಡೆದಿದ್ದಾನೆ. ಮಗಳನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡ್ತಿದ್ದಾರೆ. ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಅದೇನೆ ಇರಲಿ ಮದುವೆಯಾದ ಬಳಿಕವೂ ಯುವತಿಯ ಬಾಳಲ್ಲಿ ಆಟವಾಡುವ ಇಂತಹವರಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲವಾದ್ರೇ ಇನ್ನಷ್ಟು ಯುವತಿಯರ ಜೀವದಲ್ಲಿ ಚೆಲ್ಲಾಟವಾಡಿ ಬಲಿ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ಈತನಿಗೆ ತಕ್ಕ ಶಿಕ್ಷೆ ಕೊಡಿಸಲಿ.

ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ